ಶಿವಮೊಗ್ಗದಲ್ಲಿ ಮಕ್ಕಳಾಗಲು ಔಷಧ ಕೊಡ್ತೀವಿ ಅಂತಾ ಬಂದವರು ತಾಳಿ ಸರ ಕದ್ದೊಯ್ದರು

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಜನವರಿ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮಕ್ಕಳಾಗದಿರುವುದಕ್ಕೆ ಔಷಧ ಕೊಡುತ್ತೇವೆ ಎಂದು ನಂಬಿಸಿ, ಮಹಿಳೆಯೊಬ್ಬರ ತಾಳಿ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ.

AVvXsEgvkqR5na6VBgyQ7GpgkZA0SK3TnlX05prWtKfmX8meEFOtOAl

ಶಿವಮೊಗ್ಗದ ವೆಂಕಟೇಶನಗರದಲ್ಲಿ ಘಟನೆ ಸಂಭವಿಸಿದೆ. ಗೃಹಿಣಿಯೊಬ್ಬರಿಗೆ ಮಕ್ಕಳಾಗುವ ಔಷಧ ಕೊಡುತ್ತೇವೆ ಎಂದು ನಂಬಿಸಿ, ಇಬ್ಬರು ಅಪರಿಚಿತರು ದುಷ್ಕೃತ್ಯ ನಡೆಸಿದ್ದಾರೆ.

ಹೇಗಾಯ್ತು ಘಟನೆ?

ವೆಂಕಟೇಶನಗರದಲ್ಲಿ ಮನೆ ಬಳಿ ನೀರು ಹಿಡಿಯುತ್ತಿದ್ದ ಗೃಹಣಿಯನ್ನು ಇಬ್ಬರು ಅಪರಿಚಿತರು ಸಂಪರ್ಕಿಸಿದ್ದಾರೆ. ‘ತಮಗೆ ಮಕ್ಕಳಾಗದಿರುವ ಕುರಿತು ಆಶಾ ಕಾರ್ಯಕರ್ತೆ ತಿಳಿಸಿದ್ದಾರೆ. ನಾವು ಔಷಧ ಕೊಡಲು ಬಂದಿದ್ದೇವೆ’ ಎಂದು ತಿಳಿಸಿದ್ದಾರೆ. ಈ ವಿಚಾರವನ್ನು ಗೃಹಿಣಿ ತಮ್ಮ ಪತಿಗೆ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ಪತಿ, ತಮಗೆ ಯಾವುದೆ ಔಷಧ ಬೇಡ ಎಂದು ಇಬ್ಬರನ್ನು ಕಳುಹಿಸಿದ್ದಾರೆ.

ಔಷಧ ಕೊಡಲು ಮತ್ತೆ ಬಂದರು

ಪತಿ ಕೆಲಸಕ್ಕೆ ಹೋದ ಕೆಲವೇ ಹೊತ್ತಿಗೆ ಪುನಃ ಮನೆ ಬಳಿಗೆ ಬಂದ ಅಪರಿಚಿತರು, ಗೃಹಿಣಿಯನ್ನು ಒಪ್ಪಿಸಿದ್ದಾರೆ. ಔಷಧಕ್ಕೆ ಹಣ ಕೊಡುವುದು ಬೇಡ ಎಂದು ನಂಬಿಸಿದ್ದಾರೆ. ಮನೆಯೊಳಗೆ ಪ್ರವೇಶಿಸಿದ್ದಾರೆ. ಕುತ್ತಿಗೆ ಬಳಿ ಎಣ್ಣೆ ಹಚ್ಚಬೇಕಿದೆ. ಹಾಗಾಗಿ ಚಿನ್ನದ ಸರವನ್ನು ತೆಗೆದಿಡುವಂತೆ ಗೃಹಿಣಿಗೆ ತಿಳಿಸಿದ್ದಾರೆ.

Jayanagara Police Station 1

ಮಹಿಳೆ ಮಾಂಗಲ್ಯ ಸರವನ್ನು ತೆಗೆದು ಫ್ರಿಡ್ಜ್ ಮೇಲೆ ಇಟ್ಟಿದ್ದಾರೆ. ಇದನ್ನು ಗಮನಿಸಿದ ಕಳ್ಳರು, ಔಷಧ ನೀಡಲು ಬಿಸಿ ನೀರು ಬೇಕು ಎಂದು ಮನವಿ ಮಾಡಿದ್ದಾರೆ. ನೀರು ಕಾಯಿಸಲು ಗೃಹಿಣಿ ಅಡುಗೆ ಮನೆಗೆ ಹೋಗುತ್ತಿದ್ದಂತೆ, ಕಳ್ಳರು ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದಾರೆ.

ಮಹಿಳೆಯ ಕೊರಳಲ್ಲಿ ಎರಡು ಎಳೆ ಬಂಗಾರದ ಸರ, ಎರಡು ತಾಳಿ, ಒಂದು ಕಾಸು ಇತ್ತು. ಇದು 40 ಗ್ರಾಂ ತೂಗುತ್ತಿದ್ದು, ಅಂದಾಜು 1.20 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT ME DECEMBER REPORT

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment