ಶಿವಮೊಗ್ಗ: ಬಟ್ಟೆ ಅಂಗಡಿಯೊಂದರಲ್ಲಿ (clothing store) ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ವ್ಯಾನಿಟಿ ಬ್ಯಾಗ್ನ್ನು ಸುರಕ್ಷಿತವಾಗಿ ಗ್ರಾಹಕರಿಗೆ ತಲುಪಿಸಿದ ಅಂಗಡಿಯ ಕೆಲಸಗಾರರು ಮತ್ತು ಮಾಲೀಕರನ್ನು ಜಯನಗರ ಠಾಣೆಯಲ್ಲಿ ಸನ್ಮಾನಿಸಲಾಯಿತು.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಬೈಕ್ ನಂಬರ್ ಪ್ಲೇಟ್ಗೆ ಸ್ಟಿಕ್ಕರ್ ಅಂಟಿಸಿದ್ದರೂ ಬಿತ್ತು ಭಾರಿ ದಂಡ
ದುರ್ಗಿಗುಡಿಯ ನ್ಯೂ ಇತಿಹಾಸ್ ಕಲೆಕ್ಷನ್ ಬಟ್ಟೆ ಅಂಗಡಿಯಲ್ಲಿ ಗಾಯತ್ರಿ ಎಂಬುವವರು ತಮ್ಮ ವ್ಯಾನಿಟಿ ಬ್ಯಾಗ್ ಅನ್ನು ಮರೆತು ಹೋಗಿದ್ದರು. ಇದನ್ನು ಗಮನಿಸಿದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಾತಿ ಮತ್ತು ಸಂಗೀತಾ ವ್ಯಾನಿಟಿ ಬ್ಯಾಗ್ ಅನ್ನು ಅಂಗಡಿ ಮಾಲೀಕ ಮಾರ್ತಾಂಡ ಅವರಿಗೆ ನೀಡಿದ್ದರು.

ಈ ಬ್ಯಾಗ್ನಲ್ಲಿ ₹5 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಇತ್ತು. ಮಂಗಳವಾರ ಜಯನಗರ ಪೊಲೀಸ್ ಠಾಣೆಗೆ ಸ್ವಾತಿ, ಸಂಗೀತಾ ಹಾಗೂ ಮಾರ್ತಾಂಡ ಅವರು ಬಂದು ಪೊಲೀಸರ ಸಮಕ್ಷಮ ಬ್ಯಾಗ್ನ್ನು ಗಾಯತ್ರಿ ಅವರಿಗೆ ನೀಡಿದ್ದಾರೆ. ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ತೋರಿದ ಸ್ವಾತಿ, ಸಂಗೀತಾ ಹಾಗೂ ಮಾರ್ತಾಂಡ ಅವರನ್ನು ಠಾಣೆಯಲ್ಲಿ ಸನ್ಮಾನಿಸಲಾಯಿತು.
ಇದನ್ನೂ ಓದಿ









