ಶಿವಮೊಗ್ಗದಲ್ಲಿ ಮೂರು ದಿನ ನಾಟಕೋತ್ಸವ, ಯಾವೆಲ್ಲ ನಾಟಕ ಪ್ರದರ್ಶನವಾಗಲಿದೆ?

SHIVAMOGGA LIVE NEWS, 25 DECEMBER 2024

ಶಿವಮೊಗ್ಗ : ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಹೊಂಗಿರಣ ಸಂಸ್ಥೆ ವತಿಯಿಂದ ಕುವೆಂಪು ನಾಟಕೋತ್ಸವ (Drama Festival) ಆಯೋಜಿಸಲಾಗಿದೆ. ಡಿಸೆಂಬರ್‌ 27ರಿಂದ ಮೂರು ದಿನ ಕುವೆಂಪು ರಂಗಮಂದಿರದಲ್ಲಿ ಸಂಜೆ 6.30ಕ್ಕೆ ನಾಟಕಗಳು ಆರಂಭವಾಗಲಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಂಗಿರಣ ಸಂಸ್ಥೆಯ ಸಾಸ್ವೆಹಳ್ಳಿ ಸತೀಶ್‌, ಹೊಂಗಿರಣೋತ್ಸವದಲ್ಲಿ ಕುವೆಂಪು ನಾಟಕೋತ್ಸವ ನಡೆಯುತ್ತಿದೆ. ಕುವೆಂಪು ಅವರ ಶಿಷ್ಯ, ವಿಶ್ರಾಂತ ಪ್ರಚಾರ್ಯ ಪ್ರೊ. ಪಂಚಾಕ್ಷರಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೊಂಗಿರಣ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್‌ ಹಿರೇಗೋಣಿಗೆರೆ ಅಧ್ಯಕ್ಷತೆ ವಹಿಸಲಿದ್ದಾರೆ.

Kuvempu-Natakotsava-in-Shimoga-by-hongirana

ಉದ್ಘಾಟನಾ ಸಮಾರಂಭದಲ್ಲಿ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್.ಮಂಜುನಾಥ್‌, ಪ್ರಜಾವಾಣಿ ಪತ್ರಿಕೆಯ ಬೆಂಗಳೂರು ವರದಿಗಾರ ಚಂದ್ರಹಾಸ ಹಿರೇಮಳಲಿ, ಕನ್ನಡ ಮೀಡಿಯಂ ವಾಹಿನಿಯ ಸಂಪಾದಕ ಹೊನ್ನಾಳಿ ಚಂದ್ರಶೇಖರ್‌ ಅವರನ್ನು ಸನ್ಮಾನಿಸಲಾಗುತ್ತಿದೆ.

Kalleshwara-Enterprises.webp

ಸಾಸ್ವೆಹಳ್ಳಿ ಸತೀಶ್‌, ಹೊಂಗಿರಣ ಸಂಸ್ಥೆ

Kuvempu-Natakotsava-in-Shimoga-by-hongirana

RED-LINE-

ಮೂರ ದಿನ ಮೂರು ನಾಟಕ

ಡಿ.27ರಂದು ರಾವಣ ದರ್ಶನಂ ನಾಟಕ ಪ್ರದರ್ಶನವಾಗಲಿದೆ. ರಾಮಾಯಣ ದರ್ಶನಂ ಕೃತಿ ಆಧಾರಿತ ನಾಟಕದಲ್ಲಿ ರಾವಣ ಪಾತ್ರವನ್ನು ನಾಟಕ ಮಾಡಲಾಗುತ್ತದೆ. ಸಾಸ್ವೆಹಳ್ಳಿ ಸತೀಶ್‌ ಇದರ ನಿರ್ದೇಶನ ಮಾಡಿದ್ದಾರೆ.

1-lakh-views

ಡಿ.28ರಂದು ಬೊಮ್ಮನಹಳ್ಳಿಯ ಕಿಂದರಿ ಜೋಗಿ ನಾಟಕ ಪ್ರದರ್ಶನವಾಗಲಿದೆ. ಶೃತಿ ಆದರ್ಶ ಅವರು ಇದನ್ನು ನಿರ್ದೇಶಿಸಿದ್ದಾರೆ. ಆಯನೂರು ಭಾಗದ ಗ್ರಾಮೀಣ ಮಕ್ಕಳು ನಾಟಕದಲ್ಲಿ ಅಭಿನಯಿಸಿದ್ದಾರೆ.

ಡಿ.29ರಂದು ನನ್ನ ಗೋಪಾಲ ನಾಟಕ ಪ್ರದರ್ಶನವಾಗಲಿದೆ. ಸ್ವಾಸ್ವೆಹಳ್ಳಿ ಸತೀಶ್‌ ನಿರ್ದೇಶನ ಮಾಡಿದ್ದಾರೆ.

Kuvempu Natakotsava in Shimoga by hongirana Sasvehalli Satish

ಮೂರು ನಾಟಕಗಳಿಗೆ ಪ್ರವೇಶ ದರ 100 ರೂ. ನಿಗದಿಪಡಿಸಲಾಗಿದೆ. ಒಂದೇ ನಾಟಕಕ್ಕೆ 50 ರೂ. ಟಿಕೆಟ್‌ ದರ ಇರಲಿದೆ. ಡಿ.29ರಂದು ಸಮಾರೋಪ ಸಮಾರಂಭ ನಡೆಯಲಿದೆ. ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ.ಸಾಗರ ಸಮಾರೋಪ ನುಡಿ ನುಡಿಯಲಿದ್ದಾರೆ. ಶಿಕಾರಿಪುರದ ಅರಣ್ಯ ಸಂರಕ್ಷಕ ರೇವಣ ಸಿದ್ದಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಗುತ್ತದೆ.

ಸಾಸ್ವೆಹಳ್ಳಿ ಸತೀಶ್‌, ಹೊಂಗಿರಣ ಸಂಸ್ಥೆ

RED-LINE-

ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ರಾವ್ ಎಲ್ಲೂರ್, ವರುಣ್ ಸಿಂಗ್, ಗಣೇಶ ಸಹ್ಯಾದ್ರಿ, ಚಂದ್ರಶೇಖರ್ ಹಿರೇಗೋಣಿಗೆರೆ ಇದ್ದರು.

ಇದನ್ನೂ ಓದಿ » ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಸ್ವಲ್ಪ ಯಾಮಾರಿದರೆ ನಿಮ್ಮ ಪ್ರಾಣಕ್ಕೆ ಸಂಚಕಾರ ಫಿಕ್ಸ್‌

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment