ಶಿವಮೊಗ್ಗದಲ್ಲಿ ಆಯುಧ ಪೂಜೆ ಮುಗಿದ್ಮೇಲೆ ಟ್ಯಾಂಕರ್‌ ಸಿಂಗಾರ ಆರಂಭಿಸಿದ ಪಾಲಿಕೆ

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸೈನಿಕರ ಅಸಮಾಧಾನದ ಬಳಿಕ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಯುದ್ದ ಟ್ಯಾಂಕರ್‌ಗೆ (Tanker) ರಾತ್ರೋರಾತ್ರಿ ಹೂವಿನ ಅಲಂಕಾರ ಮಾಡಿ ಆಯುಧ ಪೂಜೆ ನಡೆಸಲಾಗಿದೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.

ಶಿವಮೊಗ್ಗದ ಫ್ರೀಡಂ ಪಾರ್ಕ್‌ ಆವರಣದಲ್ಲಿ ಟಿ-55 ಯುದ್ದ ಟ್ಯಾಂಕರ್‌ ಸ್ಥಾಪಿಸಲಾಗಿದೆ. ಇಂದು ಆಯುಧ ಪೂಜೆ ಸಂದರ್ಭ ಈ ಟ್ಯಾಂಕರ್‌ಗೆ ಮಹಾನಗರ ಪಾಲಿಕೆ ವತಿಯಿಂದ ಪೂಜೆ ನೆರವೇರಿಸದೆ ದಸರಾ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಇದು ಮಾಜಿ ಸೈನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸೈನಿಕರು ಪೋಸ್ಟ್‌ ಪ್ರಕಟಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇದಾದ ಬಳಿಕ ಆತುರಾತುರವಾಗಿ ರಾತ್ರಿ 9.30ರ ಹೊತ್ತಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಟ್ಯಾಂಕರ್‌ಗೆ ಹೂವಿನ ಅಲಂಕಾರ ಮಾಡಿಸಲು ಆರಂಭಿಸಿದ್ದಾರೆ. ಕೋಟ್ಯಂತರು ರುಪಾಯಿಯಲ್ಲಿ ಶಿವಮೊಗ್ಗ ದಸರಾ ನೆರವೇರಿಸಲಾಗುತ್ತಿದೆ. ಆದರೆ ಯುದ್ದ ಟ್ಯಾಂಕರ್‌ಗೆ ಪೂಜೆ ಮಾಡಿಸದಷ್ಟು ನಿರ್ಲಕ್ಷ್ಯ ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯ ಮತ್ತೊಂದು ರಸ್ತೆಯಲ್ಲಿ ಒನ್‌ ವೇ ಸಂಚಾರ, ಜಿಲ್ಲಾಧಿಕಾರಿ ಆದೇಶ

Kalleshwara-Enterprises.webp
war tanker memorial in Shimoga freedom park
ರಾತ್ರಿ 9 ಗಂಟೆಗೆ ಟಿ-55 ಯುದ್ದ ಟ್ಯಾಂಕರ್‌ ಹೀಗಿತ್ತು.
war tanker memorial in Shimoga freedom park
ರಾತ್ರಿ 9.30ಕ್ಕೆ ಪಾಲಿಕೆ ವತಿಯಿಂದ ಅಲಂಕಾರ.

war tanker memorial in Shimoga freedom park

Tanker

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment