ಬಸವನಗುಡಿಯಲ್ಲಿ ಮನೆ ಹೆಂಚು ತೆಗೆದು ದೇವರ ಕಾಣಿಗೆ ಹಣ, ಜಾಗಟೆ, ಆರತಿ ತಟ್ಟೆ, ಕೊಳಗ ಕಳ್ಳತನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 3 NOVEMBER 2023

SHIMOGA : ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೆಂಚು ತೆಗೆದು ದೇವರ ಹುಂಡಿಯಲ್ಲಿದ್ದ (Hundi) ಕಾಣಿಕೆ ಹಣ ಸೇರಿದಂತೆ ಸುಮಾರು 25 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

ಶಿವಮೊಗ್ಗದ ಬಸವನಗುಡಿಯಲ್ಲಿರುವ ನಿವೃತ್ತ ಉದ್ಯೋಗಿ ರೂಪೇಶ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅನಾರೋಗ್ಯ ಹಿನ್ನೆಲೆ ರೂಪೇಶ್‌ ಅವರು ಬೆಂಗಳೂರಿನಲ್ಲಿರುವ ತಮ್ಮ ಮಗನ ಮನೆಗೆ ಹೋಗಿದ್ದರು. ವಾಪಸ್‌ ಶಿವಮೊಗ್ಗದ ಮನೆಗೆ ಬಂದಾಗ ಹೆಂಚು ತೆಗೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ – ಪರಿಚಿತ ಅಂತಾ ಇನ್ನೋವಾ ಕಾರು ಕೊಟ್ಟರು, ಆಮೇಲೆ ಕಾರು ಇಲ್ಲ, ವ್ಯಕ್ತಿನೂ ಇಲ್ಲ, GPS ಚೆಕ್‌ ಮಾಡಿದಾಗ ಶಾಕ್

ದೇವರ ಹುಂಡಿಯಲ್ಲಿದ್ದ 6 ಸಾವಿರ ರೂ. ಕಾಣಿಕೆ ಹಣ, ತಾಮ್ರದ ಕೊಳಗ, ತಾಮ್ರದ ಪಾತ್ರೆಗಳು, ಜಾಗಟೆ, ಆರತಿ ತಟ್ಟೆಗಳು, ಟೇಬಲ್‌ ಫ್ಯಾನ್‌ ಸೇರಿದಂತೆ ಪಾತ್ರೆಗಳನ್ನು ಕಳ್ಳತನ ಮಾಡಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – SHIMOGA JOBS | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ, ಸ್ಟಾರ್‌ ಏರ್‌ನಿಂದ ನೇರ ಸಂದರ್ಶನ, ಯಾವಾಗ? ಎಲ್ಲಿ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment