ಇಡ್ಲಿ ಗಾಡಿಯಲ್ಲಿ ಗ್ರಾಹಕ ಬಿಟ್ಟು ಹೋದ ಬ್ಯಾಗ್‌ನಲ್ಲಿತ್ತು ₹1,00,000 ಹಣ, ಮುಂದೇನಾಯ್ತು?

Published On : ನವೆಂಬರ್ 10, 2025

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ಗ್ರಾಹಕರು ಬಿಟ್ಟು ಹೋಗಿದ್ದ ಇದ್ದ ಚೀಲವನ್ನು (Money) ಇಡ್ಲಿ ಗಾಡಿ ಮಾಲೀಕ ತಿರುಮೂರ್ತಿ ಅವರು ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ವಾಪಸ್ಸು ನೀಡಿದರು.

ಆನವಟ್ಟಿಯ ಮಧುಕೇಶವ್ ಅವರು ನ.4ರಂದು ಸಂಜೆ ಶಿವಮೊಗ್ಗಕ್ಕೆ ಬಂದು ಆಲ್ಗೊಳ ವೃತ್ತದಲ್ಲಿ ಇಡ್ಲಿಗಾಡಿಯಲ್ಲಿ ಉಪಹಾರ ಸೇವನೆಗೆ ಹೋಗಿದ್ದರು. ಉಪಹಾರ ಸೇವನೆ ಸಂದರ್ಭ ಗಾಡಿ ಮೇಲಿಟ್ಟಿದ್ದ ಚೀಲವನ್ನು ಮರೆತು ವಾಪಸ್ಸು ಹೋಗಿದ್ದರು. ತಿರುಮೂರ್ತಿ ಅವರು ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ₹1,00,000 ಹಣ ಇತ್ತು.

ಕೂಡಲೆ ಅವರು ತುಂಗಾನಗರ ಪೊಲೀಸ್ ಠಾಣೆಗೆ ತೆರಳಿ ಇನ್ಸ್‌ಪೆಕ್ಟ‌ರ್ ಕೆ.ಟಿ.ಗುರುರಾಜ ಅವರ ಸಮ್ಮುಖದಲ್ಲಿ ಒಪ್ಪಿಸಿದ್ದರು. ಮಧುಕೇಶವ್ ಅವರು ಮತ್ತೆ ಚೀಲ ಹುಡುಕಿಕೊಂಡು ಗಾಡಿ ಬಳಿ ಬಂದಾಗ ಅವರನ್ನು ಪೊಲೀಸ್ ‌ ಠಾಣೆಗೆ ಕರೆದೊಯ್ದು ಪೊಲೀಸರ ಸಮ್ಮುಖದಲ್ಲಿ ವಾಪಸ್ಸು ನೀಡಿದರು. ಮಧುಕೇಶವ್ ಅವರು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ತಮ್ಮ ಸ್ನೇಹಿತನ ಚಿಕಿತ್ಸೆಗೆ ಹಣ ಪಾವತಿಸುವ ಸಲುವಾಗಿ ಹಣ ತಂದಿದ್ದರಂತೆ. ತಿರುಮೂರ್ತಿ ಅವರ ಪ್ರಾಮಾಣಿಕತೆಗೆ ಇನ್ಸ್‌ಪೆಕ್ಟರ್ ಗುರುರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Idly-Stall-Owner-handed-over-the-money

ಇದನ್ನೂ ಓದಿ » ಮಹಿಳೆಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ರೆಡಿಯಾಗ್ತಿದೆ ಅಕ್ಕ ಪಡೆ, ನೀವು ಸೇರಬಹುದು, ಹೇಗೆ?

Money

ನಮ್ಮ ಸೋಶಿಯಲ್ ಮೀಡಿಯಾ ಗ್ರೂಪ್ ಸೇರಿ

JNN College of Engineering Admissions started

© ಶಿವಮೊಗ್ಗ ಲೈವ್‌ : ನವೆಂಬರ್ 10, 2025

Leave a Comment