ಶಿವಮೊಗ್ಗ: ನಗರದ ನವುಲೆ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಗೋವಾ ತಂಡಗಳ ನಡುವಿನ ರಣಜಿ ಪಂದ್ಯದಲ್ಲಿ (Ranji Cricket) ಕರುಣ್ ನಾಯರ್ ಶತಕ ಸಿಡಿಸಿದ್ದಾರೆ. ಎರಡನೇ ದಿನದ ಭೋಜನ ಅವಧಿಗು ಮುನ್ನ 101 ಓವರ್ಗಳಿಗೆ ಕರ್ನಾಟಕ ತಂಡ 8 ವಿಕೆಟ್ ಕಳೆದುಕೊಂಡು 336 ರನ್ ಗಳಿಸಿದೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಕರ್ನಾಟಕಕ್ಕೆ ಆರಂಭಿಕ ಆಘಾತ
ಶನಿವಾರ 69 ಓವರ್ಗೆ ಕರ್ನಾಟಕ ತಂಡ 5 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿತ್ತು. ಇವತ್ತು ಕರುಣ್ ನಾಯರ್ ಮತ್ತು ಶ್ರೇಯಸ್ ಗೋಪಾಲ್ ಉತ್ತಮ ಓಪನಿಂಗ್ ನೀಡಿದರು. 77ನೇ ಓವರ್ನಲ್ಲಿ ವಿಜೇಶ್ ಪ್ರಭುದೇಸಾಯಿ ಬೌಲಿಂಗ್ನಲ್ಲಿ ಶ್ರೇಯಸ್ ಗೋಪಾಲ್, ಸ್ನೇಹಲ್ ಕೌತಾನ್ಕರ್ಗೆ ಕ್ಯಾಚ್ ನೀಡಿದರು. ಇದು ಕರ್ನಾಟಕ ತಂಡಕ್ಕೆ ಎರಡನೇ ದಿನದ ಆರಂಭಿಕ ಆಘಾತ ಉಂಟು ಮಾಡಿತು. ಇನ್ನು 88ನೇ ಓವರ್ನಲ್ಲಿ ಯಶೋವರ್ಧನ್ (14 ರನ್) ಕ್ಯಾಚ್ ನೀಡಿ ಪೆವಿಲಿಯನ್ಗೆ ಮರಳಿದರು. 99ನೇ ಓವರ್ನಲ್ಲಿ ವೈಶಾಕ್ (31 ರನ್) ಎಲ್ಬಿಡ್ಲು ಆಗಿ ಕ್ರೀಸ್ನಿಂದ ಹೊರ ನಡೆದರು.
ಕರುಣ್ ನಾಯರ್ ಶತಕ

ಶನಿವಾರ 86 ರನ್ ಗಳಿಸಿದ್ದ ಕರುಣ್ ನಾಯಕರ್ ಇವತ್ತು ಶತಕ ಸಿಡಿಸಿದರು. ಭೋಜನ ವಿರಾಮದ ಹೊತ್ತಿಗೆ ಕರುಣ್ ನಾಯರ್ 137 ರನ್ ಗಳಿಸಿದ್ದಾರೆ. ನವುಲೆಯ ಕ್ರೀಡಾಂಗಣದಲ್ಲಿ 2017ರಲ್ಲಿ ಕರ್ನಾಟಕ ಮತ್ತು ಹೈದರಾಬಾದ್ ನಡುವಿನ ರಣಜಿ ಪಂದ್ಯದಲ್ಲಿಯು ಕರ್ನಾಟಕದ ತಂಡದ ಕರುಣ್ ನಾಯರ್ ಶತಕ ಸಿಡಿಸಿದ್ದರು. ಆ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 23 ರನ್, ಎರಡನೇ ಇನ್ನಿಂಗ್ಸ್ನಲ್ಲಿ 134 ರನ್ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದರು.
ಇದನ್ನೂ ಓದಿ » ಮಾಜಿ MLAಯನ್ನು ಕೆಳಗೆ ಉರುಳಿಸಿದ ಹೋರಿ, ವಿಡಿಯೋ ವೈರಲ್
LATEST NEWS
- ಶಿವಮೊಗ್ಗಕ್ಕೆ ಡಿಜಿಪಿ ಅಲೋಕ್ ಕುಮಾರ್, ಕೇಂದ್ರ ಕಾರಾಗೃಹಕ್ಕೆ ಭೇಟಿ

- ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿದ ವ್ಯಕ್ತಿ ಸಾವು, ಎರಡು ಭಾಗವಾದ ದೇಹ

- ಒಂದು ಮೆಸೇಜ್, ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ₹6.50 ಲಕ್ಷ ಮಾಯ, ಏನಿತ್ತು ಮೆಸೇಜ್ನಲ್ಲಿ?

- ಸಂಸದ ರಾಘವೇಂದ್ರ ಕಾರಿಗೆ ಮತ್ತೊಂದು ಕಾರು ಡಿಕ್ಕಿ, ಆಗಿದ್ದೇನು?

- ಅರಬಿಳಚಿ ದುರಂತ, ಭದ್ರಾ ನಾಲೆಯಲ್ಲಿ ಎರಡನೇ ಮೃತದೇಹ ಪತ್ತೆ

About The Editor
ನಿತಿನ್ ಆರ್.ಕೈದೊಟ್ಲು





