ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಅವರ ಕಚೇರಿಯನ್ನು (Office) ಆರ್ಎಸ್ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ಉದ್ಗಾಟಿಸಿದರು. ವಿನೋಬನಗರದ 60 ಅಡಿ ರಸ್ತೆಯಲ್ಲಿರುವ ಮಹಾನಗರ ಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ ಜನಪರ ಜೀವಪರ ಕಚೇರಿ ಸ್ಥಾಪಿಸಲಾಗಿದೆ.
ಇದೇ ವೇಳೆ ಸಂಸದ ಬಿ.ವೈ.ರಾಘವೇಂದ್ರ ಕಾಯಕ ಸೇತು ವೆಬ್ಸೈಟ್ ಲೋಕಾರ್ಪಣೆ ಮಾಡಿದರು. ಡಾ. ಧನಂಜಯ ಸರ್ಜಿ ಅವರ ವರ್ಷಾವಧಿಯ ಫಲಶ್ರುತಿ ಕಾಯಕಯೋಗಿ ಕಿರುಹೊತ್ತಿಗೆಯನ್ನು ಶಾಸಕ ಎಸ್.ಎಸ್.ಚನ್ನಬಸಪ್ಪ ಬಿಡುಗಡೆ ಮಾಡಿದರು.
ಡಾ. ಧನಂಜಯ ಸರ್ಜಿ ನೂತನ ಕಚೇರಿ ಪ್ರಾರಂಭಿಸಿದ್ದಾರೆ. ಕಚೇರಿ ಕ್ರಿಯಾಶೀಲವಾಗಿ ಕೆಲಸ ಮಾಡಲಿ. ಉದ್ಯೋಗದಾತರು, ಉದ್ಯೋಗ ಅರಸುವವರಿಗೆ ಅನುಕೂಲವಾಗಲಿದೆ. ಇದು ಪವಿತ್ರವಾದ ಕೆಲಸ. ಇದು ಜಿಲ್ಲೆಗೂ ಶಕ್ತಿ ನೀಡಲಿದೆ.
- ಬಿ.ವೈ.ರಾಘವೇಂದ್ರ, ಸಂಸದ
![]()
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಮುಖರಾದ ಎಸ್.ದತ್ತಾತ್ರಿ, ರುದ್ರಪ್ಪ ಸರ್ಜಿ ಸೇರಿ ಹಲವರು ಇದ್ದರು.




ಇದನ್ನೂ ಓದಿ » ಶಿವಮೊಗ್ಗದಲ್ಲಿ ಪಟಾಕಿ ಮಾರಾಟ ಶುರು, ಹೇಗಿದೆ ಡಿಮಾಂಡ್?
Office

