ಶಿವಮೊಗ್ಗದಲ್ಲಿ ಶ್ರದ್ಧಾಭಕ್ತಿಯಿಂದ ಮೊಹರಂ ಆಚರಣೆ, ಕೆಂಡ ಹಾಯ್ದು ಭಕ್ತಿ ಸಮರ್ಪಣೆ

ಶಿವಮೊಗ್ಗ: ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ನಗರದಲ್ಲಿ ಇಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ನಗರದ ರಾಮಣ್ಣಶ್ರೇಷ್ಠಿ ಪಾರ್ಕ್ ಬಳಿ ಮುಸ್ಲಿಂ ಸಮುದಾಯದವರು ಕೆಂಡ ಹಾಯುವುದರ ಮೂಲಕ ಭಕ್ತಿ ಸಮರ್ಪಿಸಿದರು. ಹರಕೆ ಹೊತ್ತವರು ಹಾಗೂ ಭಕ್ತರು ಕೆಂಡದ ಹೊಂಡದಲ್ಲಿ ನಡೆದು ಸಾಗಿದ ದೃಶ್ಯ ಈ ಬಾರಿಯ ಆಚರಣೆಯ ಪ್ರಮುಖ ಆಕರ್ಷಣೆಯಾಗಿತ್ತು. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಇದಕ್ಕೂ ಮುನ್ನ ನಗರದ ವಿವಿಧ ಬಡಾವಣೆಗಳಿಂದ ಹೂವುಗಳಿಂದ ಅಲಂಕೃತಗೊಂಡ ತಬೂತ್‌ಗಳನ್ನು ಮೆರವಣಿಗೆಯ ಮೂಲಕ ತಲೆಯ ಮೇಲೆ ಹೊತ್ತುಕೊಂಡು ತರಲಾಯಿತು. ಇನ್ನು, ಹಬ್ಬದ ಹಿನ್ನೆಲೆ ವಿವಿಧೆಡೆ ಬಂದೋಬಸ್ತ್‌ ನಿಯೋಜನೆ ಮಾಡಲಾಗಿತ್ತು.

Moharam-celebration-in-Shimoga

ವಿದ್ಯಾನಗರದಲ್ಲಿಯು ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಬಿ.ಹೆಚ್‌.ರಸ್ತೆ ಪಕ್ಕದಲ್ಲಿರುವ ಶ್ರದ್ಧಾ ಕೇಂದ್ರದಲ್ಲಿ ಈ ಭಾಗದ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ನೆರವೇರಿಸಿದರು. ಇನ್ನು, ಜಿಲ್ಲೆಯ ವಿವಿಧೆಡೆಯು ಮೊಹರಂ ಹಬ್ಬ ಆಚರಿಸಲಾಯಿತು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಕಾರುಗಳಿಗೆ 30 ಪ್ರಮುಖ ಚೆಕಪ್‌ ಉಚಿತ, ಜುಲೈ 8ರವರೆಗೆ ಹಲವು ಆಫರ್‌, ಎಲ್ಲಿ? ಏನೇನೆಲ್ಲ ಆಫರ್‌ಗಳಿವೆ?