ಗಂಟಲಲ್ಲಿ ಸಿಲುಕಿದ ಚಿಕನ್‌ ಮೂಳೆ, ಆಪರೇಷನ್‌ ಮಾಡದೆ ಪಾರು ಮಾಡಿದ ಶಿವಮೊಗ್ಗದ ಡಾಕ್ಟರ್‌ಗಳು, ಹೇಗದು?

ಶಿವಮೊಗ್ಗ: ಚಿಕನ್‌ ಮೂಳೆ (Chicken Bone) ಗಂಟಲಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಗೆ ತಲುಪಿದ್ದ 70 ವರ್ಷದ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಶಿವಮೊಗ್ಗದ ವೈದ್ಯರು ಅಪಾಯದಿಂದ ಪಾರು ಮಾಡಿದ್ದಾರೆ. ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಈಗ ಸಂಪೂರ್ಣ ಗುಣವಾಗಿದ್ದಾರೆ.

ಗಂಟಲಲ್ಲಿ ಸಿಲುಕಿದ್ದ ಚಿಕನ್‌ ಮೂಳೆ

ಶಿವಮೊಗ್ಗದ ವ್ಯಕ್ತಿಯೊಬ್ಬರು (ವೈದ್ಯಕೀಯ ಕಾರಣಕ್ಕೆ ಹೆಸರು ಗೌಪ್ಯ) ಊಟ ಮಾಡುವಾಗ ಚಿಕನ್‌ ಮೂಳೆ ಗಂಟಲಿನಲ್ಲಿ ಸಿಲುಕಿತ್ತು. ಇದರಿಂದ ತೀವ್ರ ಉಸಿರಾಟದ ಸಮಸ್ಯೆಯಾಗಿತ್ತು. ಕೂಡಲೆ ಅವರನ್ನು ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅನ್ನನಾಳವನ್ನೇ ಡ್ಯಾಮೇಜ್‌ ಮಾಡಿತ್ತು

ವೈದ್ಯರು ಪರೀಕ್ಷಿಸಿದಾಗ ಚಿಕನ್‌ ಮೂಳೆ ಆ ವ್ಯಕ್ತಿಯ ಅನ್ನನಾಳದಲ್ಲಿ ರಂಧ್ರ ಮಾಡಿತ್ತು. ಗಾಳಿ ಮತ್ತು ದ್ರವವು ಎದೆಗೂಡಿಗೆ ಸೋರಿಕೆ ಆಗುತ್ತಿರುವುದು ಗೊತ್ತಾಗಿತ್ತು. ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಡಾ. ಶಿವಕುಮಾರ್‌ ಅವರ ನೇತೃತ್ವದಲ್ಲಿ ಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಇಲ್ಲದೆ ಲೇಸರ್‌ ಮತ್ತು ಎಂಡೋಸ್ಕೋಪಿಕ್‌ ತಂತ್ರಜ್ಞಾನ ಬಳಸಿ ಮೂಳೆಯನ್ನು ಹೊರ ತೆಗೆದಿದ್ದಾರೆ.

Shimoga-NH-Hospital-Doctors-and-staff - Chicken Bone

ವೈದ್ಯರು ಹೇಳಿದ್ದೇನು? ಇಲ್ಲಿದೆ ಪ್ರಮುಖ ಸಲಹೆ

ಈ ಪ್ರಕರಣದ ಕುರಿತು ಮಾಹಿತಿ ನೀಡಿರುವ ಡಾ. ಶಿವಕುಮಾರ್‌, ಶಸ್ತ್ರಚಿಕಿತ್ಸೆ ನಡೆಸಿದರೆ ರೋಗಿಗೆ ಮತ್ತಷ್ಟು ಅಪಾಯದ ಸಾದ್ಯತೆ ಇತ್ತು. ಆದ್ದರಿಂದ ಆಧುನಿಕ ಎಂಡೋಸ್ಕೋಪಿಕ್‌ ವಿಧಾನದ ಮೂಲಕ ಸಾಮಾನ್ಯ ಅನಸ್ತೇಷಿಯಾ ಬಳಸಿ ಮೂಳೆಯನ್ನು ಸಣ್ಣ ತುಂಡುಗಳಾಗಿ ಮಾಡಿ ಹೊರತೆಗೆದಿದ್ದೇವೆ. ಲೋಹದ ಕ್ಲಿಪ್‌ ಬಳಸಿ ಅನ್ನನಾಳದ ರಂ‍ಧ್ರ ಮುಚ್ಚಿದ್ದೇವೆ ಎಂದು ತಿಳಿಸಿದ್ದಾರೆ.

Kalleshwara-Enterprises.webp

JNNCE-Admission-Advt-scaled

ಇದು ಅತ್ಯಂತ ಸವಾಲಿನ ಪ್ರಕರಣ. ಸೋಂಕು ಮತ್ತು ಉಸಿರಾಟ ವೈಫಲ್ಯದ ಅಪಾಯವಿತ್ತು. ಆದರೆ ತುರ್ತು ಚಿಕಿತ್ಸೆಯಿಂದಾಗಿ ರೋಗಿ ಕೇವಲ ನಾಲ್ಕು ದಿನದಲ್ಲಿ ಗುಣವಾಗಿದ್ದಾರೆ.

  • ಡಾ. ಶಿವಕುಮಾರ್‌, ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್‌

RED-LINE-

ಊಟದ ಸಂದರ್ಭ ಗಮನ ಬೇರೆಡೆ ಹರಿಸಬಾರದು. ಟಿವಿ ನೋಡುವುದು, ಮೊಬೈಲ್‌ ವೀಕ್ಷಿಸುತ್ತ ಊಟ ಮಾಡುವುದರಿಂದ ಸಮಸ್ಯೆಗಳಾಗುತ್ತವೆ. ಸಣ್ಣ ತಪ್ಪು ಆಪತ್ತು ತರಬಹುದು ಎಂದು ಡಾ. ಶಿವಕುಮಾರ್‌ ಎಚ್ಚರಿಸಿದ್ದಾರೆ.

ತಂತ್ರಜ್ಞಾನ, ನಿಪುಣತೆ, ವಿವಿಧ ವಿಭಾಗಗಳ ಸಮನ್ವಯದಿಂದ ಇಂತಹ ಅಪರೂಪದ ಪ್ರಕರಣವನ್ನು ಸುಲಲಿತವಾಗಿ ಬಗೆಹರಿಸಿದ್ದೇವೆ.

  • ವರ್ಗೀಸ್‌ ಪಿ.ಜಾನ್‌, ವ್ಯವಸ್ಥಾಪಕ ನಿರ್ದೇಶಕ, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

RED-LINE-

ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಡಾ. ಶಿವಕುಮಾರ್‌ ಅವರ ತಂಡದಲ್ಲಿ ಗ್ಯಾಸ್ಟ್ರೋಎಂಟರಾಲಜಿಸ್ಟ್‌ ಡಾ ಸುಮೇಶ ನಾಯರ್‌, ಡಾ ಪೂಜಾ ಕೃಷ್ಣಪ್ಪ ಇದ್ದರು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ಮೇಯಲು ಹೋಗಿದ್ದ 38 ಕುರಿಗಳು ದಿಢೀರ್‌ ಸಾವು, ಏನಿದು ಪ್ರಕರಣ?

Chicken Bone 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment