ಕೋವಿಡ್ ಡ್ಯೂಟಿ ಮಾಡುತ್ತಲೇ ಕರೋನಾಗೆ ಬಲಿ, ಆದರೂ ಇವರು ವಾರಿಯರ್ ಅಲ್ಲ, ಕುಟುಂಬಕ್ಕೆ ಪರಿಹಾರವು ಇಲ್ಲ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

119060214 954258745054036 6933822829653446782 o.jpg? nc cat=105& nc sid=110474& nc ohc=jztG790PCawAX8gAOuD& nc ht=scontent.fixe1 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಅಕ್ಟೋಬರ್ 2020

ಕರೋನದಿಂದ ಮೃತಪಟ್ಟ ನೂರಕ್ಕೂ ಹೆಚ್ಚು ಜನರ ದಹನ ಮಾಡಿದ್ದರು. ಕೊನೆಗೆ ಅದೆ ಕಾಯಿಲೆಗೆ ತುತ್ತಾಗಿ ಮೃತಪಟ್ಟರು. ಆದರೆ ಆತನನ್ನು ಕರೋನ ವಾರಿಯರ್ ಎಂದು ಒಪ್ಪುತ್ತಿಲ್ಲ ಸರ್ಕಾರ.

ಇದು ಶಿವಮೊಗ್ಗದ ಪಾಪನಾಯ್ಕ ಅವರ ದುರಂತ ಕಥೆ. ಅನಿಲ ಚಿತಾಗಾರದ ಹೊರಗುತ್ತಿಗೆ ನೌಕರರಾಗಿದ್ದರು ಪಾಪನಾಯ್ಕ. ಸುಮಾರು ಒಂದು ವರ್ಷದಿಂದ ಈ ಕೆಲಸ ಮಾಡುತ್ತಿದ್ದರು. ಇದೆ ಕೆಲಸದಲ್ಲಿದ್ದಾಗ ಕರೋನಾಗೆ ತುತ್ತಾಗಿ ಮೃತರಾದರು.

122428090 983860098760567 2816976454692017560 n.jpg? nc cat=108& nc sid=8024bb& nc ohc=SiPKieh1mQMAX H6SoY& nc ht=scontent.fblr1 4

ಕರೋನ ಡ್ಯೂಟಿ ವೇಳೆ ಸೋಂಕು

ಕರೋನ ಶುರುವಾದಾಗಿನಿಂದ ಪಾಪನಾಯ್ಕ ಅವರದ್ದು ‘ಕರೋನ ಡ್ಯೂಟಿ’ ಎಂದು ಪರಿಗಣಿಸಲಾಯಿತು. ಈ ಮಾರಕ ಕಾಯಿಲೆಗೆ ತುತ್ತಾಗಿ ಯಾರೆ ಮೃತಪಟ್ಟರು ದಹನ ಕಾರ್ಯದ ಜವಾಬ್ದಾರಿ ಪಾಪನಾಯ್ಕ ಅವರ ಹೆಗಲಿಗೆ ಬೀಳುತ್ತಿತ್ತು. ಇತರೆ ಕರೋನ ವಾರಿಯರ್‍ಗಳ ರೀತಿ ಇದು ಕೂಡ ಮಹತ್ವದ ಜವಾಬ್ದಾರಿ. ಹಗಲು, ರಾತ್ರಿ ಎನ್ನದೆ ಡ್ಯೂಟಿ ಮಾಡುವ ಜರೂರು ಇತ್ತು. ಹೀಗೆ ಕೆಲಸ ನಿರ್ವಹಿಸುತ್ತಲೇ ಪಾಪನಾಯ್ಕ ಅವರಿಗೆ ಸೋಂಕು ತಗುಲಿತು.

VIDEO REPORT 

ಬಲಿ ಪಡೆದ ಮಹಾಮಾರಿ ಕಾಯಿಲೆ

ಕೆಲ ಸಮಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೆ ಅದ್ಯಾಕೋ ಚಿಕಿತ್ಸೆ ಸರಿ ಕಾಣಗಲಿಲ್ಲ. ಹೋಂ ಕ್ವಾರಂಟೈನ್ ಆದರು. ಆದರೆ ಉಲ್ಬಣಿಸಿದ್ದ ಕಾಯಿಲೆ, ಪಾಪನಾಯ್ಕ ಅವರನ್ನು ಬಲಿ ಪಡೆಯಿತು. ಸೆಪ್ಟೆಂಬರ್ 13ರಂದು ಪಾಪ ನಾಯ್ಕ ಅವರು ಮೃತರಾದರು.

ಕರೋನ ವಾರಿಯರ್ ಅಲ್ಲ

ಕರೋನ ಸೋಂಕಿನಿಂದ ಮೃತರಾದವರನ್ನು ದಹಿಸುತ್ತಿದ್ದರು ಪಾಪನಾಯ್ಕ. ಮಹಾನಗರ ಪಾಲಿಕೆಯಿಂದಲೇ ಈ ಕೆಲಸಕ್ಕೆ ಅವರನ್ನು ನಿಯೋಜಿಸಲಾಗಿತ್ತು. ಆದರೆ ಈಗ ಪಾಪನಾಯ್ಕ ಅವರು ಕರೋನ ವಾರಿಯರ್ ಅಲ್ಲ ಅಂತಾ ಹೇಳಲಾಗುತ್ತಿದೆ. ಇದೆ ಕಾರಣಕ್ಕೆ ಅವರಿಗೆ ಸರ್ಕಾರದ ಪರಿಹಾರವು ಲಭಿಸುತ್ತಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನುವುದೇ ಇದಕ್ಕೆಲ್ಲ ಕಾರಣ. ಖಾಯಂ ನೌಕರರಾಗಿದ್ದರಷ್ಟೇ ಕರೋನ ವಾರಿಯರ್ ಎಂದು ಸರ್ಕಾರ ಪರಿಗಣಿಸುತ್ತದಂತೆ.

122336553 983106055502638 6844548172344119085 n.jpg? nc cat=107& nc sid=110474& nc ohc=JrLgAWzRixQAX9XQ8JM& nc ht=scontent.fblr11 1

ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ ಮಡದಿ

ಪಾಪನಾಯ್ಕ ಶಿವಮೊಗ್ಗ ತಾಲೂಕಿನ ಹೊಸಮನೆ ತಾಂಡದ ವಾಸಿ. ಅಲ್ಲಿಯೇ ಪುಟ್ಟದೊಂದು ಮನೆ. ಜಮೀನು, ತೋಟ ಯಾವುದು ಇಲ್ಲ. ಬರುವ ಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟವಿತ್ತು. ಇಬ್ಬರು ಮಕ್ಕಳಿದ್ದರು. ಅದರೆ ವಿಧಿ ಅದೆಷ್ಟು ಕ್ರೂರಿಯಾಗಿತ್ತು ಅಂದರೆ, ಇಬ್ಬರು ಮಕ್ಕಳು ಯಾವುದೋ ಕಾಯಿಲೆಗಳಿಂದ ಮೃತರಾದರು. ಪಾಪನಾಯ್ಕ ಅವರು ಕೊನೆಯುಸಿರೆಳೆಯುವ ಒಂದು ತಿಂಗಳು ಮೊದಲು ಒಂದು ಮಗು ಮೃತಪಟ್ಟಿದೆ. ಈಗ ಪಾಪನಾಯ್ಕ ಅವರೂ ಇಲ್ಲದೆ ಮಡದಿ ಸವಿತಾ ಒಬ್ಬಂಟಿಯಾಗಿದ್ದಾರೆ. ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಸಣ್ಣದೊಂದು ಪರಿಹಾರ, ಕೆಲಸದ ಭರವಸೆ

ಕರೋನ ವಾರಿಯರ್‍ಗಳು ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 30 ಲಕ್ಷ ರೂ. ಪರಿಹಾರ ಲಭಿಸಲಿದೆ. ಅಲ್ಲದೆ ಕರೋನ ವಾರಿಯರ್ ಎಂದು ಗುರುತಿಸಲಾಗುತ್ತದೆ. ಈವರೆಗೆ ಮೃತರಾದ ವೈದ್ಯರು, ಪೊಲೀಸರು, ಇತರೆ ಸಿಬ್ಬಂದಿಗಳಿಗೆ ಸರ್ಕಾರ ಪರಿಹಾರ ನೀಡಿದೆ. ಆದರೆ ಎಲ್ಲರಂತೆ ಕೋವಿಡ್ ಡ್ಯೂಟಿ ಮಾಡಿದ್ದ ಪಾಪನಾಯ್ಕ ಅವರನ್ನು ಹೊರಗುತ್ತಿಗೆ ನೌಕರ ಎಂಬ ಕಾರಣಕ್ಕೆ ಕರೋನ ವಾರಿಯರ್ ಎಂದು ಪರಿಗಣಿಸಿಲ್ಲ. ಹಾಗಾಗಿ ಪರಿಹಾರವು ಇಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ 3 ಲಕ್ಷ ರೂ. ಪರಿಹಾರದ ಭರವಸೆ ನೀಡಲಾಗಿದೆ. ಸವಿತಾ ಅವರಿಗೆ ಒಂದು ಹೊರ ಗುತ್ತಿಗೆ ನೌಕರಿಯ ಭರವಸೆಯನ್ನೂ ನೀಡಲಾಗಿದೆ.

ವಿಶೇಷ ಪ್ರಕರಣ ಎಂದೇಕೆ ಪರಿಗಣಿಸುತ್ತಿಲ್ಲ?

ಪಾಪನಾಯ್ಕ ಅವರು ಕೋವಿಡ್ ಡ್ಯೂಟಿಯಲ್ಲಿ ತೊಡಗಿಸಿಕೊಂಡಿದ್ದರು. ಕೋವಿಡ್ ಸೋಂಕಿನಿಂದ ಮೃತಪಟ್ಟ ನೂರಕ್ಕೂ ಹೆಚ್ಚು ಜನರ ದಹನ ಮಾಡಿದ್ದರು. ಇದಕ್ಕೆಲ್ಲ ಪಾಲಿಕೆ ಬಳಿಯೇ ಆಧಾರವಿದೆ. ಹಾಗಿದ್ದೂ, ವಿಶೇಷ ಪ್ರಕರಣ ಎಂದು ಪರಿಗಣಿಸಿ, ಪಾಪನಾಯ್ಕ ಅವರನ್ನು ಕರೋನ ವಾರಿಯರ್ ಎಂದು ಘೋಷಿಸಿ, ಕುಟುಂಬಕ್ಕೆ ಪರಿಹಾರ ನೀಡಬೇಕಿದೆ.

122569515 985496425263601 186764312706410466 o.jpg? nc cat=109&ccb=2& nc sid=110474& nc ohc=ULbZk K2k6gAX Vx3dX& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 31, 2020

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

Leave a Comment