ಶಿವಮೊಗ್ಗ: ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಹಾಗೂ ಪೊಲೀಸ್ ಗೋಚರತೆ ಹೆಚ್ಚಿಸಲು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ SAF (Special Action Force) ತುಕಡಿ ಪೊಲೀಸರು ರೂಟ್ ಮಾರ್ಚ್ (route march) ನಡೆಸಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮಾರಿಕಾಂಬ ದೇವಸ್ಥಾನ, ಅಶೋಕ ರಸ್ತೆ, ಎಸ್.ಪಿ.ಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್ ಮೂಲಕ ಸಾಗಿತು. ತಿರುಪಲಯ್ಯನ ಕೇರಿ, ಲಷ್ಕರ್ ಮೊಹಲ್ಲಾ ಸರ್ಕಲ್, ಗಲೀಬ್ ಸಾಬ್ ರಸ್ತೆ, ಲಷ್ಕರ್ ಮೊಹಲ್ಲಾ ಮಸೀದಿ ಸೇರಿದಂತೆ ಯಲಕಪ್ಪನ ಕೇರಿ, ಅಲೆಮಾನ ಕೇರಿ ಮತ್ತು ವಜ್ರ ಮಹಲ್ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸಲಾಯಿತು.

ಇದನ್ನೂ ಓದಿ – ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್, 19 ಅಕೌಂಟ್, 25 ATM ಕಾರ್ಡ್, ₹55 ಕೋಟಿ ನಷ್ಟ, ಏನಿದು ಕೇಸ್?








