ಶಿವಮೊಗ್ಗದ ತುಂಗಾ ನದಿ ಹೊಸ ಸೇತುವೆ ಮೇಲೆ ಬಾಯ್ತೆರೆದು ಕೂತಿದ್ದಾನೆ ಯಮ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ನವೆಂಬರ್ 2021

ಸ್ಮಾರ್ಟ್ ಸಿಟಿ ಶಿವಮೊಗ್ಗದಲ್ಲಿ ಗುಂಡಿಗಳಿಗೇನು ಕಡಿಮೆಯಿಲ್ಲ. ಯೋಜನೆ ವ್ಯಾಪ್ತಿಯ ವಾರ್ಡ್’ಗಳಲ್ಲಿ ಎಣಿಸಲಾಗದಷ್ಟು ಗುಂಡಿಗಳಿವೆ. ಕೆಲವು ಕಡೆಯಂತೂ ಗುಂಡಿಗಳ ಮಧ್ಯೆ ರಸ್ತೆ ಇದೆಯೋ, ರಸ್ತೆಯಲ್ಲಿ ಗುಂಡಿಗಳಿವೆಯೋ ಅನ್ನುವುದೆ ಗೊಂದಲ. ಯೋಜನೆ ವ್ಯಾಪ್ತಿಯ ಹೊರಗಿರುವ ವಾರ್ಡುಗಳಲ್ಲೂ ಇದೇ ಪರಿಸ್ಥಿತಿ. ಅದಕ್ಕೆ ಸಾಕ್ಷಿ ತುಂಗಾ ನದಿ ಹೊಸ ಸೇತುವೆ ಮೇಲಿನ ಸ್ಥಿತಿ.

ತುಂಗಾ ನದಿಯ ಹೊಸ ಸೇತುವೆ ಗುಂಡಿಯಮಯವಾಗಿದೆ. ಈ ಸೇತುವೆ ಮೇಲೆ ವಾಹನ ಚಲಾಯಿಸುವವರು ಗುಂಡಿ ತಪ್ಪಿಸಲು ಹೋಗಿ ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುವ ಆತಂಕವಿದೆ.

AVvXsEg7D64eppM2Y2YXBDC80Q2TdBmP2uvjR kzBF IPI

ಗಡಿ ಆಂಜನೇಯನಿಗೆ ಕೈ ಮಗಿದೇ ಬರಬೇಕು

ಸೇತುವೆ ಮೇಲೆ ಒಂದಕ್ಕಿಂತಲೂ ಒಂದು ಭಯಾನಕ ಗುಂಡಿಗಳಿವೆ. ದ್ವಿಚಕ್ರ ವಾಹನ ಸವಾರರ ಪಾಲಿಗಂತಲೂ ಕೆಲವು ಗುಂಡಿಗಳು ಯಮಸ್ವರೂಪಿಯಾಗಿವೆ. ‘ಸೇತುವೆ ಮೇಲೆ ಗಾಡಿ ತೆಗೆದುಕೊಂಡು ಹೋಗುವವರನ್ನು ಪಕ್ಕದಲ್ಲಿರುವ ಗಡಿ ಆಂಜನೇಯ ಸ್ವಾಮಿಯೇ ಕಾಪಾಡಬೇಕು. ಗುಂಡಿ ತಪ್ಪಿಸಿಕೊಂಡು ಹೋಗುವುದು ಬಹಳ ಕಷ್ಟಕರವಾಗಿದೆ’ ಅಂತಾರೆ ಗೂಡ್ಸ್ ವಾಹನ ಚಾಲಕ ರಾಜೇಂದ್ರ.

ಅಪಘಾತ ತಪ್ಪಿಸುವುದೇ ಕಷ್ಟ

ಬಸ್ಸು, ಲಾರಿ, ಗೂಡ್ಸ್ ವಾಹನಗಳನ್ನು ಹಳೆ ಸೇತುವೆ ಮೇಲೆ ಬಿಡುವುದಿಲ್ಲ. ಹಾಗಾಗಿ ವಿದ್ಯಾನಗರ ಕಡೆಯಿಂದ ಬರುವ ಭಾರಿ ವಾಹನಗಳು ನೇರವಾಗಿ ಹೊಸ ಸೇತುವೆಗೆ ನುಗ್ಗುತ್ತವೆ. ಇತ್ತ ಬೆಕ್ಕಿನಕಲ್ಮಠ ಕಡೆಯಿಂದ ವಿದ್ಯಾನಗರ ಕಡೆಗೆ ಬರುವ ವಾಹನಗಳು ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಸ್ವಲ್ಪ ಬಲ ಭಾಗಕ್ಕೆ ಬಂದರೂ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆದುಕೊಳ್ಳುತ್ತವೆ.

ಸೇತುವೆ ಮಧ್ಯದಲ್ಲಿ ಯಮನೆ ಕಾದು ಕೂತಿದ್ದಾನೆ

ಸೇತುವೆ ಮಧ್ಯಭಾಗದಲ್ಲಿ ಭಾರಿ ಗಾತ್ರದ ಗುಂಡಿ ಇದೆ. ಬಸ್ಸು, ಲಾರಿ ಹೊರತು ಉಳಿದೆಲ್ಲ ವಾಹನ ಸವಾರರ ಪಾಲಿಗೆ ಈ ಗುಂಡಿ ಸಾಕ್ಷಾತ್ ಯಮನೆ ಬಾಯ್ತೆರೆದು ಕುಳಿತಂತೆ ಗೋಚರಿಸುತ್ತದೆ. ಸೇತುವೆ ಮಧ್ಯದಲ್ಲಿ ರಸ್ತೆ ಚನ್ನಾಗಿದೆ ಎಂದು ವಾಹನದ ವೇಗ ಹೆಚ್ಚಿಸುವ ಹೊತ್ತಿಗೆ ಈ ಗುಂಡಿ ಪ್ರತ್ಯಕ್ಷವಾಗಲಿದೆ. ಇದನ್ನು ತಪ್ಪಿಸಲು ವಾಹನವನ್ನು ಅತ್ತಿತ್ತ ತಿರುಗಿಸಲು ಹೋದರೆ ಅಪಘಾತ ಕಟ್ಟಿಟ್ಟ ಬುತ್ತಿ. ಈಗಾಗಲೇ ಈ ಗುಂಡಿಯ ದಿಸೆಯಿಂದ ಹಲವರು ಗಾಯಗೊಂಡಿದ್ದಾರೆ.

ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ರಸ್ತೆಗಳಲ್ಲಿ ಗುಂಡಿಗಳಾಗಿವೆ. ಆದರೆ ಯೋಜನೆ ವ್ಯಾಪ್ತಿಯ ಹೊರಗಿರುವ ವಾರ್ಡುಗಳು, ಅಲ್ಲಿನ ಮುಖ್ಯ ರಸ್ತೆಗಳಲ್ಲೂ ಇದೇ ಪರಿಸ್ಥಿತಿ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗುಂಡಿಗಳಿಂದ ಜನರ ಜೀವಕ್ಕೆ ಗಂಡಾಂತರ ಎದುರಾಗುವ ಮೊದಲು ಇವುಗಳಿಗೆ ಮುಕ್ತಿ ನೀಡುವತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ಚಿಂತಿಸಬೇಕಿದೆ.

AVvXsEj0MikBRmITelWNpIT3JSQ6LSkxoNurDjvgo8Qmujk PHi284fBdvrU3h4e5uBSdfb8zg8f0JmSV1VmRIQqzcZR1LA8LeuAI2DDGIU1WBiYMU7C85 hqDZgNZVhtW0RpSMb7GjfPT AFCEBfGyAKTTsjx dla9TUmKf7OynwmA CMz4GZgTTT7mBzSHg=s926

AVvXsEiv6X7qfYL1 FvRPJrG14 HhWVY3RfIyD9Nx1XanJMLHVWiWJyPx3Lea EZv4wrst1pv3tZ5esOWjW D6TFm2dxkgr2G 3frZTDUDzI

AVvXsEhBVsIuxHWNYwE5DApDKOFfvALY46wMEAhFFhzCPBJiSRYQgNOz6EY7DK JXRxnwcsKgI9nyz 6OehCZ0iwmYfcYaDedave6d4o50x

AVvXsEhqBqNOmszbcJ9UWVpw7bOMacQWHBBNFC5toMz6fRB6zeQWjlq7L6LXwg1n7dQ5UP7n kG2Gdty0IBNRVqYyQO8FnapgnbAGM95b6GjsZK3qSBbFseAbPo3IBF7PeEQYJw5LSAKDzFNPurYNkimgUVWVuQ4c2w2EpOnISH7vJz

AVvXsEiZUe fWyHlDlKRTDfUZCrmfyDWxwG BPmFtOJMmIvWvbkY9 MK0nLjdOTRSPIG14m0mFslQZRPOfQ3f4QCrRDlKlZ2imt9PBE3QF5Wq8IIe4lot5SryWER4NI9LmdEmbROAMrzgKBkia HYIoB6WsGj8SMwHIVn4AcZaU09gJ4YIP4ItPSyWDlg0Y2MQ=s926

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : November 14, 2021

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

Leave a Comment