ಶಿವಮೊಗ್ಗದಲ್ಲಿ ಬೀದಿಗಿಳಿದ ಉದ್ಯಮಿಗಳು, ಕಾರ್ಮಿಕರು, ಡಿಸಿ ಕಚೇರಿ ಮುಂದೆ ಭೂಪಾಳಂ ಕುಟುಂಬದ ಕಣ್ಣೀರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 JANUARY 2023

SHIMOGA : ಅಗ್ನಿಶಾಮಕ ಸಿಬ್ಬಂದಿಯ ನಿರ್ಲಕ್ಷ್ಯವೆ ಉದ್ಯಮಿ (Business Man) ಶರತ್ ಭೂಪಾಳಂ ಸಾವಿಗೆ ಕಾರಣ ಎಂದು ಆರೋಪಿಸಿ ಉದ್ಯಮಿಗಳು, ಭೂಪಾಳಂ ಕುಟುಂಬದ ಸ್ನೇಹಿತರು, ಕಾರ್ಮಿಕರು ಮೆರವಣಿಗೆ ನಡೆಸಿದರು.

Sharath-Bhoopalam-Family-Protest-in-front-of-DC-office

ಜಿಲ್ಲಾ ಪಂಚಾಯಿತಿ ಎದುರಿನ ಭೂಪಾಳಂ ನಿವಾಸದಿಂದ ದುರ್ಗಿಗುಡಿ, ಗೋಪಿ ಸರ್ಕಲ್, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.

ಉದ್ಯಮಿ ಶರತ್ ಫೋಟೊದೊಂದಿಗೆ ಮೆರವಣಿಗೆ

ಅಗ್ನಿ ಅವಘಡದಲ್ಲಿ ಮೃತಪಟ್ಟ ಉದ್ಯಮಿ (Business Man) ಶರತ್ ಭೂಪಾಳಂ ಅವರ ಭಾವಚಿತ್ರವನ್ನು ಹಿಡಿದುಕೊಂಡು ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಹಾದಿ ಉದ್ದಕ್ಕೂ ಶರತ್ ಭೂಪಾಳಂ ಸಾವಿಗೆ ಅಗ್ನಿಶಾಮಕ ಸಿಬ್ಬಂದಿಯ ನಿರ್ಲಕ್ಷ್ಯವೆ ಕಾರಣೆ ಎಂದು ಆಪಾದಿಸಿ, ನ್ಯಾಯಕ್ಕಾಗಿ ಅಗ್ರಹಿಸಿ ಘೋಷಣೆ ಕೂಗಲಾಯಿತು.

business man bhoopalam procession

ಡಿಸಿ ಕಚೇರಿ ಮುಂದೆ ಪ್ರತಿಭಟನೆ

ಇನ್ನು, ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಶಿಧರ್ ಭೂಪಾಳಂ ಅವರು, ತಮ್ಮ ಮಗನ ಸಾವಿಗೆ ಅಗ್ನಿಶಾಮಕ ಸಿಬ್ಬಂದಿಯ ನಿರ್ಲಕ್ಷ್ಯ ಪ್ರಮುಖ ಕಾರಣ ಎಂದು ವಿವರಿಸಿದರು.

‘ಅಗ್ನಿಶಾಮಕ ದಳದ ವಾಹನದಲ್ಲಿ 500 ರೂ. ಟಾರ್ಚ್, 800 ರೂ. ಮೌಲ್ಯದ ಮಾಸ್ಕ್ ಇದ್ದಿದ್ದರೆ ನನ್ನ ಮಗನನ್ನು ಉಳಿಸಿಕೊಳ್ಳಬಹುದಾಗಿತ್ತು. ಮೊದಲು ಬಂದ ವಾಹನದಲ್ಲಿ ಇದ್ಯಾವುದು ಇರಲಿಲ್ಲ. ಡಿ.ಎಸ್.ಅರುಣ್ ಅವರು ಕರೆ ಮಾಡಿದ ಮೇಲೆ ಎರಡನೇ ವಾಹನ ಬಂತು. ಅದರಲ್ಲಿ ಎಲ್ಲಾ ಉಪಕರಣಗಳಿದ್ದವು. ಸಾಮಾನ್ಯರು ಕರೆ ಮಾಡಿದರೆ ಒಂದು ಅಗ್ನಿಶಾಮಕ ವಾಹನ, ಗಣ್ಯರು, ರಾಜಕಾರಣಿಗಳು, ಅಧಿಕಾರಿಗಳು ಕರೆ ಮಾಡಿದರೆ ಒಂದು ವಾಹನ ಕಳುಹಿಸುವ ವ್ಯವಸ್ಥೆ ಇದೆಯಾ?’ಶಶಿಧರ್ ಭೂಪಾಳಂ, ಉದ್ಯಮಿ ಶರತ್ ಭೂಪಾಳಂ ತಂದೆ

Shimoga Live News 3 million views

ಅಗ್ನಿಶಾಮಕ ಇಲಾಖೆಯಲ್ಲಿ ಎಲ್ಲಾ ಉಪಕರಣಗಳಿವೆ. ಆದರೆ ಅವುಗಳನ್ನ ಬಳಕೆ ಮಾಡದೆ ಹಾಗೆ ಇಟ್ಟುಕೊಂಡಿದ್ದಾರೆ. ಅವುಗಳ ಬಳಕೆಗೆ ಕ್ರಮ ಕೈಗೊಳ್ಳಬೇಕು ಎಂದು ಶರತ್ ಭೂಪಾಳಂ ಅವರ ಕುಟುಂಬ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

Bhoopalam Protest

ವಿವಿಧ ಸಂಘಟನೆಗಳ ಬೆಂಬಲ

ಮೆರವಣಿಗೆಯಲ್ಲಿ ಐಕ್ಯ ಮಹಿಳಾ ಸಂಘ, ಮಾಚೇನಹಳ್ಳಿ ಇಂಡಸ್ಟ್ರಿಯಲ್ ಅಸೋಸಿಯೇಷನ್, ಸಾಗರ ಇಂಡಸ್ಟ್ರಿಯಲ್ ಎಸ್ಟೇಟ್ ಅಸೋಸಿಯೇಷನ್, ಆರ್ಯ ವೈಶ್ಯ ಶ್ರೀರಾಮ ಸಹಕಾರ ಸಂಘ, ಆರ್ಯ ವೈಶ್ಯ ಬಡಾವಣೆ ದೇವಸ್ಥಾನ ಸಮಿತಿ, ಆರ್ಯ ವೈಶ್ಯ ಮಹಾಜನ ಸಮಿತಿ, ಅಡಕೆ ಮಂಡಿ ವರ್ತಕರ ಸಂಘ, ಶಿವಮೊಗ್ಗ ರೌಂಡ್ ಟೇಬಲ್, ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ಎನ್.ಇ.ಎಸ್. ಶಿಕ್ಷಣ ಸಂಸ್ಥೆ, ಶ್ರೀನಿಧಿ ಸಮೂಹ, ಗಾಂಧಿ ಬಜಾರ್ ವರ್ತಕರ ಸಂಘ, ಚಿನ್ನ ಬಳ್ಳಿ ವರ್ತಕರ ಸಂಘ, ಜವಳಿ ವರ್ತಕರ ಸಂಘ, ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್, ಜಿಲ್ಲಾ ಒಕ್ಕಲಿಗರ ಸಂಘ, ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ, ಕಲ್ಲೂರು ಮಂಡಲಿ ಇಂಡಸ್ಟ್ರಿಯಲ್ ಏರಿಯಾ ಅಸೋಸಿಯೇಷನ್.

Bhoopalam Protest

ಎಂಐಎ ಫೌಂಡರಿ ಕ್ಲಸ್ಟರ್, ಕಂಟ್ರಿ ಕ್ಲಬ್, ರೋಟರಿ ಕ್ಲಬ್, ಇನ್ನರ್ ವ್ಹೀಲ್, ಕನ್ನಿಕಾ ಮಹಿಳಾ ಸಂಘ, ವಾಸವಿ ಮಹಿಳಾ ಸಂಘ, ವಾಸವಿ ಯುವ ಜನ ಸಂಘ, ಐಸಿರಿ ಮಹಿಳಾ ಸಂಘ, ಗೆಳತಿ ಮಹಿಳಾ ಸಂಘ, ಶಾರದಾ ಮಹಿಳಾ ಸಂಘ, ಎಲೈಟ್ ಲೇಡಿಸ್ ಕ್ಲಬ್, ಶಿವಮೊಗ್ಗ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.

ಇದನ್ನೂ ಓದಿ – ಉದ್ಯಮಿ ಭೂಪಾಳಂ ಮನೆಯಲ್ಲಿ ಬೆಂಕಿ ಕೇಸ್, ಅಗ್ನಿಶಾಮಕ ವಿರುದ್ಧ ‘ಆರೋಪ ಪಟ್ಟಿ’ ರಿಲೀಸ್

Bhoopalam Protest

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment