ಶಿವಮೊಗ್ಗದ ಮಂಡ್ಲಿ ದೇವಸ್ಥಾನಕ್ಕೆ ರಂಭಾಪುರ ಶ್ರೀ ಭೂಮಿ ಪೂಜೆ, ಏನೆಲ್ಲ ಆಶೀರ್ವಚನ ನೀಡಿದರು?

ಶಿವಮೊಗ್ಗ: ಮಂಡ್ಲಿಯ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಶಿಲಾ ದೇಗುಲ ಕಟ್ಟಡದ ಭೂಮಿಪೂಜೆ ಮತ್ತು ಧರ್ಮ ಜಾಗೃತಿ ಕಾರ್ಯಕ್ರಮಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ (seer) ಚಾಲನೆ ನೀಡಿದರು.

‍ರಂಭಾಪುರ ಶ್ರೀ ಏನೆಲ್ಲ ಹೇಳಿದರು?

Point 1 F1F1F1ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳು ಜಾಗೃತಿ ಮೂಡಿಸುವ ಆಧ್ಯಾತ್ಮ ಕೇಂದ್ರಗಳು. ಭಾವೈಕ್ಯ ಮತ್ತು ಸಂಸ್ಕೃತಿಯ ಸಂವರ್ಧನೆಗೆ ಇವು ಸ್ಫೂರ್ತಿಯ ಸೆಲೆ ಆಗಿವೆ.

Rambapuri-Swamiji-at-mandli-in-Shimoga-city

Point 2 F1F1F1ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಶಾಶ್ವತ. ಮನುಷ್ಯನಿಗೆ ಅರಿವು-ಮರೆವು ಎರಡೂ ಇವೆ. ಅರಿವನ್ನು ಜಾಗೃತಗೊಳಿಸಲು ದೇವಸ್ಥಾನಗಳು ಅವಶ್ಯಕ.

SLV-BOOK-SHOP-SHIMOGA

Point 3 F1F1F1ಕ್ರಿಯಾತ್ಮಕವಾದ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸಲು ಸಾಧ್ಯ. ಮೂಲ ನಂಬಿಕೆಗಳನ್ನು ಮೂಢನಂಬಿಕೆಯೆಂದು ತಿಳಿಯದೇ ಅವುಗಳ ವಿಶಾಲ ಅರ್ಥ ತಿಳಿಯಲು ಪ್ರಯತ್ನ ಮಾಡಬೇಕಾಗಿದೆ. ತನಗಾಗಿ ಬಯಸುವುದು ಜೀವ ಗುಣ. ಎಲ್ಲರಿಗಾಗಿ ಬಯಸುವುದು ದೇವ ಗುಣವೆಂದು ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

Rambapuri-Swamiji-at-mandli-in-Shimoga-city

ವೀರಭದ್ರೇಶ್ವರ ಸ್ವಾಮಿಯ ಲೀಲಾ ಪವಾಡ ಅನಂತ. ವೀರಶೈವರ ಆರಾಧ್ಯ ದೇವನಾಗಿ ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಪೂಜೆಗೊಳ್ಳುತ್ತಿದ್ದಾನೆ.ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಹೊನ್ನಾಳಿ ಹಿರೇಕಲ್ಮಠ

JNNCE-ADMISSION-2025-26

ಸಮಾರಂಭದಲ್ಲಿ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ದಿಂಡದಹಳ್ಳಿ ಪಶುಪತಿ ಶಿವಾಚಾರ್ಯರು, ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯರು, ಮಳಲಿ ಮಠದ ನಾಗಭೂಷಣ ಶಿವಾಚಾರ್ಯರು, ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.

ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಹೆಚ್.ವಿ. ಮಹೇಶ್ವರಪ್ಪ, ಸ್ವಾಗತ ಸಮಿತಿ ಸದಸ್ಯ ದಿವಾಕರ್, ಶಾಂತಾ ಆನಂದ ಇದ್ದರು.

Rambapuri-Swamiji-at-mandli-in-Shimoga-city

ಇದನ್ನೂ ಓದಿ » ವಿಶ್ವದಲ್ಲೆ ಮೊದಲ ಬಾರಿ, ಶಿವಮೊಗ್ಗದಲ್ಲಿ 1404 ಮಂದಿಯಿಂದ ವಚನ ಗಾಯನ, ಹೇಗಿತ್ತು? ಇಲ್ಲಿದೆ ಫೋಟೊ ಆಲ್ಬಂ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
Rambapuri-Swamiji-at-mandli-in-Shimoga-city
ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 12, 2025 at 9:30 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 12, 2025

Leave a Comment