ಶಿವಮೊಗ್ಗ : ಆಡಳಿತಾತ್ಮಕ ಹಿತದೃಷ್ಟಿ ಮತ್ತು ಸಾರ್ವಜನಿಕ ಸ್ನೇಹಿಯಾಗಿ ಸೇವೆ ಒದಗಿಸಲು ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಮೂರು ವಿಭಾಗಗಳಾಗಿ (Divisions) ವಿಂಗಡಿಸಲಾಗಿದೆ. ಇವತ್ತಿನಿಂದಲೇ ವಲಯ ಕಚೇರಿಗಳು ಕಾರ್ಯಾರಂಭ ಮಾಡಲಿವೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಉತ್ತರ, ದಕ್ಷಿಣ ಮತ್ತು ಕೇಂದ್ರ ವಲಯ ಎಂದು ವಿಂಗಡಿಸಲಾಗಿದೆ. ಮೂರು ವಿಭಾಗಕ್ಕು ಪ್ರತ್ಯೇಕವಾಗಿ ಕಚೇರಿಗಳನ್ನು ಸ್ಥಾಪಿಸಲಾಗಿದೆ.
ಎಲ್ಲೆಲ್ಲಿ ಮೂರು ಕಚೇರಿ ಸ್ಥಾಪನೆ?
ವಲಯ 1 : ವಿನೋಬನಗರದ ಶುಭಮಂಗಳ ಕಲ್ಯಾಣ ಮಂದಿರದ ಬಳಿ ಪಾಲಿಕೆ ಕಟ್ಟಡದಲ್ಲಿ ಉತ್ತರ ವಲಯ ಕಚೇರಿ.

ವಲಯ 2 : ಗೋಪಿ ವೃತ್ತದ ಬಳಿ ಪಾಲಿಕೆಗೆ ಸೇರಿದ ದೇವರಾಜ ಅರಸು ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯಲ್ಲಿ ಕೇಂದ್ರ ವಲಯ ಕಚೇರಿ ಸ್ಥಾಪಿಸಲಾಗಿದೆ.
ವಲಯ 3 : ಇಮಾಮ್ ಬಾಡಾ ಬಳಿ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿಪಡಿಸಲಾದ ಕಟ್ಟಡದಲ್ಲಿ ದಕ್ಷಿಣ ವಲಯ ಕಚೇರಿ.
ಕಚೇರಿಗಳ ವಿಂಗಡಣೆಗೆ ಕಾರಣವೇನು?
ಈವರೆಗೆ ಮಹಾನಗರ ಪಾಲಿಕೆ ಆಡಳಿತವು ಕೇಂದ್ರಿಕೃತವಾಗಿತ್ತು. ಶಿವಮೊಗ್ಗದ ಪಾಲಿಕೆ ಕಚೇರಿಯಲ್ಲಿಯೇ ಕೆಲಸ ಕಾರ್ಯ ನಡೆಯುತ್ತಿತ್ತು. ಇದರಿಂದ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಿತ್ತು. ಅಲ್ಲದೆ ಸಾರ್ವಜನಿಕರು ಕೂಡ ದೂರದ ಬಡಾವಣೆಗಳಿಂದ ಪಾಲಿಕೆಗೆ ಬರಬೇಕಿತ್ತು. ಇದೆ ಕಾರಣಕ್ಕೆ ವಲಯ ಕಚೇರಿಗಳನ್ನು ಆರಂಭಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಈಗ ಮೂರು ವಲಯಗಳನ್ನು (Divisions) ವಿಂಗಡಿಸಿ, ಕಚೇರಿ ಆರಂಭಿಸಲಾಗಿದೆ.

ಕಮಿಷನರ್ ನೇತೃತ್ವದಲ್ಲಿ ವಿಂಗಡಣೆ
ಮಹಾನಗರ ಪಾಲಿಕೆ ಕಮಿಷನರ್ ಕವಿತಾ ಯೋಗಪ್ಪನವರ್ ಅವರ ಆಡಳಿತಾವಧಿಯಲ್ಲಿ ಪಾಲಿಕೆ ಕಚೇರಿಯನ್ನು ವಿಂಗಡಿಸಲಾಗಿದೆ. ಹಲವು ಬಾರಿ ಒತ್ತಡ ಕೇಳಿ ಬಂದ ಹಿನ್ನೆಲೆ ಸಾಧಕ, ಬಾಧಕಗಳನ್ನು ಪರಿಶೀಲಿಸಿ ವಿಂಗಡಿಸಲು (Divisions) ಅನುಮತಿಸಿದ್ದಾರೆ.
ವಲಯವಾರು ವಿಂಗಡನೆಗೆ ಕಾನೂನಿನಲ್ಲಿ ಅವಕಾಶವಿದೆ. ಈಗಿನ ಮಹಾನಗರ ಪಾಲಿಕೆಯಲ್ಲಿ ಎಲ್ಲ ಸೇವೆಗಳು ಕೇಂದ್ರೀಕೃತವಾಗಿವೆ. ವಲಯ ವಿಂಗಡನೆಯಿಂದ ಜನರ ಅಲೆದಾಟ ತಪ್ಪಲಿದೆ.
– ಡಾ. ಕವಿತಾ ಯೋಗಪ್ಪನವರ್, ಮಹಾನಗರ ಪಾಲಿಕೆ ಕಮಿಷನರ್
ಈ ಕಚೇರಿಗಳಲ್ಲಿ ಏನೆಲ್ಲ ಸೇವೆ ಲಭ್ಯ?
ವಲಯ ಕಚೇರಿಗಳಲ್ಲಿ ಕಂದಾಯ ಪಾವತಿ, ಎಂಜಿನಿಯರಿಂಗ್ ಸೇರಿದಂತೆ ಹಲವು ವಿಭಾಗದ ಸೇವೆಗಳು ಸ್ಥಳೀಯವಾಗಿ ಸಾರ್ವಜನಿಕರಿಗೆ ಸಿಗಲಿವೆ. ಈ ಕಚೇರಿಗಳಿಗೆ ಪಾಲಿಕೆಯ ಕಂದಾಯ ಅಧಿಕಾರಿಗಳೆ ಉಸ್ತುವಾರಿಯಾಗಿ ಕೆಲಸ ಮಾಡಲಿದ್ದಾರೆ.

ಪ್ರತಿ ವಲಯಕ್ಕು ಕಂದಾಯಾಧಿಕಾರಿ, ಸಹಾಯಕ ಕಂದಾಯಾಧಿಕಾರಿ, ಶಾಖಾ ವ್ಯವಸ್ಥಾಪಕ, ರಾಜಸ್ವ ನಿರೀಕ್ಷಕರು, ವಿಷಯ ನಿರ್ವಾಹಕರು, ಕರ ವಸೂಲಿಗಾರರನ್ನು ನೇಮಿಸಲಾಗಿದೆ. ಪ್ರತಿ ವಲಯದಲ್ಲಿ ವಾರ್ಡ್ಗಳ ಸಂಖ್ಯೆಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಕೆಲಸಕ್ಕೆ ನಿಯೋಜಿಸಲಾಗಿದೆ.
ಇದನ್ನೂ ಓದಿ » ಧಗಧಗ ಹೊತ್ತಿ ಉರಿಯಲಿದೆ ಗಾಂಧಿ ಪಾರ್ಕ್, ಕೆಲವರಿಗಿದು ಓಪನ್ ಬಾರ್, ಹೇಗಿದೆ ಒಳಗಿನ ಸ್ಥಿತಿ?
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು





