SHIVAMOGGA LIVE NEWS | 18 ಮಾರ್ಚ್ 2022
ಆರ್ಟ್ ಆಫ್ ಲಿವಿಂಗ್’ನ ಜ್ಞಾನ ಕ್ಷೇತ್ರ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲು ಶ್ರೀ ರವಿಶಂಕರ ಗುರೂಜಿ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಮಾರ್ಚ್ 20ರಂದು ಸಂಜೆ 5.30ಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಮಾತನಾಡಿದ ಆರ್ಟ್ ಆಪ್ ಲಿವಿಂಗ್’ನ ಶಿವಮೊಗ್ಗ ಘಟಕದ ಸಂಯೋಜಕ ಬಿ.ಮೂರ್ತಿ ಅವರು, ಶಿವಮೊಗ್ಗದಲ್ಲಿ ಜ್ಞಾನ ಕ್ಷೇತ್ರವನ್ನು ಸ್ಥಾಪಿಸಲಾಗುತ್ತಿದೆ. ಇದರ ಕಟ್ಟಡ ಪೂಜೆಗೆ ಮಾರ್ಚ್ 20ರಂದು ಶ್ರೀ ರವಿಶಂಕರ್ ಗುರೂಜಿಯವರೇ ಆಗಮಿಸುತ್ತಿದ್ದಾರೆ. ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್ ಎದುರಿನ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಸ್ಥಳದಲ್ಲಿ ರುದ್ರಪೂಜೆ ಹಾಗೂ ಸತ್ಸಂಗ ಕಾರ್ಯಕ್ರಮ ನಡೆಯಲಿವೆ ಎಂದರು.
ಮಾನಸಿಕ ಒತ್ತಡ ಕಡಿಮೆ ಮಾಡಲು, ಆತ್ಮವಿಶ್ವಾಸ ಮೂಡಿಸಲು, ಸಕಾರಾತ್ಮಕ ಮನೋಭವ ಹೆಚ್ಚಿಸಲು, ಶಾಂತಿ ಮತ್ತು ನೆಮ್ಮದಿ ನೀಡಲು ಅನುಕೂಲವಾಗುವಂತೆ ಧ್ಯಾನ, ಯೋಗ, ನವಚೇತನ ಶಿಬಿರ ಮುಂತಾದವುಗಳನ್ನು ಈ ಕೇಂದ್ರದಲ್ಲಿ ಆಯೋಜಿಸಲಾಗುವುದು ಎಂದು ಮೂರ್ತಿ ಅವರು ತಿಳಿಸಿದರು.
ಪ್ರಮುಖರಾದ ರಮೇಶ್ ಬಾಬು, ಬ್ರಹ್ಮಾಚಾರಿ ಬ್ರಹ್ಮಪಾದ, ಪ್ರಶಾಂತ್ ಪೈ, ದೀಪಿಕಾ ಭಟ್, ಡಾ. ಅನುಪ್ ಪೈ, ಸುಮಾ ವೆಂಕಟೇಶ್, ಕೃಷ್ಣಪ್ಪ ಪಿ.ಆರ್, ಪ್ರಶಾಂತ್, ಚಂದ್ರಹಾಸ್, ಶಶಿಕುಮಾರ್ ಮುಂತಾದವರಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200