ಭಾರಿ ಮಳೆಗೆ ಟ್ಯಾಂಕ್ ಮೊಹಲ್ಲಾದಲ್ಲಿ ಮನೆಗಳು ಜಲಾವೃತ, ಸ್ಕೂಲ್ ರಜೆ, ಸಂಕಷ್ಟಕ್ಕೆ ಕಾರಣವಾಯ್ತಾ ನಿನ್ನೆ ಅಳವಡಿಸಿದ್ದ ಪೈಪ್?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019

ಶಿವಮೊಗ್ಗ ನಗರದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಮನೆಗಳು ಜಲಾವೃತವಾಗಿದ್ದು, ಸರ್ಕಾರಿ ಶಾಲೆಯೊಂದಕ್ಕೆ ರಜೆ ಘೋಷಿಸಲಾಗಿದೆ.

74580512 967081313653289 3316195230503403520 n.jpg? nc cat=100& nc eui2=AeFV5EbD7r6hKdRZBVhV4 e75F4NNoOJBhrjP0I SF6o1Ns18l0BB0atH1Aa05sxvOmjQ3d0KMlTd6b1NA0PQMOUMtorenKiVxW4u0JTZAw rQ& nc oc=AQk bxSe7kO0wfIMzLuJOtc m0 CJADPGSB2FtAm6E8zbJYtrwoLrcodaluYYPFOMOo& nc ht=scontent.fblr11 1

ಟ್ಯಾಂಕ್ ಮೊಹಲ್ಲಾದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಹಲವು ವಸ್ತುಗಳು, ಆಹಾರ ಸಾಮಾಗ್ರಿ ಜಲಾವೃತವಾಗಿದೆ. ಇನ್ನು, ರಾತ್ರಿಯಿಂದಲು ನೀರು ಹೊರ ಹಾಕಲು ಮನೆಯವರು ಹರಸಾಹಸ ಪಡುತ್ತಿದ್ದಾರೆ.

ಮನೆಗಳಿಗೆ ನೀರು ನುಗ್ಗಿದ್ದು ಏಕೆ?

ಭಾರಿ ಮಳೆಯಿಂದಾಗಿ ಟ್ಯಾಂಕ್ ಮೊಹಲ್ಲಾದಲ್ಲಿ ಹಾದು ಹೋಗುವ ರಾಜಾ ಕಾಲುವೆಯಲ್ಲಿ ಭಾರಿ ಪ್ರಮಾಣದ ನೀರು ಹರಿದಿದೆ. ಆದರೆ ಟ್ಯಾಂಕ್ ಮೊಹಲ್ಲಾ ರಸ್ತೆಯಲ್ಲಿ ಸೇತುವೆ ಕಟ್ ಮಾಡಿ, ಪೈಪ್ ಅಳವಡಿಸಲಾಗಿದೆ. ಇದರಲ್ಲಿ ನೀರು ಹರಿದು ಹೋಗಲು ಸಾದ್ಯವಾಗದೆ ಮನೆಗಳಿಗೆ ನುಗ್ಗಿದೆ.

75576501 967081390319948 7807067753084354560 n.jpg? nc cat=111& nc eui2=AeGFG7ltQnUHpx6gnRDgTGjuOPzmPgMLOHr5X3JekjAap7qDnotkOVNGDfczdAqt PxqFU6ghMgh4uqrF7PVVY3wnxce69u7ozc2QcO3BDO1LQ& nc oc=AQlRm3Y4YH5Zk2JQ6CY53Atiog KaGopEQKm1Z oKJlPKqD5F1B9z KdPIZdUxiUATM& nc ht=scontent.fblr11 1

ಸೇತುವೆ ಕಟ್ ಮಾಡಿದ್ದೇಕೆ?

ಈ ರಾಜಾ ಕಾಲುವೆಯಲ್ಲಿ ಕಸ ತುಂಬಿಕೊಂಡಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಾಜಾ ಕಾಲುವೆಯಲ್ಲಿ ನೀರು ಹರಿಯಲು ಸಾದ್ಯವಾಗಿರಲಿಲ್ಲ. ಸೇತುವೆ ಕೆಳಗೆ ತುಂಬಿಕೊಂಡಿದ್ದ ಕಸವನ್ನು ತೆಗೆಯಲು ಸಾದ್ಯವಾಗಿರಲಿಲ್ಲ. ಹಾಗಾಗಿ ಮಹಾನಗರ ಪಾಲಿಕೆಯೆ ಸೇತುವೆಯನ್ನು ತೆರವು ಮಾಡಿ, ನೀರು ಹರಿಯಲು ಅನುವು ಮಾಡಿಕೊಟ್ಟಿತ್ತು.

74361068 967081396986614 5831404276055801856 n.jpg? nc cat=100& nc eui2=AeFXE YHN71bf1ZSZjTpCGtLGFOyqfb RdMXJJDm2tOrXWzwYnpmoZD4Cmy5NXDCym9i3r7qhx09J7PbVGVgaQcy2VZmcPJQPl36a8flQXijew& nc oc=AQmilaeTf0iO18PI8byqxaS f8caZ RifZ2wtTctSxsdy0xesVmeyCr QcNyTN6y0Wk& nc ht=scontent.fblr11 1

ನಿನ್ನೆಯಷ್ಟೆ ಪೈಪ್ ಹಾಕಲಾಗಿತ್ತು

ಅನಿರೀಕ್ಷಿತ ಮಳೆಯಿಂದಾಗಿ ಹೊಸ ಸೇತುವೆ ಕಟ್ಟುವುದಕ್ಕೆ ಮಹಾನಗರ ಪಾಲಿಕೆ ಕೈ ಹಾಕಿರಲಿಲ್ಲ. ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ, ನಿನ್ನೆಯಷ್ಟೆ ರಾಜಾ ಕಾಲುವೆಗೆ ಹೊಸ ಪೈಪ್ ಹಾಕಿ, ಜನರ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮತ್ತೆ ನೀರು ಹರಿಯಲು ಸಾದ್ಯವಾಗದೆ ಮನೆಗಳಿಗೆ ನುಗ್ಗಿದೆ.

75394230 967081513653269 6175789803414487040 o.jpg? nc cat=104& nc eui2=AeEprXMlKFNPWjjFKpRBcBWg5I7aDTUoa6Gna6ygwAlf7v8hOGz7fNpdorUzkjfzncfboXAH eKU izJpeAfq5X3ruboNlNnFnlpgXcnA2ZbIA& nc oc=AQle8YjC5O5jzKR2Yo9OcEUZhT57BUOzN nKrDZc5mfyzpdLkSeIKVMrh4JQZrnPQxg& nc ht=scontent.fblr11 1

ಸ್ಕೂಲ್’ಗೆ ರಜೆ ಘೋಷಣೆ

ಟ್ಯಾಂಕ್ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಶಾಲೆಗು ನೀರು ನುಗ್ಗಿದೆ. ಮಕ್ಕಳು, ಶಾಲೆ ಸಿಬ್ಬಂದಿ ಬರಲು ಸಾದ್ಯವಾಗದಂತಹ ಪರಿಸ್ಥಿತಿ ಇದೆ. ಹಾಗಾಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.

76179137 967081660319921 678499640428986368 o.jpg? nc cat=102& nc eui2=AeF0x JdnGeu 5sl1EYhMsiNpJ98O7tAsR6J xBhS Iig0glqIaXEQ71BpGvqZawNX6L6haGsmb D2J0Z0IMbXg zSYZ4Q7BwscFHEYHGbGLzA& nc oc=AQntXpWJ088XVXLhRumREDU8o6fAGcRPCIhKCeVSj8F6S i HoGi WU86PJEWivNng& nc ht=scontent.fblr11 1

ರಾತ್ರಿ ಸ್ವಿಚ್ ಆಫ್, ಬೆಳಗ್ಗೆ ಕಮಿಷನರ್ ಹಾಜರ್

ಮನೆಗಳಿಗೆ ನೀರು ನುಗ್ಗುತ್ತಿದ್ದಂತೆ ಸ್ಥಳೀಯರು ಕಾರ್ಪೊರೇಟರ್ ಮತ್ತು ಪಾಲಿಕೆ ಕಮಿಷನರ್’ಗೆ ಕರೆ ಮಾಡಿದ್ದಾರೆ. ಆದರೆ ಈ ವೇಳೆ ಕಮಿನಷರ್ ಚಿದಾನಂದ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಕಮಿಷನರ್, ಕೆಲವು ನಿರ್ದೇಶನ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

74269103 967081740319913 7443308555966349312 o.jpg? nc cat=103& nc eui2=AeGs0J7KOF8TK15vQwYR5xXwJwz6nWN2C xlCC3t5tlYLqmV3DRJmn89vrtQ7Gn1QDz38gRbLl7TAFXB1XAgPNfeilUJn1sFebZ3NU3NXi1Kpw& nc oc=AQlRGzH7jLTExTgYRi1THSViHnsapjwZVXQhaRT3L6dwEGxVrTkyKLPjLc4VMzVNKJU& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment