ಗಾಂಧಿ ಬಜಾರ್, ನೆಹರೂ ರೋಡ್ ಸ್ಥಬ್ಧ, ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ಸಿಟಿ ರೌಂಡ್ಸ್ ರಿಪೋರ್ಟ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 8 ಜನವರಿ 2022

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶಿವಮೊಗ್ಗದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ಪ್ರಮುಖ ವಹಿವಾಟು ಕೇಂದ್ರಗಳಲ್ಲಿ ಅಂಗಡಿಗಳು ಬಂದ್ ಆಗಿವೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಬಿಕೋ ಅನ್ನುತ್ತಿದೆ ಗಾಂಧಿ ಬಜಾರ್

ಶಿವಮೊಗ್ಗದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ ಇವತ್ತು ಬಿಕೋ ಅನ್ನುತ್ತಿದೆ. ಜವಳಿ, ಚಿನ್ನಾಭರಣ ಸೇರಿದಂತೆ ಎಲ್ಲಾ ಬಗೆಯ ವ್ಯಾಪಾರ, ವಹಿವಾಟು ಬಂದ್ ಮಾಡಲಾಗಿದೆ. ಇಲ್ಲಿರುವ ದಿನಸಿ ಅಂಗಡಿಗಳು, ತರಕಾರಿ ಮಳಿಗೆಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಹಾಗಾಗಿ ಬೆಳಗಿನ ಅವಧಿಯಲ್ಲಿ ಗಾಂಧಿ ಬಜಾರ್’ನಲ್ಲಿ ಜನ, ವಾಹನ ಸಂಚಾರವಿತ್ತು. ಆ ಬಳಿಕ ಜನ ಸಂಚಾರ ಕಡಿಮೆಯಾಯಿತು.

ಬಿ.ಹೆಚ್.ರಸ್ತೆಯೂ ಖಾಲಿ ಖಾಲಿ

ನಗರದ ಬಿ.ಹೆಚ್.ರಸ್ತೆಯ ಬಹುತೇಕ ಅಂಗಡಿಗಳು ಬಂದ್ ಆಗಿವೆ. ಹಾಗಾಗಿ ರಸ್ತೆ ಖಾಲಿ ಖಾಲಿಯಾಗಿದೆ. ಜವಳಿ, ಕೃಷಿ ಉಪಕರಣಗಳು, ಮೊಬೈಲ್ ಶಾಪ್, ಶೋಂ ರೂಂಗಳು ಈ ರಸ್ತೆಯಲ್ಲಿವೆ. ಅವು ಅಗತ್ಯ ವಸ್ತುಗಳ ಪಟ್ಟಿಗೆ ಬರುವುದಿಲ್ಲ. ಹಾಗಾಗಿ ಬಿ.ಹೆಚ್.ರಸ್ತೆ ಬಣಗುಡುತ್ತಿದೆ. ಅಮೀರ್ ಅಹಮದ್ ಸರ್ಕಲ್, ಶಿವಪ್ಪ ನಾಯಕ ಪ್ರತಿಮೆ ಬಳಿ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದಾರೆ. ಹಾಗಾಗಿ ಈ ಭಾಗದಲ್ಲಿ ವಾಹನ ಸಂಚಾರವು ವಿರಳವಾಗಿದೆ.

ನೆಹರೂ ರೋಡ್ ಸಂಪೂರ್ಣ ಸ್ಥಬ್ಧ

ವೀಕೆಂಡ್ ಸಂದರ್ಭ ರಂಗು ಪಡೆಯುತ್ತಿದ್ದ ನೆಹರೂ ರಸ್ತೆ ಕರ್ಫ್ಯೂ ಕಾರಣಕ್ಕೆ ಸಂಪೂರ್ಣ ಸ್ಥಬ್ಧವಾಗಿದೆ. ಆಮೀರ್ ಅಹಮದ್ ಸರ್ಕಲ್ ಕಡೆಯಿಂದ ನೆಹರೂ ರಸ್ತೆಗೆ ಹೋಗುವ ಒಂದು ಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಗೋಪಿ ಸರ್ಕಲ್ ಕಡೆಯಲ್ಲೂ ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಇನ್ನು, ಈ ರಸ್ತೆಯಲ್ಲಿರುವ ಬಹತೇಕ ಮಳಿಗೆಗಳು ಅಗತ್ಯ ವಸ್ತುಗಳ ಪಟ್ಟಿಗೆ ಸೇರುವುದಿಲ್ಲ. ಹಾಗಾಗಿ ಎಲ್ಲಾ ಅಂಗಡಿಗಳು ಬಂದ್ ಆಗಿವೆ.

AVvXsEgnoqhLC54AyLRwOKxaspca5 AeTemLiXAj1jU DlrvKoXtRFw9wjnjAC5c2nQYM2o6tcJ6swysfTfrPF6TC TDgilQ8uYRhwa8TgzZ4u8T3dB6uul OqGYzftYwMqDHwKT1LCw4jwRRk7EqN7e2qrbtqUfXKxlsxkd h8d YSLe62oe8rj8vQ5FRdX Q=s926

ಸಿಟಿ ಸೆಂಟರ್ ಮಾಲ್ ಗೇಟ್ ಕ್ಲೋಸ್

ಶನಿವಾರ, ಭಾನುವಾರದಂದು ಗಿಜುಗುಡುತ್ತಿದ್ದ ಸಿಟಿ ಸೆಂಟರ್ ಮಾಲ್’ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಗೇಟ್’ಗಳನ್ನು ಬಂದ್ ಮಾಡಿ, ಸೆಕ್ಯೂರಿಟಿಗಳನ್ನು ನಿಯೋಜಿಸಲಾಗಿದೆ.

ದುರ್ಗಿಗುಡಿ, ಜೈಲ್ ರೋಡ್

ಟ್ರಾಫಿಕ್ ದಟ್ಟಣೆ ಹೆಚ್ಚಿರುತ್ತಿದ್ದ ದುರ್ಗಿಗುಡಿ, ಜೈಲ್ ರೋಡ್’ನಲ್ಲಿ ವಾಹನ ಸಂಚಾರ ಕಡಿಮೆ ಇದೆ. ಅಂಗಡಿಗಳು ಬಂದ್ ಆಗಿವೆ. ಜೈಲ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವುದು ಮತ್ತು ಕರ್ಫ್ಯೂ ಹಿನ್ನಲೆ ವಾಹನ ಸಂಚಾರ ಕಡಿಮೆ ಇದೆ.

AVvXsEjubsOilkhgq8SzYrg6f IdYVyFT33nAzTObPTO7g2mSz1bI1BgniDqmB4x0HK8nFq9AA8jkGiIzpjJBFT6QW sE542jUkz81YOwNkKrn9VhvNWib4U auKCyVAbPTmJGqoC1JFWnN355YeV 7vd8h okX5bUuHGgBqiG1kMPmUapD4rPa2q sp LbzqQ=s926

ಇತ್ತ ಕುವೆಂಪು ರಸ್ತೆಯಲ್ಲಿ ಆಸ್ಪತ್ರೆಗಳು ಇರುವುದರಿಂದ ಜನ ಸಂಚಾರ ಕಂಡು ಬರುತ್ತಿದೆ. ವಿನೋಬನಗರ ನೂರು ಅಡಿ ರಸ್ತೆಯಲ್ಲಿಯೂ ದಿನಸಿ, ತರಕಾರಿ ಮಾರಾಟಕ್ಕೆ ಅವಕಾಶವಿದೆ. ಇಲ್ಲಿಯೂ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದ್ದಾರೆ.

ವೀಕೆಂಡ್ ಕರ್ಫ್ಯೂಗೆ ಶಿವಮೊಗ್ಗದಲ್ಲಿ ವ್ಯಾಪಾರಿಗಳು, ಜನರು ಉತ್ತಮ ಸ್ಪಂದನೆ ನೀಡಿದ್ದಾರೆ. ವಾಹನ, ಜನ ಸಂಚಾರ ಬಹುತೇಕ ತಗ್ಗಿದೆ. ಆದರೆ ಕರ್ಖಾನೆ, ಅಗತ್ಯ ಸೇವೆ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುವುದರಿಂದ ಜನ ಸಂಚಾರ ಕಂಡು ಬರುತ್ತಿದೆ. ಈ ಮಧ್ಯೆ ಅನಗತ್ಯವಾಗಿ ಓಡಾಡುತ್ತಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂ, ಹೇಗಿದೆ ಬಸ್ ಸಂಚಾರ? ಸಿಟಿ ಬಸ್ಸುಗಳು ರಸ್ತೆಗಿಳಿದಿವೆಯಾ?

ಇದನ್ನೂ ಓದಿ | ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂ, ಪೊಲೀಸರಿಂದ ತಪಾಸಣೆ ಶುರು, ವಾಹನಗಳು ಸೀಜ್

280421 Shimoga Gandhi Bazaar During Locdown 1

AVvXsEj6z8 kqXGi9Z HPKtcyDB y670QYr9bJ6YVMbeOZ7gKLBbiGl dzGW37zzILcbnkCDIBclVSH46L4I

AVvXsEh 13vj7yja tUpjcw3UbwEGjJ2bn8NGS2cxtsOgb cW2e1eXZp28Uk8fBy6c8AXKflwKBz HuHBi V1BOfF7Uv8DExTrxJjE1c4CSPJcVzIU2hf6rwfMiwa0mcouE1BrU8ZKGC1Tf1O7J1JKCbmNoyl7x3Gq aDbAgfdoEkf0LYw4cOSfGD243Vv2N8A=s926

ABOUT ME DECEMBER REPORT

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment