ಶಿವಮೊಗ್ಗ ಲೈವ್.ಕಾಂ | SHIMOGA | 10 ಅಕ್ಟೋಬರ್ 2019
ಶಿವಮೊಗ್ಗ ದಸರಾದ ಮೆರಗು ಹೆಚ್ಚಿಸಿದ್ದ ಆನೆಗಳು ಸಕ್ರೆಬೈಲಿನಲ್ಲಿರುವ ಬಿಡಾರಕ್ಕೆ ಹಿಂತಿರುಗಿವೆ. ಇವತ್ತಿನಿಂದ ಮೂರ್ನಾಲ್ಕು ದಿನ ಈ ಆನೆಗಳ ಮೇಲೆ ನಿಗಾ ವಹಿಸಲಾಗುತ್ತದೆ. ಅವುಗಳ ಚಲನವಲನ, ಆಹಾರ ಸೇವಿಸುವುದು ಸೇರಿದಂತೆ ಪ್ರತಿ ಆಗುಹೋಗುವಿನ ಕುರಿತು ಎಚ್ಚರ ವಹಿಸಲಾಗುತ್ತದೆ.
ಅಂಬಾರಿ ಹೊತ್ತ ಸಾಗರ್, ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಗಂಗೆ ಮತ್ತು ಭಾನುಮತಿ ಆನೆಗಳನ್ನು ಇನ್ನು ಮೂರ್ನಾಲ್ಕು ದಿನ ಸಕ್ರೆಬೈಲಿನ ಕ್ಯಾಂಪ್ನಲ್ಲಿ ಇರಿಸಲಾಗುತ್ತದೆ. ಅವುಗಳ ಆರೋಗ್ಯದ ಸಂಪೂರ್ಣ ತಪಾಸಣೆ ನಡೆಸಲಾಗುತ್ತದೆ.
ಏನೆಲ್ಲ ತಪಾಸಣೆ ಮಾಡಲಾಗುತ್ತದೆ?
ಆನೆಗಳ ಬಾಡಿ ಮೂವ್ಮೆಂಟ್, ಒತ್ತಡ, ಆಹಾರ ಮತ್ತು ನೀರು ಸೇವನೆ, ಭೇದಿ ಸೇರಿದಂತೆ ಆನೆಯ ಪ್ರತಿಯೊಂದು ನಡೆಯ ಮೇಲೆ ವಿಶೇಷ ನಿಗಾ ವಹಿಸಲಾಗುತ್ತದೆ. ಯಾವುದೇ ರೀತಿಯ ಸಣ್ಣ ವ್ಯತ್ಯಾಸ ಕಂಡು ಬಂದರು ಅವುಗಳಿಗೆ ಕೂಡಲೆ ಚಿಕಿತ್ಸೆ ನೀಡಲಾಗುತ್ತದೆ.
ಮೂರ್ನಾಲ್ಕು ದಿನ ಕಾಡಿಗೆ ಬಿಡಲ್ಲ
ಸಕ್ರೆಬೈಲು ಬಿಡಾರದ ಆನೆಗಳನ್ನು ಪ್ರತಿದಿನ ಕಾಡಿಗೆ ಬಿಡಲಾಗುತ್ತದೆ. ಸ್ವಚ್ಛಂದವಾಗಿ ಓಡಾಡಿ ಬರುವ ಆನೆಗಳನ್ನು ಕ್ರಾಲ್ ಪ್ರದೇಶದಲ್ಲಿ ಇರಿಸಲಾಗುತ್ತದೆ. ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸಿ ಹಿಂತಿರುಗಿರುವ ಸಾಗರ್, ಗಂಗೆ ಮತ್ತು ಭಾನುಮತಿ ಆನೆಗಳನ್ನು ಇನ್ನು ಮೂರ್ನಾಲ್ಕು ದಿನ ಕಾಡಿಗೆ ಬಿಡುವುದಿಲ್ಲ. ಆ ಬಳಿಕ ಹೆಣ್ಣಾನೆಯನ್ನು ಗಂಡಾನೆ ಜೊತೆಗೆ ಮತ್ತು ಗಂಡಾನೆಯನ್ನು ಹೆಣ್ಣಾನೆ ಜೊತೆಗೆ ಸೇರಿಸಿ ಕಾಡಿಗೆ ಕಳುಹಿಸಲಾಗುತ್ತದೆ.
ಜಂಬೂ ಸವಾರಿಯಲ್ಲಿ ಭಾಗವಹಿಸಿದ ಆನೆಗಳ ಆರೋಗ್ಯ ಕಾಪಾಡುವ ಸಲುವಾಗಿ ಈ ಪ್ರಯತ್ನ ಮಾಡಲಾಗುತ್ತಿದೆ. ಮೂರ್ನಾಲ್ಕು ದಿನದ ಬಳಿಕವೆ ಈ ಮೂರು ಆನೆಗಳನ್ನು ಬಿಡಾರದ ಸ್ಟಾಂಡ್’ಗೆ ಕರೆತರಲಾಗುತ್ತದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200