ಶಿವಮೊಗ್ಗ – ಭದ್ರಾವತಿ ಟ್ರ್ಯಾಕ್ಸ್‌ ಉದ್ಯಮಕ್ಕೆ ‘ಗ್ಯಾರಂಟಿʼ ಸಂಕಷ್ಟ, ಏನದು? ಎಷ್ಟಿವೆ ಟ್ರ್ಯಾಕ್ಸ್‌? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 7 JUNE 2023

SHIMOGA : ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ಜೂ.11ರಂದು ಈ ಗ್ಯಾರಂಟಿ ಯೋಜನೆ ಜಾರಿಯಾಗುತ್ತಿದೆ. ಇದರಿಂದ ಶಿವಮೊಗ್ಗ – ಭದ್ರಾವತಿ ನಡುವೆ ಸಂಚರಿಸುತ್ತಿರುವ ಟ್ರ್ಯಾಕ್ಸ್‌ಗಳಿಗೆ (Trax) ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ಈಗಾಗಲೆ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮ ಮತ್ತಷ್ಟು ‘ಶಕ್ತಿ’ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.

Shimoga Bhadravathi Trax

ಶಿವಮೊಗ್ಗ – ಭದ್ರಾವತಿ ಮಾರ್ಗದಲ್ಲಿ ಸರ್ಕಾರಿ ಬಸ್ಸುಗಳು ಬಿಟ್ಟರೆ ಟ್ರ್ಯಾಕ್ಸ್‌ಗಳೆ (Trax) ಪ್ರಮುಖ ಸಾರ್ವಜನಿಕ ಸಾರಿಗೆ. ಈ ಮಾರ್ಗದಲ್ಲಿ ಸರ್ಕಾರಿ, ಖಾಸಗಿ ಕಚೇರಿಗಳು, ಕಂಪನಿಗಳು, ಗಾರ್ಮೆಂಟ್ಸ್‌, ಐಟಿ ಕಂಪನಿಗೆ ತೆರಳುವವರು ಟ್ರ್ಯಾಕ್ಸ್‌ ಬಳಸುತ್ತಾರೆ. ಹಾಗಾಗಿ ಹಚ್ಚಿನ ಸಂಖ್ಯೆಯ ಮಹಿಳೆಯರು ಟ್ರ್ಯಾಕ್ಸ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದರೆ ಬಹುಪಾಲು ಮಹಿಳೆಯರು ಸರ್ಕಾರಿ ಬಸ್ಸುಗಳತ್ತ ಮುಖ ಮಾಡುತ್ತಾರೆ. ಇದರಿಂದ ಟ್ರ್ಯಾಕ್ಸ್‌ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ.

Shimoga Bhadravathi Trax

ಎಷ್ಟು ಟ್ರ್ಯಾಕ್ಸ್‌ಗಳಿವೆ? ಎಷ್ಟಿದೆ ಚಾರ್ಜ್‌?

ಶಿವಮೊಗ್ಗದಲ್ಲಿ ಈ ಮೊದಲು ನೂರಾರು ಟ್ರ್ಯಾಕ್ಸ್‌ಗಳಿದ್ದವು. ಪ್ರಸ್ತುತ 97 ಟ್ರ್ಯಾಕ್ಸ್‌ಗಳು ಪರ್ಮಿಟ್‌ ಪಡೆದುಕೊಂಡಿವೆ. ಆದರೆ ಅಂದಾಜು 60 ಟ್ರ್ಯಾಕ್ಸ್‌ಗಳು ಮಾತ್ರ ರಸ್ತೆಗಿಳಿಯುತ್ತಿವೆ. ಕೊರೋನ ಲಾಕ್‌ಡೌನ್‌, ಡಿಸೇಲ್‌ ಬೆಲೆ ದುಬಾರಿ ಸೇರಿದಂತೆ ನಾನಾ ಕಾರಣಗಳಿಂದ ಹಲವರು ಈ ಉದ್ಯಮ ತೊರೆದಿದ್ದಾರೆ. ಬೇರೆ ಕೆಲಸಗಳನ್ನು ಹುಡುಕಿಕೊಂಡು ಜೀವನ ನಡೆಸುತ್ತಿದ್ದಾರೆ.

Shimoga Bhadravathi Trax

ಶಿವಮೊಗ್ಗ – ಭದ್ರಾವತಿ ಮಧ್ಯೆ ಪ್ರತಿ ಟ್ರ್ಯಾಕ್ಸ್‌ನಲ್ಲಿ ಒಂದು ಟ್ರಿಪ್‌ಗೆ 10 ಮಂದಿಯನ್ನು ಕರೆದೊಯ್ಯಲಾಗುತ್ತದೆ. ಪ್ರತಿಯೊಬ್ಬರಿಗೆ 25 ರೂ. ಸೀಟ್‌ ಚಾರ್ಜ್‌ ಹಾಕಲಾಗುತ್ತದೆ. ಪ್ರಯಾಣಿಕ ಮಲವಗೊಪ್ಪ, ಮಾಚೇನಹಳ್ಳಿ, ನಿದಿಗೆ, ಡೈರಿ ಸೇರಿದಂತೆ ಮಧ್ಯದ ಯಾವುದೆ ನಿಲ್ದಾಣದಲ್ಲಿ ಇಳಿದರೆ ಸೀಟ್‌ ಚಾರ್ಜ್‌ ಕಡಿಮೆ ಇರಲಿದೆ.

ಪ್ರತಿ ಟ್ರಿಪ್‌ಗೆ ಶಿವಮೊಗ್ಗ – ಭದ್ರಾವತಿ ಡೈರೆಕ್ಟ್‌ pawanಸೀಟುಗಳಿದ್ದರೆ ಪ್ರಯಾಣಿಕರಿಂದ ಒಟ್ಟು 250 ರೂ. ಸಂಗ್ರಹವಾಗಲಿದೆ. ಆದರೆ ಒಂದು ಟ್ರಿಪ್‌ಗೆ 4 – 5 ಲೀಟರ್‌ ಡಿಸೇಲ್‌ ಖರ್ಚಾಗಲಿದೆ. ಪ್ರಯಾಣಿಕರ ಚಾರ್ಜ್‌ನಿಂದ ಬರುವ ಹಣ ಡಿಸೇಲ್‌ ಖರ್ಚಿಗು ಸಾಕಾಗುವುದಿಲ್ಲ. ಸಣ್ಣಪುಟ್ಟ ಲಗೇಜ್‌ ಕೊಂಡೊಯ್ದರೆ ಅಲ್ಪಸ್ವಲ್ಪ ಹಣ ಉಳಿಯಲಿದೆ. ಪ್ರತಿದಿನ ಒಬ್ಬ ಟ್ರ್ಯಾಕ್ಸ್‌ ಚಾಲಕ 500 ರೂ. ಉಳಿಸಿಕೊಂಡರೆ ಹೆಚ್ಚು. ಇದರಲ್ಲಿ ಗಾಡಿ ನಿರ್ವಹಣೆ, ಮನೆ ನಿರ್ವಹಣೆ, ಮಕ್ಕಳ ಓದು ಸಾಧ್ಯವೆ?ಪವನ್‌ ಮಾರ್ಟಿಸ್‌, ಕಾರ್ಯದರ್ಶಿ, ಮೀಟರ್‌ ಟ್ಯಾಕ್ಸಿ ಮಾಲೀಕರ ಸಂಘ

Shimoga Bhadravati KSRTC Bus

ಹೊಸ ಸಾವಲು ಎದುರಿಸಬೇಕಿದೆ

ಟ್ರ್ಯಾಕ್ಸ್‌ ಉದ್ಯಮ ಸಾಲು ಸಾಲು ಸವಾಲುಗಳನ್ನು ಎದುರಿಸುತ್ತಿದೆ. ಈ ಮಧ್ಯೆ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಘೋಷಣೆ ಮಾಡಿರುವುದು ಟ್ರ್ಯಾಕ್ಸ್‌ ಉದ್ಯಮಕ್ಕೆ ಹೊಸ ಸವಾಲು ತಂದೊಡ್ಡಿದೆ.

ಪ್ರತಿದಿನ ಬೆಳಗ್ಗೆ 6 ಗಂಟೆಗೆ ಟ್ರ್ಯಾಕ್ಸ್‌ ನಿಲ್ದಾಣಕ್ಕೆ pawanಬರುತ್ತೇವೆ. ರಾತ್ರಿ 10 ಗಂಟೆವರೆಗೆ ಕೆಲಸ ಮಾಡುತ್ತೇವೆ. ಆದರೂ ಮೂರು ಟ್ರಿಪ್‌ ಮಾಡಿದರೆ ಹೆಚ್ಚು. ಜನ ಬಂದರಷ್ಟೆ ನಮ್ಮ ಗಾಡಿಗಳು ಹೊರಡುತ್ತವೆ. ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ಈ ಯೋಜನೆಯಿಂದ ನಮ್ಮ ಉದ್ಯಮಕ್ಕೆ ನಷ್ಟವಾಗಲಿದೆ. ಸರ್ಕಾರ ನಮ್ಮ ನೆರವಿಗು ಧಾವಿಸಬೇಕಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಲಿ.ಪವನ್‌ ಮಾರ್ಟಿಸ್‌, ಕಾರ್ಯದರ್ಶಿ, ಮೀಟರ್‌ ಟ್ಯಾಕ್ಸಿ ಮಾಲೀಕರ ಸಂಘ

Shimoga - Bhadravathi KSRTC Bus

ಪ್ರತಿದಿನ ಒಂದು ಟ್ರ್ಯಾಕ್ಸ್‌ ಶಿವಮೊಗ್ಗ – ಭದ್ರಾವತಿ ನಡುವೆ  2 ಅಥವಾ 3 ಬಾರಿ ಮಾತ್ರ ಸಂಚರಿಸಲಿದೆ. ಇದರಿಂದ ಬರುವ ಆದಾಯ ಯಾವುದಕ್ಕು ಸಾಕಾಗುವುದಿಲ್ಲ ಎಂಬುದು ಟ್ರ್ಯಾಕ್ಸ್‌ ಮಾಲೀಕರ ಅಳಲು. ಈಗ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಾದರೆ ಗಾರ್ಮೆಂಟ್ಸ್‌, ವಿವಿಧ ಕಚೇರಿಗೆ ತೆರಳುವ ಮಹಿಳೆಯರು ಸರ್ಕಾರಿ ಬಸ್ಸುಗಳತ್ತ ಮುಖ ಮಾಡಬಹುದು. ಇದರಿಂದ ಟ್ರ್ಯಾಕ್ಸ್‌ ಉದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಈ ಹಿನ್ನೆಲೆ ಸರ್ಕಾರ ಟ್ರ್ಯಾಕ್ಸ್‌ ಉದ್ಯಮದಲ್ಲಿರುವವರಿಗೂ ಆಸರೆಯಾಗಬೇಕಿದೆ.

ಇದನ್ನೂ ಓದಿ – ಸಿಟಿ ಬಸ್‌ ಡಿಕ್ಕಿಯಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ವ್ಯಕ್ತಿ 18 ದಿನದ ಬಳಿಕ ಸಾವು, ಮೈ ಜುಮ್‌ ಅನಿಸುತ್ತೆ ಸಿಸಿಟಿವಿ ದೃಶ್ಯ

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 7, 2023

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

Leave a Comment