ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 18 JUNE 2024
RAINFALL NEWS : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಸಂಪೂರ್ಣ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಸಾಗರ, ಹೊಸನಗರ ತಾಲೂಕು ಹೊರತು ಉಳಿದೆಲ್ಲು ದೊಡ್ಡ ಪ್ರಮಾಣದ ಮಳೆಯಾಗಿಲ್ಲ ಎಂದು ಕೆಎಸ್ಎನ್ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.
ಜೂ.17ರ ಬೆಳಗ್ಗೆ 8.30ರಿಂದ ಜೂ.18ರ ಬೆಳಗ್ಗೆ 8.30ರವರೆಗಿನ ಮಳೆ ಪ್ರಮಾಣವನ್ನು ಕೆಎಸ್ಎನ್ಡಿಎಂಸಿ ವರದಿಯಲ್ಲಿ ಪ್ರಕಟಿಸಲಾಗಿದೆ. ಈ ಅವಧಿಯಲ್ಲಿ ಭದ್ರಾವತಿಯಲ್ಲಿ 0.2 ಮಿ.ಮೀ, ಹೊಸನಗರದಲ್ಲಿ 2.4 ಮಿ.ಮೀ, ಸಾಗರದಲ್ಲಿ 9 ಮಿ.ಮೀ, ಶಿಕಾರಿಪುರದಲ್ಲಿ 0.6 ಮಿ.ಮೀ, ಶಿವಮೊಗ್ಗದಲ್ಲಿ 0.3 ಮಿ.ಮೀ, ಸೊರಬದಲ್ಲಿ 0.1 ಮಿ.ಮೀ, ತೀರ್ಥಹಳ್ಳಿಯಲ್ಲಿ 0.4 ಮಿ.ಮೀ ಮಳೆಯಾಗಿದೆ.
ವಾಡಿಕೆಗಿಂತಲೂ ಕಡಿಮೆ ಮಳೆ
ಜೂನ್ 1 ರಿಂದ ಜೂನ್ 17ರವರೆಗೆ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ. ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ.
| ತಾಲೂಕು | ವಾಡಿಕೆ ಮಳೆ | ವಾಸ್ತವದ ಮಳೆ |
| ಭದ್ರಾವತಿ | 56.3 ಮಿ.ಮೀ | 44.7 ಮಿ.ಮೀ |
| ಹೊಸನಗರ | 339.5 ಮಿ.ಮೀ | 165.8 ಮಿ.ಮೀ |
| ಸಾಗರ | 233 ಮಿ.ಮೀ | 280 ಮಿ.ಮೀ |
| ಶಿಕಾರಿಪುರ | 83.2 ಮಿ.ಮೀ | 67 ಮಿ.ಮೀ |
| ಶಿವಮೊಗ್ಗ | 65.1 ಮಿ.ಮೀ | 55.1 ಮಿ.ಮೀ |
| ಸೊರಬ | 136.3 ಮಿ.ಮೀ | 70.5 ಮಿ.ಮೀ |
| ತೀರ್ಥಹಳ್ಳಿ | 256 ಮಿ.ಮೀ | 133.2 ಮಿ.ಮೀ |
ಇದನ್ನೂ ಓದಿ – ಭದ್ರಾ ಜಲಾಶಯದ ಒಳ ಹರಿವು ಕುಸಿತ, ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ, ಇವತ್ತು ಎಷ್ಟಿದೆ ನೀರಿನ ಮಟ್ಟ?
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






