ಶಿವಮೊಗ್ಗ ಲೈವ್.ಕಾಂ |SHIMOGA NEWS | 4 DECEMBER 2020
ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಯಾಗುತ್ತಿದ್ದಂತೆ ಪೆಟ್ರೋಲ್ ಬಂಕ್ಗಳು ಬಂದ್ ಆಗಿವೆ. ಹಾಗಾಗಿ ವಾಹನ ಸವಾರರು ಪೆಟ್ರೋಲ್ಗಾಗಿ ಪರದಾಡುವಂತಾಯಿತು.
ಜನರು ಗುಂಪುಗೂಡುವುದನ್ನು ತಪ್ಪಿಸುವುದು ಮತ್ತು ಅಹಿತಕರ ಘಟನೆಗಳನ್ನು ತಡೆಯಲು ಪೆಟ್ರೋಲ್ ಬಂಕ್ಗಳನ್ನು ಬಂದ್ ಮಾಡಲಾಗಿದೆ.
ಪೆಟ್ರೋಲ್ ಸಿಗದೆ ಸವಾರರ ಪರದಾಟ
ಬಂಕ್ಗಳು ಬಂದ್ ಆಗಿದ್ದರಿಂದ ಪೆಟ್ರೋಲ್ ಸಿಗದೆ ವಾಹನ ಸವಾರರು ಪರದಾಡುವಂತಾಯಿತು. ಒಂದು ಬಂಕ್ನಿಂದ ಮತ್ತೊಂದು ಬಂಕ್ಗೆ ಅಲೆದರೂ ಪೆಟ್ರೋಲ್ ಸಿಗಲಿಲ್ಲ. ಇದರಿಂದ ಸವಾರರು ತೀವ್ರ ಸಂಕಷ್ಟ ಅನುಭವಿಸುಂತಾಯಿತು.
ಪೆಟ್ರೋಲ್ಗಾಗಿ ನಗರ ಬಿಟ್ಟು ಹೊರಗೆ ಹೋದರು
ನಿಷೇಧಾಜ್ಞೆ ಇರುವುದರಿಂದ ಪೆಟ್ರೋಲ್ ಬಂಕ್ಗಳು ಬಂದ್ ಆಗಿವೆ. ಹಾಗಾಗಿ ಶಿವಮೊಗ್ಗ ನಗರದ ಹೊರವಲಯಕ್ಕೆ ತೆರಳಿ ಪೆಟ್ರೋಲ್ ಭರ್ತಿ ಮಾಡಿಸಿಕೊಂಡು ಬರುತ್ತಿರುವುದು ಸಾಮಾನ್ಯವಾಗಿದೆ. ಆಯನೂರು, ಭದ್ರಾವತಿ ಸೇರಿದಂತೆ ಸಿಟಿಯ ಹೊರವಲಯದಲ್ಲಿ ಪೆಟ್ರೋಲ್ ಸಿಗುತ್ತಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]