ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

Hosanagara-Nagar-Police-arrest-4-from-Bhatkala

ಹೊಸನಗರ: ಮನೆಯೊಂದರ ಬೀಗ ಮುರಿದು ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಹೊಸನಗರ ತಾಲೂಕು ನಗರ ಠಾಣೆ ಪೊಲೀಸರು (Hosanagara police) ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹7,90,000 ಮೌಲ್ಯದ ಚಿನ್ನದ ಸರ, ಬ್ರೇಸ್‌ಲೆಟ್, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. 2025ರ ಡಿಸೆಂಬರ್ 27 ರಂದು ಹೊಸನಗರ ತಾಲೂಕಿನ ನಿಟ್ಟೂರು ನಾಗೋಡಿ ಗ್ರಾಮದ ನಿವಾಸಿ ರಾಜೇಂದ್ರ ಶೆಟ್ಟಿ ಎಂಬುವವರ ಮನೆಯ ಮುಂಬಾಗಿಲ ಬೀಗವನ್ನು ಮುರಿದು ಕಳ್ಳರು ಒಳ ನುಗ್ಗಿದ್ದರು. ಮನೆಯಲ್ಲಿದ್ದ … Read more

ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ಇಂದಿನ ಪಂಚಾಂಗ: ಶಿವಮೊಗ್ಗದಲ್ಲಿ ಇವತ್ತು ಬೆಳಗ್ಗೆ 6.42ಕ್ಕೆ ಸೂರ್ಯೋದಯವಾಗಲಿದೆ. ಸಂಜೆ 6.37ಕ್ಕೆ ಸೂರ್ಯಾಸ್ತವಾಗಲಿದೆ. ಇಂದು ತೃತೀಯ, ಹುಬ್ಬ ನಕ್ಷತ್ರದ ದಿನ. (Panchanga) ಇಂದಿನ ಶುಭ ಸಮಯ ಬ್ರಹ್ಮ ಮುಹೂರ್ತವು ಬೆಳಿಗ್ಗೆ 5:06 ರಿಂದ 5:54 ರವರೆಗೆ ಇರಲಿದೆ. ನಂತರ ಪ್ರಾತಃ ಸಂಧ್ಯಾ ಸಮಯವು ಬೆಳಿಗ್ಗೆ 5:30 ರಿಂದ 6:42 ರವರೆಗೆ ಇರುತ್ತದೆ. ಅಭಿಜಿತ್ ಮುಹೂರ್ತವು ಇರುವುದಿಲ್ಲ. ವಿಜಯ ಮುಹೂರ್ತವು ಮಧ್ಯಾಹ್ನ 2:39 ರಿಂದ 3:26 ರವರೆಗೆ ಇರಲಿದೆ. ಗೋದೂಳಿ ಮುಹೂರ್ತವು 6:34 ರಿಂದ 6:59 ರವರೆಗೆ ಮತ್ತು … Read more

ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

lunar eclipse

ಶಿವಮೊಗ್ಗ: ಚಂದ್ರ ಗ್ರಹಣ (lunar eclipse) ಮುಗಿಯುತ್ತಿದ್ದಂತೆ ಶಿವಮೊಗ್ಗ ನಗರದ ವಿವಿಧ ದೇವಸ್ಥಾನಗಳಿಗೆ ದೊಡ್ಡ ಸಂಖ್ಯೆಯ ಭಕ್ತರು ಹರಿದು ಬರುತ್ತಿದ್ದಾರೆ. ಮತ್ತೊಂದೆಡೆ ನಗರದ ವಿವಿಧೆಡೆ ಅಂಗಡಿಗಳು ಬಂದ್‌ ಆಗಿವೆ. ಜನ ಸಂಚಾರವು ತುಸು ಕಡಿಮೆಯಾಗಿದೆ. ಚಂದ್ರ ಗ್ರಹಣ ದೇವಸ್ಥಾನಗಳು ಬಂದ್‌ ಚಂದ್ರ ಗ್ರಹಣ ಹಿನ್ನೆಲೆ ಶಿವಮೊಗ್ಗ ನಗರದ ದೇವಸ್ಥಾನಗಳು ಬಂದ್‌ ಆಗಿದ್ದವು. ಸಂಜೆ ಗ್ರಹಣ ಮುಗಿಯುವವರೆಗೆ ದೇವಸ್ಥಾನಗಳು ಖಾಲಿಯಾಗಿದ್ದವು. ಗ್ರಹಣದ ಬಳಿಕ ದೇವಸ್ಥಾನಗಳಲ್ಲಿ ಶುಚಿ ಕಾರ್ಯ ನಡೆಸಲಾಯಿತು, ದೇವರ ಮೂರ್ತಿಗಳನ್ನು ಶುದ್ಧಗೊಳಿಸಿ ಪೂಜೆ ನಡೆಸಲಾಯಿತು. ಇದನ್ನೂ ಓದಿ … Read more

ಬೆಟ್ಟೆ, ರಾಶಿ ರೇಟ್‌ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್‌ 2026

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate) ಶಿವಮೊಗ್ಗ ಮಾರುಕಟ್ಟೆ ಸರಕು 56100 95240 ಬೆಟ್ಟೆ 50109 64599 ರಾಶಿ 48009 57259 ಗೊರಬಲು 26019 41299 ಇದನ್ನೂ ಓದಿ – ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ? ತೀರ್ಥಹಳ್ಳಿ ಮಾರುಕಟ್ಟೆ ಇತರೆ 30000 51508 ಸಾಗರ ಮಾರುಕಟ್ಟೆ ಕೆಂಪುಗೋಟು 37591 37591 ಕೋಕ 34989 34989 ಚಾಲಿ 42399 43099 ಬಿಳೆ ಗೋಟು … Read more

ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

Sahyadri-Natakotsava-in-Shimoga-4-day-theater-Festival-Dr-Lava-GR.

ಶಿವಮೊಗ್ಗ: ಸಹ್ಯಾದ್ರಿ ಕಲಾತಂಡದಿಂದ ಮಾರ್ಚ್ 7ರಿಂದ 10ರ ವರೆಗೆ ನಾಲ್ಕು ದಿನಗಳ ಕಾಲ ನಗರದ ಕುವೆಂಪು ರಂಗಮಂದಿರದಲ್ಲಿ ಸಹ್ಯಾದ್ರಿ ನಾಟಕೋತ್ಸವ (Natakotsava) ಹಮ್ಮಿಕೊಳ್ಳಲಾಗಿದೆ ಎಂದು ಕಲಾತಂಡದ ಪ್ರಮುಖ ಡಾ.ಜಿ.ಆರ್.ಲವ ತಿಳಿಸಿದರು. ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಲವ, ನಾಟಕಗಳು ನಾಡಿನ ಬಾಹ್ಯ ಜೀವನದ ಬಗ್ಗೆ ತಿಳಿಸುತ್ತವೆ. ಈ ದೃಷ್ಟಿಯಿಂದ ಸಾಂಸ್ಕೃತಿಕ ಮೌಲ್ಯ ಗಟ್ಟಿಗೊಳಿಸಲು ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದೇವೆ. ಮಾರ್ಚ್ 7ರಿಂದ 10ರ ವರೆಗೆ ಪ್ರತಿದಿನ 6.30ಕ್ಕೆ ಆರಂಭವಾಗಲಿದೆ. ಅದಕ್ಕೂ ಮೊದಲು ಸೈಬರ್ ಕ್ರೈಮ್‌ ಸೇರಿ ವಿವಿಧ ವಿಷಯಗಳ ಕುರಿತು … Read more

ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

Akka-Pade-in-Shimoga-nabs-a-person-for-teasing-a-girl

ಶಿವಮೊಗ್ಗ: ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಯುವತಿಗೆ (rescue a girl) ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಶಿವಮೊಗ್ಗದ ಅಕ್ಕ ಪಡೆಯ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೋಮವಾರ ಅಕ್ಕ ಪಡೆಯ ಸಿಬ್ಬಂದಿ ಬಸ್ ನಿಲ್ದಾಣದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭ ಯುವತಿಯೊಬ್ಬಳು ಅಳುತ್ತಾ ನಿಂತಿದ್ದರು. ಕೂಡಲೇ ಸಿಬ್ಬಂದಿ ಆಕೆಯನ್ನು ವಿಚಾರಿಸಿದಾಗ, ವ್ಯಕ್ತಿಯೊಬ್ಬನು ತನಗೆ ಉಪಟಳ ನೀಡುತ್ತಿರುವ ಬಗ್ಗೆ ಆಕೆ ಮಾಹಿತಿ ನೀಡಿದ್ದರು. ಕಾರ್ಯಪ್ರವೃತ್ತರಾದ ಅಕ್ಕ ಪಡೆ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದು … Read more

ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

Durgigudi-Ratotsava-in-Shimoga

SHIMOGA : ದುರ್ಗಿಗುಡಿಯ ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಚಂದ್ರಗ್ರಹಣ ಹಿನ್ನಲೆ ಈ ಬಾರಿ ಬೆಳಗ್ಗೆ ರಥೋತ್ಸವ (Rathotsava) ನೆರವೇರಿಸಲಾಯಿತು. ಮಧ್ಯಾಹ್ನದವರೆಗೆ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ರಥವನ್ನು ನಿಲ್ಲಿಸಲಾಗುತ್ತದೆ. ವೈಭವದ ರಥೋತ್ಸವ ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ಪಲ್ಲಕ್ಕಿಯಲ್ಲಿ ದೇವರನ್ನು ತಂದು ರಥದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದೇಗುಲದ ಮುಂಭಾಗದಿಂದ ದುರ್ಗಿಗುಡಿ ಮುಖ್ಯರಸ್ತೆವರೆಗೆ ಭಕ್ತರು ರಥವನ್ನು ಎಳೆದು ದೇವರ ಆಶೀರ್ವಾದ ಬೇಡಿದರು. ಚಂದ್ರಗ್ರಹಣ ಹಿನ್ನೆಲೆ ಬೇಗ ರಥೋತ್ಸವ ಶ್ರೀ ದುರ್ಗಮ್ಮ, … Read more

₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

Bhadravathi-BEO-Nagendrappa-lokayukta-trap

ಶಿವಮೊಗ್ಗ: ಬಾಕಿ ಇರುವ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಭತ್ಯೆಗಳ ಮಂಜೂರಾತಿಗಾಗಿ ಲಂಚ ಪಡೆಯುತ್ತಿದ್ದ ಸಂದರ್ಭ ಭದ್ರಾವತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ನಾಗೇಂದ್ರಪ್ಪ ಎ.ಕೆ. ಮತ್ತು ಅವರ ಮಧ್ಯವರ್ತಿ ಮಂಜುನಾಥ್ ಎಂಬುವವರನ್ನು ಶಿವಮೊಗ್ಗ ಲೋಕಾಯುಕ್ತ (Lokayukta) ಪೊಲೀಸರು ಸೋಮವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಸಹೋದ್ಯೋಗಿಗೆ ಲಂಚಕ್ಕೆ ಬೇಡಿಕೆ ಭದ್ರಾವತಿ ಬಿ.ಇ.ಓ ಕಚೇರಿಯಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಲಿಂಗರಾಜು ಎಂಬುವವರು 2011 ರಿಂದ 2023 ರ ಅವಧಿಯ ತಮ್ಮ ವಾರ್ಷಿಕ ವೇತನ ಬಡ್ತಿ ಮತ್ತು ಆರ್ಥಿಕ … Read more

ಸರಕು ರೇಟ್‌ ಕುಸಿತ, ಉಳಿದ ಮಾದರಿ ಅಡಿಕೆ ರೇಟ್‌ ಎಷ್ಟಿದೆ? | 2 ಮಾರ್ಚ್‌ 2026

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ, ಶಿಕಾರಿಪು, ಸಾಗರ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ. (Adike Rate) ಶಿವಮೊಗ್ಗ ಮಾರುಕಟ್ಟೆ ಸರಕು 57299 81299 ಬೆಟ್ಟೆ 52000 63599 ರಾಶಿ 48199 56800 ಗೊರಬಲು 28019 40009 ತೀರ್ಥಹಳ್ಳಿ ಮಾರುಕಟ್ಟೆ ಇತರೆ 31000 55000 ಸಿಪ್ಪೆಗೋಟು 14000 14000 ಭದ್ರಾವತಿ ಮಾರುಕಟ್ಟೆ ಇತರೆ 23000 54000 ಸಿಪ್ಪೆಗೋಟು 11500 13000 ಶಿಕಾರಿಪುರ ಮಾರುಕಟ್ಟೆ ರಾಶಿ 48388 55399 ಸಾಗರ ಮಾರುಕಟ್ಟೆ ಕೆಂಪುಗೋಟು 25786 40199 ಕೋಕ 15299 … Read more

ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್‌, ಆಗಿದ್ದೇನು?

Missing-Lady-Rescued-from-Marikamba-Jathre-in-Shimoga

ಶಿವಮೊಗ್ಗ: ಕೋಟೆ ಮಾರಿಕಾಂಬ ಜಾತ್ರೆಯಲ್ಲಿ ಕುಟುಂಬದಿಂದ ಬೇರ್ಪಟ್ಟು ಕಳೆದುಹೋಗಿದ್ದ 80 ವರ್ಷದ ಮಹಿಳೆಯನ್ನು 112 ತುರ್ತು ಸ್ಪಂದನಾ ಪೊಲೀಸ್‌ (112 police) ಸಿಬ್ಬಂದಿ ಪತ್ತೆಹಚ್ಚಿ, ವಾಹನದಲ್ಲಿ ಅವರ ಮನೆಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಶುಕ್ರವಾರ ಮಧ್ಯರಾತ್ರಿ 12:30ರ ಹೊತ್ತಿಗೆ ವೃದ್ಧೆ ತಮ್ಮ ಸಂಬಂಧಿಕರೊಂದಿಗೆ ಮಾರಿಕಾಂಬಾ ಜಾತ್ರೆಗೆ ಬಂದಿದ್ದರು. ಆದರೆ ಜನದಟ್ಟಣೆಯ ನಡುವೆ ಅವರು ತಮ್ಮ ಕುಟುಂಬದವರಿಂದ ಬೇರ್ಪಟ್ಟು ದಾರಿ ತಪ್ಪಿದ್ದರು. ಈ ಬಗ್ಗೆ ಕುಟುಂಬದವರು 112ಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಇ.ಆರ್.ವಿ ಸಿಬ್ಬಂದಿ ಕೋಟೆ ಪೊಲೀಸ್ ಠಾಣೆಯ … Read more