SHIVAMOGGA LIVE NEWS | POLICE | 02 ಮೇ 2022
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಬಿ.ಸಿ.ಗಿರೀಶ್ ಹೊಸನಗರ ವೃತ್ತಕ್ಕೆ, ಎಸಿಬಿಯ ವಿ.ಪ್ರವೀಣ್ಕುಮಾರ್ ಅವರನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಸಿಐಡಿಗೆ ವರ್ಗಾವಣೆ ಆದೇಶದಲ್ಲಿರುವ ಕೆ.ಅಂಜನ್ಕುಮಾರ್ ಅವರನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ, ಸಿಐಡಿಯಲ್ಲಿರುವ ಬಿ.ಮಂಜುನಾಥ್ ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿರುವ ಹರೀಶ್ ಕೆ.ಪಾಟೀಲ್ ಅವರು ರಾಜ್ಯ ಗುಪ್ತವಾರ್ತೆಗೆ, ತುಂಗಾ ನಗರ ಠಾಣೆಯಲ್ಲಿರುವ ಎಂ.ಎಸ್.ದೀಪಕ್ ಅವರು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಇದನ್ನೂ ಓದಿ – ಪಿಎಸ್ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಅಕ್ರಮ, ತನಿಖೆಗೆ ಒತ್ತಾಯ