ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 30 ಡಿಸೆಂಬರ್ 2021
VISL ಎಂಪ್ಲಾಯಿಸ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ಮೇಲೆ ಭದ್ರಾವತಿ ನ್ಯೂಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. 26 ಮಂದಿಯನ್ನು ಬಂಧಿಸಿ, ನಗದು, ಇಸ್ಪೀಟ್ ಕಾರ್ಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಭದ್ರಾವತಿಯ ನ್ಯೂ ಕಾಲೋನಿಯಲ್ಲಿರುವ VISL ಎಂಪ್ಲಾಯಿಸ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್’ನಲ್ಲಿ, ಅಂದರ್ ಬಾಹರ್ ಆಟವಾಡಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಕ್ಲಬ್’ನಲ್ಲಿ 26 ಮಂದಿ ವಿವಿಧ ಟೇಬಲ್’ಗಳಲ್ಲಿ ಕುಳಿತು ಅಂದರ್ ಬಾಹರ್ ಆಟವಾಡುತ್ತಿದ್ದರು. ದಾಳಿ ನಡೆಸಿದ ಪೊಲೀಸರು, ಆಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ. ಇವರಿಂದ 11,110 ರೂ. ನಗದು, ಇಸ್ಪೀಟ್ ಕಾರ್ಡ್’ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರ ಪೈಕಿ ಭದ್ರಾವತಿಯ ವಿವಿಧ ಬಡಾವಣೆಗೆ ಸೇರಿದ ನಿವೃತ್ತ ನೌಕರರು, ಖಾಸಗಿ ಕಂಪನಿಯಗಳ ಉದ್ಯೋಗಿಗಳು, ಚಾಲಕರು ಇದ್ದಾರೆ.
ಎಎಸ್’ಪಿ ಜಿತೇಂದ್ರ ಕುಮಾರ್ ದಯಂ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪ್ರೊಬೆಷನರಿ ಡಿವೈಎಸ್’ಪಿ ಗಜಾನನ ಸತಾರ್, ನ್ಯೂಟೌನ್ ಠಾಣೆ ಪಿಎಸ್ಐ, ಸಿಬ್ಬಂದಿ ಪಾಲ್ಗೊಂಡಿದ್ದರು.