ಶಿವಮೊಗ್ಗ ಲೈವ್.ಕಾಂ | SHIMOGA NEWS | 6 ಡಿಸೆಂಬರ್ 2021
ಪುರಲೆಯ ಖಾಲಿ ಬಡಾವಣೆಯಲ್ಲಿ ಪೊಲೀಸರನ್ನು ಕಂಡು ಓಡಲು ಯತ್ನಿಸಿದ ಮೂವರನ್ನು ಹಿಡಿದು ಪರಿಶೀಲನೆ ನಡೆಸಲಾಗಿದೆ. ಆರೋಪಿಗಳ ಬಳಿ ಎರಡು ಕೆ.ಜಿಯಷ್ಟು ಗಾಂಜಾ ಪತ್ತೆಯಾಗಿದೆ.
ಪುರಲೆಯ ಖಾಲಿ ಬಡಾವಣೆಯಲ್ಲಿ ಮೂವರು ಅನುಮಾನಾಸ್ಪದವಾಗಿ ನಿಂತಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ತೆರಳಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ಐ ಮಂಜುನಾಥ್ ಮತ್ತು ಸಿಬ್ಬಂದಿಯನ್ನು ನೋಡುತ್ತಿದ್ದಂತೆ ಮೂವರು ಪರಾರಿಯಾಗಲು ಯತ್ನಿಸಿದ್ದಾರೆ.
ದಾವಣಗೆರೆ, ಚಿತ್ರದರ್ಗ, ಶಿವಮೊಗ್ಗದವರು
ಪರಾರಿಯಾಗುತ್ತಿದ್ದವರನ್ನು ಬೆನ್ನಟ್ಟಿ ಹಿಡಿದ ಪೊಲೀಸರು, ಪರಿಶೀಲನೆ ನಡೆಸಿದರು. ಇವರ ಬಳಿ 2 ಕೆ.ಜಿ 40 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ 61,200 ರೂ. ಎಂದು ಅಂದಾಜಿಸಲಾಗಿದೆ.
ದಾವಣಗೆರೆ ಜಗಳೂರಿನ ಸುರೇಶ್ (40), ಚಿತ್ರದುರ್ಗ ಚಳ್ಳಕೆರೆಯ ತಿಪ್ಪೇಶ್ (27), ಶಿವಮೊಗ್ಗ ಟಿಪ್ಪು ನಗರದ ಮುಬಾರಕ್ ಅಲಿಯಾಸ್ ರುಪಾಯಿ (20) ಎಂಬುವವರನ್ನು ಬಂಧಿಸಲಾಗಿದೆ.
ಎನ್’ಡಿಪಿಎಸ್ ಕಾಯ್ದೆ ಅಡಿ ಮೂವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.