SHIVAMOGGA LIVE NEWS | 5 DECEMBER 2023
BHADRAVATHI : ನಗರದ ರಂಗಪ್ಪ ಸರ್ಕಲ್ ಮತ್ತು ಅಂಡರ್ ಬ್ರಿಡ್ಜ್ ಬಳಿ ಪೊಲೀಸರು ಹಾಫ್ ಹೆಲ್ಮೆಟ್ (half helmet) ವಿರುದ್ಧ ಕಾರ್ಯಾಚರಣೆ ನಡೆಸಿದರು. ಇದೆ ವೇಳೆ ವಾಹನ ಸವಾರರಲ್ಲಿ ಸಂಚಾರ ನಿಯಮ ಕುರಿತು ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಚಾರ ನಿಯಮ ಪಾಲನೆ, ಹಾಫ್ ಹೆಲ್ಮೆಟ್ (half helmet) ಧರಿಸದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಯಿತು.
ಇದನ್ನೂ ಓದಿ – ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮೊದಲ ಪ್ರತಿಕ್ರಿಯೆ
ಭದ್ರಾವತಿ ಡಿವೈಎಸ್ಪಿ ನಾಗರಾಜ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ್, ನಗರ ವೃತ್ತದ ಇನ್ಸ್ಪೆಕ್ಟರ್ ಶ್ರೀಶೈಲ್, ಪಿಎಸ್ಐಗಳಾದ ಕೃಷ್ಣಕುಮಾರ್ ಮಾನೆ, ಶರಣಪ್ಪ, ರಮೇಶ್, ಜಯಪ್ಪ ಸೇರಿದಂತೆ ಸಿಬ್ಬಂದಿ ಇದ್ದರು.