ಶಿವಮೊಗ್ಗ ಲೈವ್.ಕಾಂ | SHIMOGA | 6 ಫೆಬ್ರವರಿ 2020
ಮನೆ ಬಾಗಿಲಿಗೆ ಅಕ್ರಮ ಮದ್ಯ ಪೂರೈಕೆಯಾಗಿ ಮಾರಾಟವಾಗುತ್ತಿದ್ದು ಅಬಕಾರಿ ಇಲಾಖೆ ತಡೆಯುತ್ತಿಲ್ಲ ಹಳ್ಳಿಯಲ್ಲಿ ಸಾರ್ವಜನಿಕವಾಗಿ ನೆಮ್ಮದಿ ವಾತಾವರಣ ಹಾಳಾಗಿದೆ ಎಂದು ಆರೋಪಿಸಿ ತೀರ್ಥಹಳ್ಳಿ ತಾಲೂಕು ಕಚೇರಿ ಮುಂಭಾಗ ಯುವ ಮುಖಂಡ ಕೆಳಕೆರೆ ಪೂರ್ಣೇಶ್ ಏಕಾಂಗಿಯಾಗಿ ಧರಣಿ ನಡೆಸಿದರು.
ಅಕ್ರಮ ಮದ್ಯ ಮಾರಾಟ ನಿಲ್ಲಿಸಿ, ಆರೋಪಿಗಳನ್ನು ಬಂಧಿಸುವರೆಗೆ ಹೋರಾಟ ಎಂಬ ಘೋಷಣೆಗಳ ಭಿತ್ತಿ ಪತ್ರ ಹಿಡಿದು ಪೂರ್ಣೇಶ ಧರಣಿ ಸತ್ಯಾಗ್ರಹ ಕೈಗೊಂಡರು.
ಮಾನವ ಹಕ್ಕುಗಳ ಹೋರಾಟಗಾರ್ತಿ ಗಾಯತ್ರಿ ಶೇಷಗಿರಿ, ಕೆಳಕೆರೆ ಸುರೇಶ್ ಮತ್ತಿತರರೂ ಧರಣಿ ಕುಳಿತರು, ಅಬಕಾರಿ ಆಯುಕ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ದಂಧೆ ವಿರುದ್ಧ ಕ್ರಮ ಕೈಗೊಳ್ಳುವ ಆದೇಶ ಹೊರಡಿಸುವವರೆಗೂ ಪ್ರತಿಭಟನೆ ಸ್ಥಳದಿಂದ ತೆರಳುವುದಿಲ್ಲ ಎಂದು ಆಗ್ರಹಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]