ಶಿವಮೊಗ್ಗ ಲೈವ್.ಕಾಂ | SHIMOGA NEWS | 24 DECEMBER 2020
ಶಿವಮೊಗ್ಗದ ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಕಚೇರಿಗೆ ಹಿರಿಯ ಅಧಿಕಾರಿಯೊಬ್ಬರು ಬೀಗ ಜಡಿದಿದ್ದಾರೆ. ಇದರು ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಬೀಗ ಜಡಿದಿದ್ದು ಯಾರು?
ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶಿವಮೊಗ್ಗದ ಡಿಎಆರ್ ಗ್ರೌಂಡ್ ಆವರಣದಲ್ಲಿರುವ ಐಎಸ್ಡಿ ಕಚೇರಿಗೆ ತೆರಳಿದ್ದರು. ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ, ಬೀಗ ಜಡಿದಿದ್ದಾರೆ.
VIDEO REPORT
ಬೀಗ ಹಾಕಲು ಕಾರಣವೇನು?
ಆಂತರಿಕ ಭದ್ರತಾ ವಿಭಾಗಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿರಲಿಲ್ಲ. ಯಾವುದೇ ದಾಳಿಗಳನ್ನು ಮಾಡಿದ ದಾಖಲೆಗಳು ಇರಲಿಲ್ಲ ಎಂದು ಹೇಳಲಾಗುತ್ತಿದೆ. ಇದು ಎಡಿಜಿಪಿ ಭಾಸ್ಕರ್ ರಾವ್ ಅವರನ್ನು ಕೆರಳಿಸಿದೆ. ಹಾಗಾಗಿ ತಾವೇ ಬೀಗ ಹಾಕಿ ತೆರಳಿದ್ದಾರೆ.
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಏನಿದು ಐಎಸ್ಡಿ ವಿಭಾಗ?
- ರಾಜ್ಯ ಸರ್ಕಾರ 2008ರಲ್ಲಿ ಆಂತರಿಕ ಭದ್ರತಾ ವಿಭಾಗವನ್ನು ಸ್ಥಾಪಿಸಿತು.
- ದೇಶ ವಿರೋಧಿ ಚಟುವಟಿಕೆಗಳ ಮಾಹಿತಿ ಸಂಗ್ರಹ, ಉಗ್ರ ಚಟುವಟಿಕೆಗಳ ನಿಗ್ರಹ ಪ್ರಮುಖ ಕಾರ್ಯ
- ಭಯೋತ್ಪಾದನೆ, ನಕ್ಸಲ್ ಚುಟುವಟಿಕೆ, ಹವಾಲ ದಂಧೆ, ನಕಲಿ ನೋಟು ಚಲಾವಣೆ, ಡ್ರಗ್ಸ್ ದಂಧೆ, ಸಂಘಟಿತ ಅಪರಾಧ ಚುಟುವಟಿಕೆಗಳ ನಿಯಂತ್ರಣ ಈ ವಿಭಾಗದ ಕರ್ತವ್ಯ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]