ಶಿವಮೊಗ್ಗ ಲೈವ್.ಕಾಂ |SHIMOGA NEWS | 25 NOVEMBER 2020
ಶಿವಮೊಗ್ಗದ ಮನೆಯೊಂದರಲ್ಲಿ, ಮಕ್ಕಳ ಸ್ಕೂಲ್ ಶೂ ಒಳಗೆ ಸೇರಿದ್ದ ಮರಿ ನಾಗರ ಹಾವನ್ನು ಸ್ನೇಕ್ ಕಿರಣ್ ಹಿಡಿದು, ರಕ್ಷಿಸಿದ್ದಾರೆ.
ಗುರುಪುರದ ಗೋವಿಂದಸ್ವಾಮಿ ಬಡಾವಣೆಯ ಡಾ.ಮನೋಜ್ ಕುಮಾರ್ ಅವರ ಕಾರ್ ಶೆಡ್ನಲ್ಲಿ ಮಕ್ಕಳ ಶೂಗಳನ್ನು ಇರಿಸಿದ್ದರು. ಶೂ ಒಂದರಲ್ಲಿ ಒಂದೂವರೆ ಅಡಿ ಉದ್ದದ ನಾಗರ ಹಾವಿನ ಮರಿ ಸೇರಿಕೊಂಡಿತ್ತು.
ಹಾವು ಇರುವುದು ತಿಳಿದು ಡಾ.ಮನೋಜ್ ಕುಮಾರ್ ಅವರು ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್, ಪರಿಶೀಲನೆ ನಡೆಸಿದಾಗ, ಶೂ ಒಳಗೆ ಹಾವು ಇರುವುದು ಗೊತ್ತಾಗಿದೆ. ಹಾವಿನ ಮರಿಯನ್ನು ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]