ಒಣಗುತ್ತಿವೆ ಬೆಳೆ, ಚಿಂತೆಗೀಡಾದ ರೈತ
ರಣ ಬಿಸಿಲು ರೈತ ಸಮುದಾಯವನ್ನು ಚಿಂತೆಗೀಡು ಮಾಡಿದೆ. ಭತ್ತ, ಜೋಳದ ಬೆಳೆಗೆ ಹೆಚ್ಚು ನೀರು ಬೇಕು. ವಿಪರೀತ ಬಿಸಿಲಿನಿಂದಾಗಿ ನೀರಿಲ್ಲದೆ ರೈತರು ಬೇಸಿಗೆ ಬೆಳೆಯ ಯೋಚನೆ ಕೈಬಿಟ್ಟಿದ್ದಾರೆ. ಪಂಪ್ ಸೆಟ್, ಬಾವಿಗಳ ನಿರೀಕ್ಷೆಯಲ್ಲಿ ಬೆಳೆ ಬೆಳೆದವರು ಈಗ ನೀರಿನ ಅಭಾವದಿಂದ ಪರಿತಪಿಸುತ್ತಿದ್ದಾರೆ. ಅಡಿಕೆ ತೋಟಗಳು ಕೂಡ ಒಣಗುತ್ತಿದ್ದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಮರಗಳನ್ನೆಲ್ಲ ಕಡಿದು ಈಗ ನೆರಳಿಗೆ ಹುಡುಕಾಟ
ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ನಗರದ ವಿವಿಧೆಡೆ ಮರಗಳ ಕಡಿತಲೆ ಮಾಡಲಾಗಿದೆ. ಈಗ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಬೆರಳೆಣಿಕೆ ಮರಗಳ ನೆರಳು ಅರಸುತ್ತಿದ್ದಾರೆ. ಮರದ ನೆರಳು ಇರುವೆಡೆ ವಾಹನಗಳ ಪಾರ್ಕಿಂಗ್ಗೆ ನೂಕುನುಗ್ಗಲು ಉಂಟಾಗುತ್ತಿದೆ. ಟ್ರಾಫಿಕ್ ಸಿಗ್ನಲ್ಗಳಲ್ಲಿ ಮರಗಳ ಕೆಳಗೆ, ಬಸ್ಸು, ಲಾರಿಗಳ ನೆರಳಿನಲ್ಲಿ ವಾಹನಗಳನ್ನು ನಿಲ್ಲಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.