ನಾಗರ ಪಂಚಮಿಯಂದೆ ಹಾವು ಕಡಿದು ಬಾಣಂತಿ ಸಾವು

Woman-succumbed-at-huttadinda-in-Sagara-snake-bite.

SAGARA, 9 AUGUST 2024 : ಮೇವು ತರಲು ತೆರಳಿದ್ದ ವೇಳೆ ಬಾಣಂತಿಯೊಬ್ಬರಿಗೆ (Woman) ಹಾವು ಕಡಿದು ಶುಕ್ರವಾರ ಮೃತಪಟ್ಟಿದ್ದಾರೆ. ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ಗದ್ದೆಯಲ್ಲಿ ಘಟನೆ ಸಂಭವಿಸಿದೆ. ರಂಜಿತಾ (22) ಮೃತರು. ಗದ್ದೆಯಲ್ಲಿ ಮೇವು ತರಲು ಹೋಗಿದ್ದಾಗ ಹಾವು ಕಡಿದಿದೆ. ಕುಟುಂಬದವರು ನೋಡಿದಾಗ ಬಾಣಂತಿ ರಂಜಿತಾ ಗದ್ದೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು.   ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತಾ ಮೃತಪಟ್ಟಿದ್ದಾರೆ. … Read more

ಅಡಿಕೆ ಧಾರಣೆ | 9 ಆಗಸ್ಟ್‌ 2024‌ | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

ADIKE RATE, 9 AUGUST 2024 : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕುಂದಾಪುರ ಮಾರುಕಟ್ಟೆ ಹಳೆ ಚಾಲಿ 45000 47000 ಹೊಸ ಚಾಲಿ 35000 38500 ಕೊಪ್ಪ ಮಾರುಕಟ್ಟೆ ಗೊರಬಲು 30799 33400 ಬೆಟ್ಟೆ 46599 54299 ರಾಶಿ 35199 51000 ಸರಕು 53369 80369 ಚಿತ್ರದುರ್ಗ ಮಾರುಕಟ್ಟೆ ಅಪಿ 49600 50000 ಕೆಂಪುಗೋಟು 29600 30000 ಬೆಟ್ಟೆ 35100 35500 ರಾಶಿ 49100 49500 ಬಂಟ್ವಾಳ ಮಾರುಕಟ್ಟೆ ಕೋಕ … Read more

ಶಿವಮೊಗ್ಗದ 73 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ, ಎರಡು ಲಕ್ಷ ರೂ. ದಂಡ, ಕಾರಣವೇನು?

Shimoga District Court

SHIMOGA, 9 AUGUST 2024 : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆ 73 ವರ್ಷದ ವ್ಯಕ್ತಿಯೊಬ್ಬರಿಗೆ ಜೀವಾವಧಿ ಶಿಕ್ಷೆ (Life Time) ವಿಧಿಸಿ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ 1 ನ್ಯಾಯಾಲಯ ಆದೇಶಿಸಿದೆ. ಏನಿದು ಪ್ರಕರಣ? 2023ರಲ್ಲಿ ಅಪ್ರಾಪ್ತೆ ಮೇಲೆ 73 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಇನ್ಸ್‌ಪೆಕ್ಟರ್‌ ಆರ್.ಎಲ್.ಲಕ್ಷ್ಮಿಪತಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ … Read more

ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ, ಹೊಸನಗರದಲ್ಲಿ ಹೃದಯವಿದ್ರಾವಕ ಘಟನೆ

Hosanagara-Champakapura-well-issue.

HOSANAGARA, 9 AUGUST 2024 : ಇಬ್ಬರು ಮಕ್ಕಳನ್ನು (Children) ಬಾವಿಗೆ ತಳ್ಳಿ ತಾನು ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ತಾಲೂಕು ಮತ್ತಿಕೈ ಗ್ರಾಮ ವ್ಯಾಪ್ತಿಯ ಚಂಪಕಾಪುರದಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ರಾಜೇಶ್‌ ಎಂಬುವವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ (12), ಸಂಪದ (6) ಮೃತರು. ಗುರುವಾರ ರಾತ್ರಿ ವಾಣಿ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಾವಿಯಿಂದ ಮೃತದೇಹವನ್ನು ಮೇಲೆತ್ತಲಾಗಿದೆ. ಘಟನೆಗೆ ನಿಖರ ಕಾರಣ … Read more

ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು ಎಷ್ಟಿದೆ ಒಳ ಹರಿವು? ನೀರಿನ ಮಟ್ಟ ಎಷ್ಟಿದೆ?

Bhadra-Dam-Water-Out-Flow

DAM LEVEL, 9 AUGUST 2024 : ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಆದ್ದರಿಂದ ಮೂರು ಪ್ರಮುಖ ಜಲಾಶಯಗಳ ಒಳ, ಹೊರ ಹರಿವು ಕಡಿಮೆಯಾಗಿದೆ. ಇದನ್ನೂ ಓದಿ ⇓ ಟಿಪ್ಪರ್‌, ಬೈಕ್‌ ಮಧ್ಯೆ ಅಪಘಾತ, ಯುವಕ ಸಾವು, ಮತ್ತೊಬ್ಬ ಸ್ಥಿತಿ ಗಂಭೀರ

ಟಿಪ್ಪರ್‌, ಬೈಕ್‌ ಮಧ್ಯೆ ಅಪಘಾತ, ಯುವಕ ಸಾವು, ಮತ್ತೊಬ್ಬ ಸ್ಥಿತಿ ಗಂಭೀರ

Avinahalli-mishap-youth-succumbed-sagara.

SAGARA, 9 AUGUST 2024 : ಆವಿನಹಳ್ಳಿ ಬಳಿ ಬೈಕ್‌ ಮತ್ತು ಟಿಪ್ಪರ್‌ (Tipper) ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಗಂಭೀರ ಗಾಯಗೊಂಡಿದ್ದು ಕುಂದಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಿನಕಾರು ಗ್ರಾಮದ ಸಚಿನ್‌ (19) ಮೃತ ದುರ್ದೈವಿ. ಬೈಕ್‌ ಚಲಾಯಿಸುತ್ತಿದ್ದ ಸುಮಂತ್‌ ಗಂಭೀರ ಗಾಯೊಂಡಿದ್ದಾನೆ. ಹೇಗಾಯ್ತು ಅಪಘಾತ? ಸಾಗರದಿಂದ ಗೆಣಸಿನಕುಣಿ ಕಡೆಗೆ ತೆರಳುತ್ತಿದ್ದ ಟಿಪ್ಪರ್‌ ಲಾರಿ ಮತ್ತು ಕಟ್ಟಿನಕಾರು ಸಮೀಪದ ಪಡಬೀಡು ಗ್ರಾಮದಿಂದ ಸಾಗರಕ್ಕೆ ತೆರಳುತ್ತಿದ್ದ ಬೈಕ್‌ ಮಧ್ಯೆ ಅಪಘಾತವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ … Read more