ಗಣಪತಿ ಮೆರವಣಿಗೆ ವೇಳೆ ಡಿವೈಎಸ್ಪಿ ಜೀಪಿನ ಗಾಜು ಪೀಸ್ ಪೀಸ್, ಆಗಿದ್ದೇನು?
ಶಿಕಾರಿಪುರ: ಗಣಪತಿ ಮೆರವಣಿಗೆ ವೇಳೆ ಪಟಾಕಿ ಸಿಡಿದು ಡಿವೈಎಸ್ಪಿ ಜೀಪಿನ (Jeep) ಗಾಜು ಒಡೆದಿದೆ. ಈ ಸಂಬಂಧ ಆಯೋಜಕರ ವಿರುದ್ಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕಾರಿಪುರದ ಮಾಸೂರು ಸರ್ಕಲ್ ಬಳಿ ಗಣಪತಿ ಮೆರವಣಿಗೆ ವೇಳೆ ಘಟನೆಯಾಗಿದೆ. ಡಿವೈಎಸ್ಪಿ ಅವರು ಇಲ್ಲಿನ ಮಸೀದಿ ಬಳಿ ಬಂದೋಬಸ್ತ್ಗೆ ತೆರಳಿದ್ದರು. ಜೀಪ್ ಚಾಲಕ ಹರೀಶ್, ಮಾಸೂರು ಸರ್ಕಲ್ನಲ್ಲಿ ಜೀಪ್ ನಿಲ್ಲಿಸಿದ್ದರು. ಗಣಪತಿ ಮೆರವಣಿಗೆ ವೇಳೆ ಯುವಕರ ಗುಂಪು ರಸ್ತೆ ಮಧ್ಯೆ ಅಂಟಿಸಿದ ಪಟಾಕಿ ಸಿಡಿದು ಜೀಪಿನ ಗ್ಲಾಸ್ಗೆ ತಗುಲಿ ಒಡೆದಿದೆ … Read more