ಗುಡ್ಡದಿಂದ ಇಳಿದು ಬಂದ ಹುಲಿ, ಹಸುವಿನ ಮೇಲೆ ದಾಳಿ

Sagara-News-Update.

ಸಾಗರ : ತಾಲೂಕಿನ ಕರೂರು ಹೋಬಳಿಯ ಕುದರೂರು ಗ್ರಾಮದಲ್ಲಿ ಹಸುವೊಂದರ ಮೇಲೆ ಹುಲಿ (Tiger) ದಾಳಿ ನಡೆಸಿ ಕೊಂದಿದೆ. ಹಸು ಕುದರೂರು ಗ್ರಾಮದ ಗಣಪತಿ ತೇಕಲೆ ಅವರಿಗೆ ಸೇರಿದ್ದಾಗಿದೆ. ಗೋಮಾಳದಲ್ಲಿ ಹಸುವನ್ನು ಮೇಯಲು ಬಿಡಲಾಗಿತ್ತು. ಈ ಸಂದರ್ಭ ತೇಕಲೆ ಗುಡ್ಡದಿಂದ ಬಂದ ಹುಲಿಯು ದಾಳಿ ನಡೆಸಿದೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಅತಿ ಹೆಚ್ಚು ಬಿಸಿಲು, ಉಳಿದ ತಾಲೂಕುಗಳಲ್ಲಿ ಹೇಗಿದೆ ಸೂರ್ಯನ ಅಬ್ಬರ?

3 ತಿಂಗಳಿಂದ ಸೇವೆ ಇಲ್ಲ, ತಪ್ಪಲಿಲ್ಲ ಶರಾವತಿ ಹಿನ್ನೀರು ಭಾಗದ ಜನರ ಅಲೆದಾಟ, ಇನ್ನಾದರೂ ಕಣ್ಣು ತೆರೆಯುತ್ತಾ ಆಡಳಿತ?

Karuru-Hobli-nada-kacheri-network-issue-

SHIVAMOGGA LIVE NEWS | 17 AUGUST 2023 BYKODU : ‘ಆಧಾರ ನೀನೆ ಎಂದು ಲೋಕ ನಂಬಿದೆʼ ಎಂಬ ಗೀತೆಯಂತೆ ಎಲ್ಲ ಸರ್ಕಾರಿ ಸೌಲಭ್ಯ ಪಡೆಯಲು ಸರ್ಕಾರ ಆಧಾರ್ ಕಾರ್ಡ್‌ ಕಡ್ಡಾಯಗೊಳಿಸಿದೆ. ಆದರೆ ಆಧಾರ್ ಕಾರ್ಡ್‌ ನೀಡುವ ಜವಾಬ್ದಾರಿ ಹೊತ್ತ ನೋಂದಣಿ ಕೇಂದ್ರಗಳು (Registration Centre) ಮಾತ್ರ ಮೂಲ ಸೌಕರ್ಯದ ಸಮಸ್ಯೆ ಎದುರಿಸುತ್ತಿದೆ. ಹಾಗಾಗಿ ಶರಾವತಿ ಹಿನ್ನೀರು (Sharavati Backwater) ಭಾಗದ ಜನರು ಪರದಾಡುವಂತಾಗಿದೆ. ಕರೂರು ಹೋಬಳಿ ವ್ಯಾಪ್ತಿಯ ಸುಳ್ಳಳ್ಳಿ ಮತ್ತು ತುಮರಿಯಲ್ಲಿ ಆಧಾರ್‌ ನೋಂದಣಿ, … Read more