ಸಾಗರ, ಹೊಸನಗರದ 10,377 ಎಕರೆ ಮಂಜೂರಾತಿ ರದ್ದುಪಡಿಸಿ ಅರಣ್ಯಕ್ಕೆ ಸೇರ್ಪಡೆಗೆ ಒತ್ತಾಯ

himoga-DC-office-and-Police-jeep-in-front-of-office

ಶಿವಮೊಗ್ಗ: ಸಾಗರ ಮತ್ತು ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ಕೆಪಿಸಿಗೆ ಮಂಜೂರಾಗಿರುವ ಅರಣ್ಯ ಪ್ರದೇಶಗಳ ಮಂಜೂರಾತಿ ರದ್ದುಪಡಿಸಿ ಅರಣ್ಯಕ್ಕೆ (Forest) ಸೇರ್ಪಡೆ ಮಾಡುವಂತೆ ಜನಸಂಗ್ರಾಮ ಪರಿಷತ್ ಸಂಚಾಲಕ ಗಿರೀಶ್ ಆಚಾ‌ರ್ ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಈ ಬಗ್ಗೆ ಮನವಿ ಸಲ್ಲಿಸಿ, 1984ರಲ್ಲಿ ಸಾಗರ ಉಪವಿಭಾಗಾಧಿಕಾರಿಗಳ ಆದೇಶದಂತೆ ಎರಡೂ ತಾಲೂಕುಗಳ ವ್ಯಾಪ್ತಿಯಲ್ಲಿ 10,377 ಎಕರೆ ಅಧಿಸೂಚಿತ ಅರಣ್ಯ ಭೂಮಿಯನ್ನು ಕರ್ನಾಟಕ ವಿದ್ಯುತ್‌ ನಿಗಮಕ್ಕೆ ಮಂಜೂರು ಮಾಡಲಾಗಿದೆ. ಅಧಿಸೂಚಿತ ಅರಣ್ಯ ಪ್ರದೇಶವನ್ನು ವರ್ಗಾವಣೆ ಮಾಡುವ ಮುನ್ನ ಅರಣ್ಯ ಸಂರಕ್ಷಣಾ ಕಾಯಿದೆ ಅನ್ವಯ … Read more

ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್, ಏನಿದು?

Water-Salute-For-First-Flight-in-Shimoga

SHIVAMOGGA LIVE NEWS | 21 FEBRURARY 2023 SHIMOGA : ಸೋಗಾನೆ ವಿಮಾನ ನಿಲ್ದಾಣಕ್ಕೆ ವಾಯು ಸೇನೆಯ ಬೋಯಿಂಗ್ ವಿಮಾನ ಬಂದಿಳಿದಿದೆ. ವಿಮಾನ ಲ್ಯಾಂಡಿಂಗ್ ಆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಾಟ್ಸಪ್ ಸ್ಟೇಟಸ್, ಫೇಸ್ ಬುಕ್, ಇನ್ ಸ್ಟಾಗ್ರಾಂಗಳಲ್ಲಿ ವಿಮಾನದ ಲ್ಯಾಂಡಿಂಗ್ ವಿಡಿಯೋ ರಾರಾಜಿಸುತ್ತಿದೆ. (Water Salute) ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್ ವಿಮಾನಯಾನ ಕ್ಷೇತ್ರದಲ್ಲಿ ವಾಟರ್ ಸಲ್ಯೂಟ್ ನೀಡುವುದು ಪದ್ಧತಿ. ಸಂಭ್ರಮಾಚರಣೆ ವೇಳೆ ವಟರ್ ಸಲ್ಯೂಟ್ (Water Salute) ನೀಡಲಾಗುತ್ತದೆ. ಅದರಂತೆ … Read more

ಕಾಟಾಚಾರದ ಭೇಟಿಯಿಂದ ಕೋಟ್ಯಂತರ ರೂಪಾಯಿ ವ್ಯರ್ಥ, ಸಿಎಂ ಶಿವಮೊಗ್ಗ ಭೇಟಿ ವಿರುದ್ಧ ಆಕ್ರೋಶ

Thi-Na-Srinivas-and-CM-Bommai.

SHIVAMOGGA LIVE NEWS | POLITICAL | 22 ಏಪ್ರಿಲ್ 2022 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 2 ದಿನಗಳ ಜಿಲ್ಲಾ ಭೇಟಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಇದೊಂದು ಕಾಟಾಚಾರದ ಭೇಟಿಯಾಗಿತ್ತು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಮುಖಂಡ ತೀ.ನ.ಶ್ರೀನಿವಾಸ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆಲ್ಲ ಮುಖ್ಯಮಂತ್ರಿಗಳು ಯಾವುದೇ ಜಿಲ್ಲೆಗೆ ಭೇಟಿ ನೀಡಿದರೂ ಅಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದರು. ಆಯಾ ಜಿಲ್ಲೆಗಳ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ, ಸಾಧ್ಯವಾದಲ್ಲಿ ಅಲ್ಲಿಯೇ ಪರಿಹಾರ ಒದಗಿಸುತ್ತಿದ್ದರು ಎಂದರು. … Read more