ಶಿವಮೊಗ್ಗದ ವಿವಿಧೆಡೆ ಇ.ಡಿ ದಾಳಿ, ಬೆಂಗಳೂರಿನಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥಗೌಡ ವಿಚಾರಣೆ

ED-Raid-in-Shimoga-over-DCC-Bank-fake-gold-scam

ಶಿವಮೊಗ್ಗ : ನಕಲಿ ಚಿನ್ನ ಅಡಮಾನ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶಿವಮೊಗ್ಗದ ವಿವಿಧೆಡೆ ದಾಳಿ ನಡೆಸಿದೆ. ಇನ್ನೊಂದೆಡೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (DCC) ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಏನಿದು ಕೇಸ್‌? 2014 – 15ರಲ್ಲಿ ಶಿವಮೊಗ್ಗದ DCC ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 62.77 ಕೋಟಿ ರೂ. ಸಾಲ ಪಡೆಯಲಾಗಿತ್ತು ಎಂಬ ಆರೋಪವಿದೆ. ಈ ಪ್ರಕರಣ ಸಂಬಂಧ ಇ.ಡಿ ತನಿಖೆ ನಡೆಸುತ್ತಿದೆ. ಇವತ್ತು ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ … Read more

ತೀರ್ಥಹಳ್ಳಿಯ ದೀಕ್ಷಾ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌, ಇಲ್ಲಿದೆ ಫಟಾಫಟ್‌ ಸಂದರ್ಶನ

Thirthahalli-Deeksha-First-rank-in-PUC-Science

ತೀರ್ಥಹಳ್ಳಿ : ಮೇಲಿನಕುರುವಳ್ಳಿಯ ವಾಗ್ದೇವಿ ಪದವಿ ಪೂರ್ವ ಕಾಲೇಜಿನಲ್ಲಿ ದೀಕ್ಷಾ.ಆರ್‌ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 599 ಅಂಕ ಗಳಿಸಿ ಪ್ರಥಮ ರ‍್ಯಾಂಕ್‌ (RANK) ಪಡೆದಿದ್ದಾರೆ. ಇನ್ನು, ಪ್ರಥಮ ಸ್ಥಾನ (RANK) ಪಡೆದಿರುವ ಕುರಿತು ದೀಕ್ಷಾ.ಆರ್‌ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದರು. ದೀಕ್ಷಾ ಜೊತೆಗೆ ಕಿರು ಸಂದರ್ಶನ » ಪೋಷಕರು ಹೇಗೆ ನೆರವಾದರು? ಪೋಷಕರು ಇಬ್ಬರು ಶಿಕ್ಷಕರು. ಅಪ್ಪ ರಾಘವೇಂದ್ರ ಕಲ್ಕೂರು. ಮೇಗರವಳ್ಳಿ ಶಾಲೆಯಲ್ಲಿ ಶಿಕ್ಷಕ. ತಾಯಿ ಉಷಾ.ವಿ. ತೀರ್ಥಹಳ್ಳಿಯ ಬಾಲಕಿಯ ಪ್ರೌಢಶಾಲೆಯಲ್ಲಿ … Read more

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಶಿವಮೊಗ್ಗ ಜಿಲ್ಲೆಗೆ ಎಷ್ಟನೆ ಸ್ಥಾನ? ಇಲ್ಲಿದೆ ರಿಸಲ್ಟ್‌ ಹೈಲೈಟ್ಸ್‌

Education News Shimoga Live Update

ಬೆಂಗಳೂರು : ದ್ವಿತೀಯ ಪಿ.ಯು. ಪರೀಕ್ಷೆ ಫಲಿತಾಂಶ (Result) ಪ್ರಕಟಗೊಂಡಿದೆ. ಈ ಬಾರಿ ಶಿವಮೊಗ್ಗ ಜಿಲ್ಲೆ 7ನೇ ಸ್ಥಾನ ಪಡೆದಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪಿ.ಯು.ಸಿ ಫಲಿತಾಂಶ ಪ್ರಕಟಿಸಿದೆ. ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ, ಬೆಂಗಳೂರು ದಕ್ಷಿಣ ತೃತೀಯ ಸ್ಥಾನ ಪಡೆದಿದೆ. ಇಲ್ಲಿದೆ ಫಲಿತಾಂಶದ ಹೈಲೈಟ್ಸ್‌ » ಕಲಾ, ವಾಣಿಜ್ಯ ಮತ್ತು ವಿಜ್ಞಾನದ ವಿಭಾಗದಿಂದ ರಾಜ್ಯದಲ್ಲಿ ಒಟ್ಟು 6.37 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. 4.68 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. … Read more

ಶಿವಮೊಗ್ಗ ಈದ್ಗಾ ಮೈದಾನಕ್ಕೆ ಸಿಸಿಟಿವಿ ಕ್ಯಾಮರಾ ಕಣ್ಗಾವಲು, ಎಷ್ಟು ಕ್ಯಾಮರಾ ಅಳವಡಿಸಲಾಗಿದೆ?

CCTV-Cameras-installed-at-Shimoga-Edga-maidan

ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿ ಎದುರಿನ ಈದ್ಗಾ ಮೈದಾನಕ್ಕೆ ಭದ್ರತೆ ಹೆಚ್ಚಳ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನದ ಸುತ್ತಲು CCTV ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈದ್ಗಾ ಮೈದಾನದ ಮಾಲೀಕತ್ವ ವಿವಾದದ ಬೆನ್ನಿಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಈದ್ಗಾ ಮೈದಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಇಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈಗ ಈದ್ಗಾ ಮೈದಾನದ ಸುತ್ತಲು CCTV ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮೈದಾನದ ಸುತ್ತಲು ಒಟ್ಟು 14 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಅಧಿಕಾರಿಗಳು ಇದನ್ನು ಪರಿಶೀಲಿಸುತ್ತಿದ್ದಾರೆ. … Read more

ಅಡಿಕೆ ಧಾರಣೆ | 7 ಏಪ್ರಿಲ್‌ 2025 | ಶಿವಮೊಗ್ಗದಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ : ಶಿವಮೊಗ್ಗ ಮಾರುಕಟ್ಟೆಯಲ್ಲಿ ಸೋಮವಾರದ ಅಡಿಕೆ ಧಾರಣೆ (Adike Rate) ಶಿವಮೊಗ್ಗ ಮಾರುಕಟ್ಟೆ ಗೊರಬಲು 17169 25559 ಬೆಟ್ಟೆ 50599 55599 ರಾಶಿ 42669 54689 ಸರಕು 62799 62799 ‌ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಹೆಚ್ಚಿದ ತಾಪಮಾನ, ಇವತ್ತು ಎಲ್ಲೆಲ್ಲಿ ಎಷ್ಟಿದೆ ಉಷ್ಣಾಂಶ?

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಹೆಚ್ಚಿದ ತಾಪಮಾನ, ಇವತ್ತು ಎಲ್ಲೆಲ್ಲಿ ಎಷ್ಟಿದೆ ಉಷ್ಣಾಂಶ?

WEATHER-REPORT-SHIMOGA-

ಹವಾಮಾನ ವರದಿ : ಕಳೆದ ಮೂರ್ನಾಲ್ಕು ದಿನದಿಂದ ಜಿಲ್ಲೆಯ ವಿವಿಧೆಡೆ ಮಳೆಯಾಗಿತ್ತು. ಇದರಿಂದ ವಾತಾವರಣ ತುಸು ತಂಪಾಗಿತ್ತು. ಆದರೆ ಪುನಃ ಬಿಸಿಲಿನ ಅಬ್ಬರಕ್ಕೆ ಇಳೆ ಧಗಧಗಿಸುತ್ತಿದೆ. ಶಕೆ ಮುಂದುವರೆದಿದ್ದು ತಾಪಮಾನ ತುಸು ಏರಿಕೆಯಾಗಿದೆ (Weather Report). ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ? ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 36 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. … Read more

ಆಲ್ಕೊಳ ಬಳಿ ನಿರ್ಮಾಣ ಹಂತದ ಮನೆಯಲ್ಲಿ ಲಕ್ಷ ಲಕ್ಷದ ಪ್ಲಂಬಿಂಗ್‌ ವಸ್ತುಗಳು ನಾಪತ್ತೆ, ಹೇಗಾಯ್ತು ಘಟನೆ?

Crime-News-General-Image

ಶಿವಮೊಗ್ಗ : ನಿರ್ಮಾಣ ಹಂತದ ಮನೆಯಲ್ಲಿಟ್ಟಿದ್ದ ಪ್ಲಂಬಿಂಗ್‌ (Plumbing) ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ. ಆಲ್ಕೊಳದ ಐಶ್ವರ್ಯ ಎನ್‌ಕ್ಲೇವ್‌ ಬಡಾವಣೆಯಲ್ಲಿ ಶ್ರೀಹರ್ಷ ಎಂಬುವವರು ನಿರ್ಮಿಸುತ್ತಿರುವ ಮನೆಯಲ್ಲಿ ಸುಮಾರು 2.50 ಲಕ್ಷ ಮೌಲ್ಯದ ಪ್ಲಂಬಿಂಗ್‌ ವಸ್ತುಗಳು ಕಳ್ಳತನವಾಗಿವೆ. ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ ಪ್ಲಂಬಿಂಗ್‌ (Plumbing) ಸಾಮಗ್ರಿಗಳನ್ನು ನಿರ್ಮಾಣ ಹಂತದ ಮನೆಯ ಬೆಡ್‌ ರೂಮ್‌ ಮತ್ತು ಹೆಡ್‌ ರೂಮ್‌ಗಳಲ್ಲಿ ಇರಿಸಿ ಬಾಗಿಲು ಹಾಕಲಾಗಿತ್ತು. ಮಾ.27ರಂದು ಬೆಳಗ್ಗೆ ಶ್ರೀಹರ್ಷ ಮನೆಗೆ ಬಂದಾಗ … Read more

ಗೋಪಿ ಸರ್ಕಲ್‌ನಲ್ಲಿ ದಿನಸಿ ಖರೀದಿಸಿ ಮನೆಗೆ ಮರಳಿದ ದಂಪತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Police-Jeep-at-Shimoga-General-Image

ಶಿವಮೊಗ್ಗ : ದಿನಸಿ ಖರೀದಿಸಿ ಹಿಂತಿರುಗುವಷ್ಟರಲ್ಲಿ ಮನೆಯಲ್ಲಿ (House) ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾಗಿದೆ. ಸವಳಂಗ ರಸ್ತೆಯ ಜ್ಯೋತಿನಗರದ ಪ್ರಕಾಶ್‌ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಪ್ರಕಾಶ್‌ ಅವರು ತಮ್ಮ ಪತ್ನಿಯೊಂದಿಗೆ ಗೋಪಿ ಸರ್ಕಲ್‌ನಲ್ಲಿ ದಿನಸಿ ಖರೀದಿಗೆ ತೆರಳಿದ್ದರು. ಮನೆಗೆ (House) ಹಿಂತಿರುಗಿ ಬೆಡ್‌ ರೂಂಗೆ ಹೋದಾಗ ಚಿನ್ನಾಭರಣದ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಬೀರುವಿನಲ್ಲಿಟ್ಟಿದ್ದ 9 ಲಕ್ಷ ರೂ. ಮೌಲ್ಯದ ವಿವಿಧ ಚಿನ್ನಾಭರಣಗಳು, 51 ಸಾವಿರ ರೂ. ನಗದು ನಾಪತ್ತೆಯಾಗಿವೆ ಎಂದು … Read more

ಕುಡಿಯುವ ನೀರಿನ ಘಟಕದ ಕಾಯಿನ್‌ ಬಾಕ್ಸ್‌ ಒಡೆದು ಹಣ ದೋಚಿದ ಖದೀಮರು, ಎಲ್ಲಿ?

Police-Jeep-With-Light-New.

ಶಿವಮೊಗ್ಗ : ಶುದ್ಧ ಕುಡಿಯುವ ನೀರಿನ ಘಟಕದಲ್ಲಿರುವ ಕಾಯಿನ್‌ ಬಾಕ್ಸ್‌ (Coin Box) ಒಡೆದು ಹಣ ಕಳ್ಳತನ ಮಾಡಲಾಗಿದೆ. ಗೆಜ್ಜೇನಹಳ್ಳಿಯಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಘಟಕದಲ್ಲಿ ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ವತಿಯಿಂದ ಗೆಜ್ಜೇನಹಳ್ಳಿಯಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. 5 ರೂ. ಕಾಯಿನ್‌ ಹಾಕಿದರೆ 20 ಲೀಟರ್‌ ಶುದ್ಧ ಕುಡಿಯುವ ನೀರು ಬರುತ್ತದೆ. ಕಳೆದ ಗುರುವಾರ ನೀರಿನ ಘಟಕದ ಕಾಯಿನ್‌ ಬಾಕ್ಸ್‌  (Coin Box) ಒಡೆದು ಸುಮಾರು 8 ಸಾವಿರ ರೂ. ಹಣ ದೋಚಲಾಗಿದೆ ಎಂದು … Read more

ಬೆಳಗ್ಗೆ ಜಿಮ್‌ಗೆ ತೆರಳಲು ಮನೆಯಿಂದ ಹೊರ ಬಂದ ಯುವಕನಿಗೆ ಆಘಾತ, ಆಗಿದ್ದೇನು?

bike theft reference image

ಶಿವಮೊಗ್ಗ : ಮನೆ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದ ಎರಡು ಬೈಕುಗಳನ್ನು ರಾತ್ರೋರಾತ್ರಿ ಕಳ್ಳತನ (Theft) ಮಾಡಲಾಗಿದೆ. ಎಲ್‌.ಬಿ.ಎಸ್‌ ನಗರದಲ್ಲಿ ಘಟನೆ ಸಂಭವಿಸಿದೆ. ರಾಜ್‌ಕಮಲ್‌ ಮತ್ತು ರಾಜೇಶ್‌ ಎಂಬುವವರ ಬೈಕುಗಳು ಕಳ್ಳತನವಾಗಿವೆ. ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್‌ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ ರಾಜ್‌ಕಮಲ್‌ ಅವರ ಮನೆಯ ಕೆಳಗೆ ರಾಜೇಶ್‌ ಎಂಬುವವರು ಬಾಡಿಗೆಗೆ ವಾಸವಾಗಿದ್ದಾರೆ. ಇಬ್ಬರ ಬೈಕುಗಳನ್ನು ಮನೆಯ ಕಾಂಪೌಂಡ್‌ನ ಒಳಗೆ ರಾತ್ರಿ ನಿಲ್ಲಿಸಲಾಗಿತ್ತು. ರಾಜ್‌ಕಮಲ್‌ ಬೆಳಗ್ಗೆ ಜಿಮ್‌ಗೆ ತೆರಳಲು ಹೊರ ಬಂದಾಗ ಎರಡು … Read more