ಬ್ಯಾಂಕ್ ನೊಟೀಸ್, ವಿಷ ಸೇವಿಸಿದ್ದ ರೈತ ಚಿಕಿತ್ಸೆ ಫಲಿಸದೆ ಸಾವು

farmer suicide poison

SHIVAMOGGA LIVE NEWS | SORABA | 5 ಜುಲೈ 2022 ಸಾಲ ಕಟ್ಟುವಂತೆ ಬ್ಯಾಂಕ್’ನಿಂದ ನೊಟೀಸ್ ಬಂದ ಹಿನ್ನೆಲೆ ಮನನೊಂದು ರೈತರೊಬ್ಬರು (FARMER) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೊರಬ ತಾಲೂಕು ಗುಡ್ಡೆಕೊಪ್ಪದ ರೈತರ ಗಜೇಂದ್ರ (27) ಮೃತ ದುರ್ದೈವಿ. ಜೂನ್ 26ರಂದು ಗಜೇಂದ್ರ, ತಮ್ಮ ಮನೆಯಲ್ಲಿಯೆ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತರಾಗಿದ್ದಾರೆ. ಗಜೇಂದ್ರ ಅವರು ಕೃಷಿ ಚಟುವಟಿಕೆಗಾಗಿ ಆರು ವರ್ಷದ ಹಿಂದೆ ಬ್ಯಾಂಕ್ … Read more

ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿದ ಲಾರಿ, ಮುಂಭಾಗ ನುಜ್ಜುಗುಜ್ಜು

Truck-collission-to-divider-in-Sagara-Soraba-road

SHIVAMOGGA LIVE NEWS | SAGARA | 3 ಜುಲೈ 2022 ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು (TRUCK ACCIDENT) ಡಿವೈಡರ್’ಗೆ ಡಿಕ್ಕಿ ಹೊಡೆದು, ಡಿವೈಡರ್ ಮೇಲೆ ಹತ್ತಿದೆ. ಲಾರಿಗೆ ಸಂಪೂರ್ಣ ಹಾನಿಯಾಗಿದೆ. ಸಾಗರದ ಸೊರಬ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಡಿವೈಡರ್’ಗೆ ಡಿಕ್ಕಿ ಹಡೆದಿದೆ. ಲಾರಿ  (TRUCK ACCIDENT) ಮುಂಭಾಗದ ಚಕ್ರಗಳು ಕಳಚಿಕೊಂಡಿದ್ದು, ಸಂಪೂರ್ಣ ಹಾನಿಯಾಗಿದೆ. ‘ಸೂಚನಾ ಫಲಕ ಇಲ್ಲ’ ಸಾಗರದ ಸೊರಬ ರಸ್ತೆಯಲ್ಲಿ ಕೆಲವು ಮೀಟರ್’ನಷ್ಟು ಉದ್ದ ಡಿವೈಡರ್ ನಿರ್ಮಿಸಲಾಗಿದೆ. … Read more

‘ಹೀಗೆ ಮಾಡಿದರಷ್ಟೆ ಮಾಜಿ ಸಿಎಂ ಬಂಗಾರಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ’

Thi-Na-Srinivas-General-Image

SHIVAMOGGA LIVE NEWS | SORABA | 11 ಜೂನ್ 2022 ಬಗರ್‌ಹುಕುಂ ಮತ್ತು ಅರಣ್ಯಹಕ್ಕು ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡಿದಾಗ ಮಾತ್ರ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದು ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಹೇಳಿದರು. farmers world ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನ.ಶ್ರೀನಿವಾಸ್ ಅವರು, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು … Read more

ರಾತ್ರೋರಾತ್ರಿ ಟ್ರಾಕ್ಟರ್’ಗಳಿಂದ ಬ್ಯಾಟರಿ ಮಾಯ, ರೈತರ ಆಕ್ರೋಶ

soraba anavatti graphics

SHIVAMOGGA LIVE NEWS | SORABA | 8 ಜೂನ್ 2022 ಮನೆ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್’ಗಳ ಬ್ಯಾಟರಿ (BATTERY) ಕಳವು ಮಾಡಲಾಗಿದೆ. ರೈತರು ಬೆಳಗ್ಗೆ ಟ್ರಾಕ್ಟರ್ ಬಳಿ ಬಂದಾಗ ವಿಚಾರ ಗೊತ್ತಾಗಿದೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಘಟನೆ ಸಂಭವಿಸಿದೆ. ಹೆದ್ದಾರಿ ಪಕ್ಕದಲ್ಲಿರುವ ಮನೆಗಳ ಮುಂದೆ ನಿಲ್ಲಿಸಿದ್ದ ಕೆಲವು ಟ್ರಾಕ್ಟರ್’ಗಳಲ್ಲಿ ಬ್ಯಾಟರಿ ಕಳ್ಳತನ ಮಾಡಲಾಗಿದೆ. ಲಕ್ಷಣಪ್ಪ ತೊರವಂದ, ಮುತ್ತೇಶ್ ತಲ್ಲೂರು, ಬೆಣ್ಣೆ ಸುರೇಶ್, ನಂದೀಶ್ ಗೌಡ, ತಮ್ಮಣ್ಣ ನಾಯ್ಕ ಎಂಬುವವರಿಗೆ ಸೇರಿದ ಟ್ರಾಕ್ಟರ್’ಗಳಲ್ಲಿ ಬ್ಯಾಟರಿ ಕಳ್ಳತನ ಮಾಡಲಾಗಿದೆ. … Read more

ನಡು ರಸ್ತೆಯಲ್ಲಿ ಕುಳಿತು ಜನರ ಆಕ್ರೋಶ, ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ತೀವ್ರ

Soraba-Namadeva-Galli-Residents-protest

SHIVAMOGGA LIVE NEWS | FACILITY | 5 ಜೂನ್ 2022 ಸೊರಬ ಮುಖ್ಯರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಾಮದೇವ ಗಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚರಂಡಿ ವಿರುದ್ಧ ಜನಾಕ್ರೋಶಕ್ಕೆ ಕಾರಣ ಕಾರಣ 1 – ಸುಮಾರು ಒಂದು ಕಿ.ಮೀ. ವ್ಯಾಪ್ತಿಯ ಕೊಳಚೆ ನೀರು ನಾಮದೇವ ಗಲ್ಲಿ ಚರಂಡಿಗೆ ಹರಿಸಲು ಯೋಜಿಸಲಾಗಿದೆ. ಹೊಟೇಲ್ ತ್ಯಾಜ್ಯವು ಇದರಲ್ಲಿ ಬರಲಿದೆ. ಈಗಾಗಲೆ ಎರಡು ಹೊಟೇಲ್ … Read more

ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ಧ ಅವಿಶ್ವಾಸ ನಿರ್ಣಯ

SORABA-NEWS

SHIVAMOGGA LIVE NEWS | PRESIDENT | 4 ಜೂನ್ 2022 ಸೊರಬ ತಾಲೂಕು ಶಕುನವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಆದರೆ ಈ ಸಭೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರೆ ಗೈರಾಗಿದ್ದರು. ಶಕುನವಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಸಾಗರ ಉಪ ವಿಭಾಗಾಧಿಕಾರಿ ಡಾ ಎಲ್.ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ, ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಒಟ್ಟು 14 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ 12 ಮಂದಿ ಅಧ್ಯಕ್ಷ ಚಂದ್ರಶೇಖರ … Read more

ಗ್ರಾಮ ದೇವತೆಗೆ ವೈಭವದ ರಥ, ಗ್ರಾಮ ಸಮಿತಿಗೆ ಹಸ್ತಾಂತರ

Soraba-Lakkavalli-Galyamma-Devi-Ratha

SHIVAMOGGA LIVE NEWS | RATHA | 4 ಜೂನ್ 2022 ಸೊರಬ ತಾಲೂಕು ಲಕ್ಕವಳ್ಳಿಯ ಗ್ರಾಮ ದೇವತೆ ಗಾಳ್ಯಮ್ಮದೇವಿಗೆ ನೂತನ ತೇರನ್ನು ನಿರ್ಮಿಸಲಾಗಿದೆ. ಕಲಾವಿದ ಸೂರಜ್ ಗುಡಿಗಾರ್ ಅವರು ರಥವನ್ನು ಗ್ರಾಮ ಸಮಿತಿಗೆ ಹಸ್ತಾಂತರ ಮಾಡಿದರು. ಆರು ತಿಂಗಳ ಅವಧಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ರಥವನ್ನು ನಿರ್ಮಾಣ ಮಾಡಲಾಗಿದೆ. ಕಲಾವಿದ ಸೂರಜ್ ಗುಡಿಗರ್ ಅವರ ಕಾರ್ಯಕ್ಕೆ ಲಕ್ಕವಳ್ಳಿ ಜನರು ಮತ್ತು ಗಾಳ್ಯಮ್ಮ ದೇವಿಯ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಐದು ವರ್ಷಕ್ಕೊಮ್ಮೆ ಜಾತ್ರೆ ನಡೆಯಲಿದ್ದು, … Read more

ಇನ್ಸ್ ಪೆಕ್ಟರ್, ಪಿಎಸ್ಐ, ಪಿಡಿಒ, ವೈದ್ಯರು ಸೇರಿ ಹತ್ತು ಮಂದಿ ವಿರುದ್ಧ ಎಫ್ಐಆರ್, ಕಾರಣವೇನು?

crime name image

SHIVAMOGGA LIVE NEWS | CRIME | 31 ಮೇ 2022 ನ್ಯಾಯಾಲಯದ ಆದೇಶದ ಮೇರೆಗೆ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್, ಠಾಣೆ ಸಿಬ್ಬಂದಿ, ಪಿಡಿಒ, ವೈದ್ಯರು ಸೇರಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸೊರಬ ತಾಲೂಕು ದೇವತಿಕೊಪ್ಪದ ವಕೀಲ ಪ್ರಕಾಶ್ ನಾಯ್ಕ್ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 10 ಮಂದಿ ವಿರುದ್ಧ ಪ್ರಕರಣ ದಾಖಲಿಸುವಂತೆ ಶಿಕಾರಿಪುರ ಉಪ ಅಧೀಕ್ಷಕರಿಗೆ ಸೂಚನೆ ನೀಡಿತ್ತು. ಏನಿದು ಪ್ರಕರಣ? 2020ರ ಮಾರ್ಚ್ … Read more

ನಿರಂತರ ಮಳೆಗೆ ತಂಪಾಯ್ತು ಶಿವಮೊಗ್ಗ, ಬೇಸಿಗೆಯಲ್ಲೂ ವಾಡಿಕೆಗಿಂತ ಹೆಚ್ಚು ವರ್ಷಧಾರೆ

Rain-in-Shimoga-City-Gopi-Circle-Photos

SHIVAMOGGA LIVE NEWS | RAINFALL | 18 ಮೇ 2022 ಸುಳಿಗಾಳಿಯ ಪರಿಣಾಮ ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಕಳೆದ ಮೂರು ದಿನದಿಂದ ಜಿಲ್ಲೆಯ ವಿವಿಧೆಡೆ ಮಳೆ (RAINFALL) ಅಬ್ಬರಿಸುತ್ತಿದೆ. ಇವತ್ತು ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 8.39 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 7.40 ಮಿ.ಮೀ, ಭದ್ರಾವತಿಯಲ್ಲಿ 14.60 ಮಿ.ಮೀ, ತೀರ್ಥಹಳ್ಳಿಯಲ್ಲಿ 9.20 ಮಿ.ಮೀ, ಸಾಗರದಲ್ಲಿ 1.20 ಮಿ.ಮೀ, ಶಿಕಾರಿಪುರದಲ್ಲಿ 4 ಮಿ.ಮೀ, ಸೊರಬದಲ್ಲಿ 2.30 … Read more

ಹುಡುಗಿಯ ಫೋಟೊ ತೋರಿಸುವುದಾಗಿ ನಂಬಿಸಿ ಮನೆಗೆ ಕರೆಯಿಸಿಕೊಂಡು ಕೊಲೆ

Lakeappa-murdered-at-Soraba-Manmane-Village

SHIVAMOGGA LIVE NEWS | MURDER | 03 ಮೇ 2022 ಮದುವೆಗೆ ಹುಡುಗಿಯ ಫೋಟೊ ತೋರಿಸುವುದಾಗಿ ನಂಬಿಸಿ ಮನೆಗೆ ಕರೆಯಿಸಿಕೊಂಡು ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ರಾಜಕೀಯ ದ್ವೇಷ ಮತ್ತು ಮಹಿಳೆಯೊಬ್ಬಳ ಜೊತೆಗಿನ ಸಲುಗೆಯೆ ಹತ್ಯೆಗೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಸೊರಬ ತಾಲೂಕು ಮನ್ಮನೆ ಗ್ರಾಮದ ಲೇಖಪ್ಪ (36) ಕೊಲೆಯಾದ ವ್ಯಕ್ತಿ. ಆರೋಪಿ ಕೃಷ್ಣಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ನಿಗೂಢವಾಗಿತ್ತು ನಾಪತ್ತೆ ಪ್ರಕರಣ ಏಪ್ರಿಲ್ 11ರಂದು ಜಮೀನಿನಲ್ಲಿ ಕೆಲಸ ಮಾಡಲು ಲೇಖಪ್ಪ ಮನೆಗೆ ತೆರಳಿದ್ದ. ಎರಡು … Read more