ಗುಂಡು ತಗುಲಿ ರಿಪ್ಪನ್ ಪೇಟೆ ಮೂಲದ ಯೋಧ ಮಣಿಪುರದಲ್ಲಿ ನಿಧನ, ಮನೆಗೆ ಮಾಜಿ ಶಾಸಕ ಭೇಟಿ

Assam-Rifiles-personal-sandeep-dies-on-duty

SHIVAMOGGA LIVE NEWS | 20 MARCH 2023 RIPPONPETE : ಅಸ್ಸಾಂ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ರಿಪ್ಪನ್ ಪೇಟೆಯ ಯೋಧ (Soldier) ಇವತ್ತು ಬೆಳಗ್ಗೆ ನಿಧನರಾಗಿದ್ದಾರೆ. ವಿಚಾರ ತಿಳಿದು ಅವರ ರಿಪ್ಪನ್ ಪೇಟೆಯಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸಂದೀಪ್.ಹೆಚ್ (27) ಮೃತ ಯೋಧ (Soldier). ಮಣಿಪುರದ ಇಂಫಾಲದಲ್ಲಿರುವ ಅಸ್ಸಾಂ ರೈಫಲ್ಸ್ ನ ಕಾಲಾ ಕ್ಯಾಂಪ್ ನಲ್ಲಿ ಸಂದೀಪ್ ಸೆಂಟ್ರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಗುಂಡು ಹಾರಿ ಸಂದೀಪ್ … Read more

BREAKING NEWS | ಶಿವಮೊಗ್ಗ ಡಿಸಿ ಕಚೇರಿಗೆ ಗೋ ಮೂತ್ರ ಸಿಂಪಡಿಸಿದ ಹಿಂದೂ ಕಾರ್ಯಕರ್ತರು, ಕಾರಣವೇನು?

Azan Row - gow Muthra spread on dc office

SHIVAMOGGA LIVE NEWS | 18 MARCH 2023 SHIMOGA : ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ (Azan) ಕೂಗಿದ್ದ ಸ್ಥಳವನ್ನು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಇವತ್ತು ಗೋ ಮೂತ್ರ ಸಿಂಪಡಿಸಿ ಶುದ್ಧೀಕರಣ ಮಾಡಿದರು. ಪೊಲೀಸರ ಪ್ರತಿರೋಧದ ನಡುವೆಯು ಗೋ ಮೂತ್ರ ಸಿಂಪಡನೆ ಮಾಡಲಾಯಿತು. ಇದರಿಂದ ಡಿಸಿ ಕಚೇರಿ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ಆಜಾನ್ ಕೂಗಿದ್ದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು … Read more

ಶಿವಮೊಗ್ಗದಲ್ಲಿ ಕೃಷಿ ಮೇಳ, ಇನ್ನೊಂದೇ ದಿನ ಬಾಕಿ, ಭಾನುವಾರ ಜನವೋ ಜನ

krushi-mela-in-Shimoga-Navule

SHIVAMOGGA LIVE NEWS | 19 MARCH 2023 SHIMOGA : ನವುಲೆಯಲ್ಲಿ ನಡೆಯುತ್ತಿರುವ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ (Krushi Mela) ಭಾನುವಾರ ದೊಡ್ಡ ಸಂಖ್ಯೆಯ ಜನರು ಆಗಮಿಸಿದ್ದರು. ನಗರ ಮತ್ತು ವಿವಿಧ ತಾಲೂಕಿನ ರೈತರು ಮೇಳಕ್ಕೆ ಆಗಮಿಸಿ, ವಿವಿಧ ವಿಷಯಗಳ ಕುರಿತು ಮಾಹಿತಿ ಪಡೆದರು. ನವುಲೆಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಕೃಷಿ ಮತ್ತು ತೋಟಗಾರಿಕ ಮೇಳ (Krushi Mela) ಆಯೋಜಿಸಲಾಗಿದೆ. ಮಾರ್ಚ್ 20ರವರೆಗೆ ಮೇಳ ನಡೆಯಲಿದೆ. ಭಾನುವಾರ ರಜೆ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ … Read more

ಶಿವಮೊಗ್ಗದಲ್ಲಿ ಕೇಂದ್ರ ಸಚಿವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ

BJP Sankalpa Yathre Prahlad Joshi, Eshwarappa in shimoga

SHIVAMOGGA LIVE NEWS | 18 MARCH 2023 SHIMOGA : ನಗರದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ (Sankalpa Yathre) ನಡೆಯಿತು. ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಲಕ್ಷ್ಮೀ ಟಾಕೀಸ್ ಸರ್ಕಲ್‌ವರೆಗೆ ಮರವಣಿಗೆ ನಡೆಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಆರುಣ್ ಸೇರಿದಂತೆ ಹಲವು ನಾಯಕರು ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದರು. ತೀರ್ಮಾನಿಸುವ ಕಾಲ ಬಂದಿದೆ ಲಕ್ಷ್ಮೀ ಟಾಕೀಸ್ ಸರ್ಕಲ್‌ನಲ್ಲಿ ಸಭೆಯನ್ನು (Sankalpa Yathre) ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ … Read more

ಕಾಂಗ್ರೆಸ್ ಮೊದಲ ಪಟ್ಟಿ, ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಆಗಬಹುದು?

Congress-Party-Flag

SHIVAMOGGA LIVE NEWS | 17 MARCH 2023 SHIMOGA : ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ (congress party) ಅಭ್ಯರ್ಥಿಗಳ ಮೊದಲ ಪಟ್ಟಿ ಯಾವುದೆ ಸಂದರ್ಭದಲ್ಲಿ ಬೇಕಿದ್ದರೂ ಬಿಡುಗಡೆಯಾಗುವ ಸಂಭವವಿದೆ. ಅಭ್ಯರ್ಥಿಗಳ ಆಯ್ಕೆ ಕುರಿತು ನವದೆಹಲಿಯಲ್ಲಿ ಸಾಲು ಸಾಲು ಸಭೆಗಳು ನಡೆಯುತ್ತಿದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರಲ್ಲಿ ನಿರೀಕ್ಷೆ ಗರಿಗೆದರಿದೆ. ಯಾವೆಲ್ಲ ಕ್ಷೇತ್ರಕ್ಕೆ ಘೋಷಣೆಯಾಗುತ್ತೆ? ಮೊದಲ ಪಟ್ಟಿಯಲ್ಲಿ ಸುಮಾರು 100 ಕ್ಷೇತ್ರಗಳಿಗೆ ಅಭ್ಯರ್ಥಿಗಳ (congress party) ಘೋಷಣೆಯಾಗುವ ಸಾಧ್ಯತೆ ಇದೆ ಎಂದು … Read more

ಅಡಕೆ ಧಾರಣೆ | 17 ಮಾರ್ಚ್ 2023 | ಶಿವಮೊಗ್ಗ, ತುಮಕೂರು ಸೇರಿ ರಾಜ್ಯದ ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಕೆ ರೇಟ್?

Areca Price in Shimoga APMC

SHIVAMOGGA LIVE NEWS | 17 MARCH 2023 SHIMOGA : ಶಿವಮೊಗ್ಗ, ಶಿಕಾರಿಪುರ, ಹೊನ್ನಾಳಿ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ ಧಾರಣೆ (ADIKE RATE). ಶಿವಮೊಗ್ಗ ಮಾರುಕಟ್ಟೆ ಗೊರಬಲು 16200 35299 ಬೆಟ್ಟೆ 46399 52599 ರಾಶಿ 28009 45299 ಸರಕು 54619 79100 ಹೊನ್ನಾಳಿ ಮಾರುಕಟ್ಟೆ ರಾಶಿ 43520 43520 ಶಿರಸಿ ಮಾರುಕಟ್ಟೆ ಕೆಂಪುಗೋಟು 21199 32180 ಚಾಲಿ 31569 36313 ಬೆಟ್ಟೆ 36899 42899 ಬಿಳೆ ಗೋಟು 24199 … Read more

ಶಿವಮೊಗ್ಗದ ನಡು ರಸ್ತೆಯಲ್ಲಿ ಚಾಕು ತೋರಿಸಿ ಜನರಲ್ಲಿ ಭಯ ಹುಟ್ಟಿಸಿದ್ದ ವಾಷಿಂಗ್ ಮೆಷಿನ್ ಟೆಕ್ನಿಷಿಯನ್

Police-Jeep-With-Light-New.

SHIVAMOGGA LIVE NEWS | 17 MARCH 2023 SHIMOGA : ವಾಷಿಂಗ್ ಮೆಷಿನ್ ಟೆಕ್ನಿಷಿಯನ್ ಒಬ್ಬ ನಡು ರಸ್ತೆಯಲ್ಲಿ ಭರ್ಚಿಯಂತಿರುವ ದೊಡ್ಡ ಚಾಕು (Knife) ತೋರಿಸಿ ಜನರಲ್ಲಿ ಆತಂಕ ಮೂಡಿಸಿದ್ದ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಆತನನ್ನು ಬಂಧಿಸಿದ್ದು, ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ನಗರದ ನ್ಯೂ ಮಂಡ್ಲಿ ಸರ್ಕಲ್ ಬಳಿ ಘಟನೆ ಸಂಭವಿಸಿದೆ. ತೋಹಿದ್ ಉರ್ ರೆಹಮಾನ್ (20) ಎಂಬಾತನನ್ನು ಬಂಧಿಸಲಾಗಿದೆ. ಈತ ನ್ಯೂ ಮಂಡ್ಲಿ ಸರ್ಕಲ್ ನಲ್ಲಿ ಚಾಕು (Knife) ಪ್ರದರ್ಶಿಸುತ್ತ ಜನರಲ್ಲಿ … Read more

ಶಿವಮೊಗ್ಗದ ಲಕ್ಷ್ಮಿ ಟಾಕೀಸ್ ಇನ್ನು ನೆನಪಷ್ಟೇ, ಟಾಕೀಸ್ ಬಗ್ಗೆ ನಿಮಗೆಷ್ಟು ಗೊತ್ತು? ಮುಂದೇನಾಗುತ್ತೆ ಇಲ್ಲಿ?

Shimoga-Lakshmi-Talkies-Innilla

SHIVAMOGGA LIVE NEWS | 17 MARCH 2023 ನಾಲ್ಕು ದಶಕ ಶಿವಮೊಗ್ಗದ ಜನರಿಗೆ ಮನರಂಜನೆ ನೀಡಿದ್ದ ಲಕ್ಷ್ಮೀ ಟಾಕೀಸ್ (Talkies Closed) ಇತಿಹಾಸದ ಪುಟ ಸೇರುತ್ತಿದೆ. ಚಿತ್ರಮಂದಿರವನ್ನು ತೆರವು ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ಈ ಮೂಲಕ ನಗರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಮತ್ತೊಂದು ಥಿಯೇಟರ್ ಇನ್ನು ನೆನಪಾಗಿ ಉಳಿಯಲಿದೆ. ಲಕ್ಷ್ಮೀ ಟಾಕೀಸ್ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳು 1984ರಲ್ಲಿ ಶಿವಮೊಗ್ಗದ ಹೊಸಮನೆ ಬಡಾವಣೆ ಸಮೀಪ ಶ್ರೀ ಲಕ್ಷ್ಮೀ ಟಾಕೀಸ್ ಆರಂಭವಾಯಿತು. ಡಿ.ಲಕ್ಕಪ್ಪ ಅವರು ಇದರ ಮಾಲೀಕರಾಗಿದ್ದರು. … Read more

ಶಿವಮೊಗ್ಗ ನಗರದಾದ್ಯಂತ ಫುಲ್ ಟ್ರಾಫಿಕ್ ಜಾಮ್, ಎಲ್ಲೆಲ್ಲಿ ಹೇಗಿದೆ? ಇಲ್ಲಿದೆ ಫೋಟೊ ರಿಪೋರ್ಟ್

Traffic-Jam-during-Narendra-Modi-Programme-in-Shimoga

SHIVAMOGGA LIVE NEWS | 27 FEBRURARY 2023 SHIMOGA : ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ನೆರೆಹೊರೆ ತಾಲೂಕು, ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಭಾರಿ ಸಂಖ್ಯೆಯ ವಾಹನಗಳು ಬಂದಿದ್ದರಿಂದ ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ? ಎಂ.ಆರ್.ಎಸ್ ಸರ್ಕಲ್ ನಿಂದ ವಿಮಾನ ನಿಲ್ದಾಣದವರೆಗೆ ಒಂದು ಬದಿಯಲ್ಲಿ ವಿಐಪಿ, ಅಧಿಕಾರಿಗಳ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದು ಬದಿಯಲ್ಲಿ ಇತರೆ ವಾಹನಗಳನ್ನು ಬಿಡಲಾಗಿದೆ. ಹಾಗಾಗಿ ಒಡ್ಡಿನಕೊಪ್ಪ, … Read more

ಪ್ರಧಾನಿಯಾದ ಮೇಲೆ ಶಿವಮೊಗ್ಗಕ್ಕೆ ಮೋದಿ ಎರಡನೇ ಭೇಟಿ

PM-Modi-to-inaugurate-Shivamogga-Airport

SHIVAMOGGA LIVE NEWS | 27 FEBRURARY 2023 SHIMOGA : ನರೇಂದ್ರ ಮೋದಿ ಅವರು ಪ್ರಧಾನಿಯಾದ (PM Modi) ಬಳಿಕ ಶಿವಮೊಗ್ಗಕ್ಕೆ ಅವರು ಎರಡನೆ ಭಾರಿ ಭೇಟಿ ನೀಡುತ್ತಿದ್ದಾರೆ. ಕಳೆದ ಸರ್ತಿ ಚುನಾವಣೆ ಸಂದರ್ಭ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ್ದರು. ಈ ಸರ್ತಿ ಸರ್ಕಾರಿ ಕಾರ್ಯಕ್ರಮವಾದರೂ, ಚುನಾವಣೆ ಹೊತ್ತಿನಲ್ಲೇ ಆಗಮಿಸಿದ್ದಾರೆ. ಮೊದಲ ಭೇಟಿ 2018ರ ಮೇ 5ರಂದು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಕುವೆಂಪು ರಂಗಮಂದಿರ ಹಿಂಭಾಗದ ಎನ್.ಇ.ಎಸ್. … Read more