ಶಿವಮೊಗ್ಗದಲ್ಲಿ ಮಕ್ಕಳಾಗಲು ಔಷಧ ಕೊಡ್ತೀವಿ ಅಂತಾ ಬಂದವರು ತಾಳಿ ಸರ ಕದ್ದೊಯ್ದರು
ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಜನವರಿ 2022 ಮಕ್ಕಳಾಗದಿರುವುದಕ್ಕೆ ಔಷಧ ಕೊಡುತ್ತೇವೆ ಎಂದು ನಂಬಿಸಿ, ಮಹಿಳೆಯೊಬ್ಬರ ತಾಳಿ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಶಿವಮೊಗ್ಗದ ವೆಂಕಟೇಶನಗರದಲ್ಲಿ ಘಟನೆ ಸಂಭವಿಸಿದೆ. ಗೃಹಿಣಿಯೊಬ್ಬರಿಗೆ ಮಕ್ಕಳಾಗುವ ಔಷಧ ಕೊಡುತ್ತೇವೆ ಎಂದು ನಂಬಿಸಿ, ಇಬ್ಬರು ಅಪರಿಚಿತರು ದುಷ್ಕೃತ್ಯ ನಡೆಸಿದ್ದಾರೆ. ಹೇಗಾಯ್ತು ಘಟನೆ? ವೆಂಕಟೇಶನಗರದಲ್ಲಿ ಮನೆ ಬಳಿ ನೀರು ಹಿಡಿಯುತ್ತಿದ್ದ ಗೃಹಣಿಯನ್ನು ಇಬ್ಬರು ಅಪರಿಚಿತರು ಸಂಪರ್ಕಿಸಿದ್ದಾರೆ. ‘ತಮಗೆ ಮಕ್ಕಳಾಗದಿರುವ ಕುರಿತು ಆಶಾ ಕಾರ್ಯಕರ್ತೆ ತಿಳಿಸಿದ್ದಾರೆ. ನಾವು ಔಷಧ ಕೊಡಲು ಬಂದಿದ್ದೇವೆ’ ಎಂದು … Read more