ಪುನಿತ್ ರಾಜ್’ಕುಮಾರ್ ಸಿನಿಮಾದಲ್ಲಿ ಮಾಡಿದ್ದನ್ನು, ಭದ್ರಾವತಿಯ ಯುವಕ ರಿಯಲ್ ಲೈಫ್’ನಲ್ಲಿ ಮಾಡಿ ತೋರಿಸಿದ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 20 ಫೆಬ್ರವರಿ 2019

ಪವರ್ ಸ್ಟಾರ್ ಸಿನಿಮಾದಲ್ಲಿ ಮಾಡಿದ್ದನ್ನ, ಭದ್ರಾವತಿ ಯುವಕ, ರಿಯಲ್ ಲೈಫ್’ನಲ್ಲಿ ಮಾಡಿದ್ದಾನೆ. ಈತನ ಕೆಲಸಕ್ಕೆ ಭಾರೀ ಮೆಚ್ಚುಗೆ ಸಿಕ್ಕಿದೆ. ಈ ಹುಡುಗನ ವಿಡಿಯೋ ವೈರಲ್ ಆಗಿದೆ. ಈ ಸುದ್ದಿ ಓದುವ ಮೊದಲು ಪುನಿತ್ ರಾಜ್’ಕುಮಾರ್ ಅವರ ಈ ಹಾಡನ್ನು ಒಮ್ಮೆ ನೋಡಿಬಿಡಿ.

ಯಾರೇ ಕೂಗಾಡಲಿ ಸಿನಿಮಾದ ಈ ಹಾಡಿನಲ್ಲಿ, ಪುನಿತ್ ರಾಜ್’ಕುಮಾರ್ ಅವರು ಭಿಕ್ಷುಕನೊಬ್ಬನಿಗೆ ಹೊಸ ರೂಪ ನೀಡ, ನೂತನ ಬದುಕು ಕಲ್ಪಿಸುತ್ತಾರೆ. ಇದು ರೀಲ್ ಸ್ಟೋರಿ. ಆದರೆ ಭದ್ರಾವತಿಯ ವಿನಯ್ ಇದನ್ನು ರಿಯಲ್ ಲೈಫ್’ನಲ್ಲಿ ಮಾಡಿ ತೋರಿಸಿದ್ದಾನೆ.

ಭದ್ರಾವತಿಯ ವಿನಯ್ ಮಾಡಿದ್ದೇನು?

ಭದ್ರಾವತಿಯ ರಂಗಪ್ಪ ಸರ್ಕಲ್’ನಲ್ಲಿ, ವ್ಯಕ್ತಿಯೊಬ್ಬರು ಭಿಕ್ಷೆ ಬೇಡುತ್ತಿದ್ದರು. ಶಿವಮೊಗ್ಗದ JNNCE ಕ್ಯಾಂಪಸ್’ನಲ್ಲಿ ಬಿ.ಕಾಂ ಫೈನಲ್ ಇಯರ್ ಓದುತ್ತಿರುವ ವಿನಯ್ ಬಳಿ ಬಂದ ಭಿಕ್ಷುಕ, ಹಸಿವು ಅಂದಿದ್ದಾರೆ. ಹಾಗಾಗಿ, ಊಟ ಕೊಡಿಸಿದ ವಿನಯ್, ಅವರ ಪೂರ್ವಪರ ವಿಚಾರಸಿದ್ದಾರೆ. ಆಗಲೇ ಬೆಚ್ಚಿಬೀಳುವ ಸಂಗತಿ ಹೊರಬಿದ್ದಿದ್ದು. ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ಹೆಸರು, ಊರು, ಕುಟುಂಬದ ಮಾಹಿತಿ ಲಭ್ಯವಾಗಿದೆ. ಆಗಲೇ ವಿನಯ್, ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯನ್ನು ಅವರ ಕುಟುಂಬದೊಂದಿಗೆ ಸೇರಿಸಬೆಕು ಅನ್ನುವ ನಿರ್ಧಾರ ತೆಗುದುಕೊಂಡಿದ್ದು.

https://www.facebook.com/shivamoggalive/videos/429145514522798/?t=5

ಆ ಘಟನೆ ಬಳಿಕ, ಸತತ ಮೂರು ದಿನ ಭಿಕ್ಷೆ ಬೇಡುತ್ತಿದ್ದ ವರದರಾಜು ಅವರನ್ನು, ವಿನಯ್ ಹುಡುಕಿದ್ದಾರೆ. ಕೊನೆಗೂ ಅವರ ಹುಡುಕಾಟಕ್ಕೆ ಫಲ ಸಿಕ್ಕಿತು. ‘ಕೈಗೆ ಸಿಕ್ಕ ವರದರಾಜು ಅವರನ್ನು ಕರೆದೊಯ್ದು, ಕಟಿಂಗ್, ಶೇವಿಂಗ್ ಮಾಡಿಸಿದೆ. ಭದ್ರಾ ಹೊಳೆ ಬಳಿ ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿಸಿ, ದೇವಸ್ಥಾನಕ್ಕೆ ಕರೆದೊಯ್ದು ಪೂಜೆ ಮಾಡಿಸಿದೆ. ಆಮೇಲೆ ಪೊಲೀಸ್ ಠಾಣೆಗೆ ಕರೆದೊಯ್ದೆ’ ಅಂತಾರೆ ವಿನಯ್.

52637224 568023317010916 5717497585837539328 n.jpg? nc cat=107& nc oc=AQlVX csXP2ILQPbXnar28xGY28a1MF0hiViQzCaT3GuOanCboA6JGklopp gQ9SmwI& nc ht=scontent bom1 2

ಸ್ಟೇಷನ್’ನಲ್ಲಿ ಪೊಲೀಸರಿಂದ ವಿಚಾರಣೆ..!

ವಿನಯ್ ನಿರ್ಧಾರಕ್ಕೆ ಕೇಳಿ, ಭದ್ರಾವತಿ ಪೊಲೀಸರು ನೆರವಿಗೆ ನಿಂತರು. ಭಿಕ್ಷೆ ಬೇಡುತ್ತಿದ್ದ ವರದರಾಜು ಅವರನ್ನು ಸ್ಟೇಷನ್’ಗೆ ಕರೆದೊಯ್ದು, ಮಾಹಿತಿ ಕಲೆಹಾಕಿದ್ದಾರೆ. ‘ವರದರಾಜು ಅರ್ದೊಟ್ಲು ಗ್ರಾಮದವರು. ಅವರಿಗೆ ಹೆಂಡತಿ, ಮಕ್ಕಳು, ಆಳಿಯಂದಿರೆಲ್ಲ ಇದ್ದಾರೆ ಅನ್ನುವುದು ಗೊತ್ತಾಯಿತು’ ಎಂದು ವಿನಯ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದರು. ನಂತರ ವಿನಯ್ ಮತ್ತು ಪೊಲೀಸರು, ವರದರಾಜು ಅವರನ್ನು ಊರಿಗೆ ಕಳುಹಿಸಲು ಸಫಲರಾಗಿದ್ದಾರೆ.

https://www.facebook.com/shivamoggalive/videos/2066476613421559/?t=3

ಬೆಳಗ್ಗೆ ಕಾಲೇಜು, ರಾತ್ರಿ ಉದ್ಯೋಗ, ಉಳಿದದ್ದು ಸಮಾಜಕ್ಕೆ

ಕಾಲೇಜು ಟೈಮ್ ಮುಗಿದ ಬಳಿಕ, ವಿನಯ್, ಪಾರ್ಟ್ ಟೈಂ ಕೆಲಸ ಮಾಡುತ್ತಾರೆ. ಭದ್ರಾವತಿ ಬಸ್ ಸ್ಟಾಂಡ್’ನಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಾರೆ. ದಿನಕ್ಕೆ ನೂರರಿಂದ ನೂರೈವತ್ತು ರೂಪಾಯಿ ಸಂಪಾದಿಸುತ್ತಾರೆ. ಇದೇ ಹಣದಲ್ಲೇ, ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಇನ್ನು, ವಿನಯ್ ಮಾಡಿದ ಈ ಕೆಲಸದ ವಿಡಿಯೋ, ವೈರಲ್ ಆಗಿದೆ. ವಾಟ್ಸಪ್, ಫೇಸ್’ಬುಕ್’ನಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ಈವರೆಗೂ ಒಬ್ಬಂಟಿಯಾಗಿ ಮಾಡುತ್ತಿದ್ದ ಕೆಲಸಕ್ಕೆ, ಹತ್ತಾರು ಕೈಗಳು ಜೊತೆಗೂಡಿವೆ. ಸ್ನೇಹಿತರು, ಸಂಘಟನೆಗಳು ವಿನಯ್ ಕೆಲಸಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 20, 2019

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಸಚಿನ್‌ ಅಂತ್ಯಕ್ರಿಯೆ

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Leave a Comment