ಅಡ್ಡಗಟ್ಟಿ ವ್ಯಕ್ತಿಯ ಹಲ್ಲು ಮುರಿದು ನಗದು, ಚಿನ್ನದ ಸರ ದೋಚಿದ ದುಷ್ಕರ್ಮಿಗಳು, ಎಲ್ಲಿ? ಏನಿದು ಕೇಸ್?

Published On : ಫೆಬ್ರವರಿ 17, 2026

Published By : ನಿತಿನ್‌ ಆರ್‌.ಕೈದೊಟ್ಲು 

ಭದ್ರಾವತಿ: ಹಳೇ ಬುಳ್ಳಾಪುರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿದ ಐವರು ದುಷ್ಕರ್ಮಿಗಳು, ಹಲ್ಲೆ ನಡೆಸಿ ಸುಮಾರು ₹71 ಸಾವಿರ ಮೌಲ್ಯದ ನಗದು ಮತ್ತು ಚಿನ್ನದ ಸರ ದೋಚಿರುವ (Robbed) ಘಟನೆ ನಡೆದಿದೆ.

ಕವಲಗುಂಡಿ ಗ್ರಾಮದ ನಿವಾಸಿ ಚಂದ್ರಶೇಖರ್ ಹಲ್ಲೆಗೊಳಗಾದವರು. ಹಳೇ ಬುಳ್ಳಾಪುರದ ಅಂಜನಪ್ಪ ಎಂಬುವವರನ್ನು ಭೇಟಿ ಮಾಡಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. 2ನೇ ಕ್ರಾಸ್ ರಸ್ತೆಯಲ್ಲಿ ಎರಡು ಬೈಕ್‌ಗಳಲ್ಲಿ ಬಂದ ಐವರು ವ್ಯಕ್ತಿಗಳು ಚಂದ್ರಶೇಖರ್ ಅವರನ್ನು ತಡೆದು, ‘ಆಕಾಶ್ ಕರೆಯುತ್ತಿದ್ದಾನೆ ಬಾ’ ಎಂದು ಹೇಳಿ ವಾಗ್ವಾದ ನಡೆಸಿದ್ದಾರೆ.

ಚಂದ್ರಶೇಖರ್ ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮುಖಕ್ಕೆ ಗುದ್ದಿ ಹಲ್ಲುಗಳನ್ನು ಮುರಿದು ತೀವ್ರವಾಗಿ ಗಾಯಗೊಳಿಸಿದ್ದಾರೆ. ಬಳಿಕ ಅವರ ಬಳಿಯಿದ್ದ ₹50,000 ನಗದು ಹಾಗೂ ₹21,000 ಮೌಲ್ಯದ 37 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

Bhadravathi Name Graphics

ಗಾಯಾಳು ಚಂದ್ರಶೇಖರ್ ಅವರು ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ರಾತ್ರೋರಾತ್ರಿ ಒಂದು ಡೇಂಜರ್‌ ಹಂಪ್‌ ಕಿತ್ತೊಗೆದ ಸ್ಥಳೀಯರು, ಎಲ್ಲಿ?

JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 17, 2026

Leave a Comment