ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
BHADRAVATHI NEWS, 27 AUGUST 2024 : ತೀವ್ರ ಕುತೂಹಲ ಮೂಡಿಸಿದ್ದ ಭದ್ರಾವತಿ ನಗರಸಭೆ ಉಪಾಧ್ಯಕ್ಷ ಹುದ್ದೆ ಕಾಂಗ್ರೆಸ್ ಪಾಲಾಗಿದೆ. 11ನೇ ವಾರ್ಡ್ನ ನಗರಸಭೆ ಸದಸ್ಯ ಮಣಿ ನೂತನ ಉಪಾಧ್ಯಕ್ಷರಾಗಿ (Vice President) ಆಯ್ಕೆಯಾದರು.
ಒಟ್ಟು 35 ಮತಗಳ ಪೈಕಿ ಮಣಿ ಕಾಂಗ್ರೆಸ್ ಪಕ್ಷದ 18 ನಗರಸಭೆ ಸದಸ್ಯರು ಮತ್ತು ಶಾಸಕ ಸಂಗಮೇಶ್ವರ ಮತ ಸೇರಿ ಒಟ್ಟು 19 ಮತ ಪಡೆದು ವಿಜಯಶಾಲಿಯಾದರು. ನೂತನ ಉಪಾಧ್ಯಕ್ಷ ಮಣಿ ಅವರಿಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಸೇರಿದಂತೆ ಕಾಂಗ್ರೆಸ್ ಸದಸ್ಯರು, ಮುಖಂಡರು, ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.

» ಕೈ ಕೊಟ್ಟ ಬಿಜೆಪಿ, ಜೆಡಿಎಸ್ಗೆ ಕಸಿವಿಸಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸವಿತಾ ಉಮೇಶ್ ಕಣಕ್ಕಿಳಿದಿದ್ದರು. ಇದರಿಂದ ಉಪಾಧ್ಯಕ್ಷ ಹುದ್ದೆಯ ಚುನಾವಣೆ ಕುತೂಹಲ ಮೂಡಿಸಿತ್ತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಪಕ್ಷದ ಸದಸ್ಯರಿಗೆ ವಿಪ್ ನೀಡಿದ್ದವು. ಆದರೆ ಬಿಜೆಪಿಯ ವಿ.ಕದಿರೇಶ್, ಅನಿತಾ ಮಲ್ಲಪ್ಪ, ಶಶಿಕಲಾ ನಾರಾಯಣಪ್ಪ ಚುನಾವಣೆಗೆ ಗೈರಾಗಿದ್ದರು. ಜೆಡಿಎಸ್ನ 12, ಬಿಜೆಪಿ 4, ಪಕ್ಷೇತರ 1 ಮತ ಸೇರಿ ಸವಿತಾ ಉಮೇಶ್ ಅವರಿಗೆ 17 ಮತ ಲಭಿಸಬೇಕಿತ್ತು. ಮೂವರು ಬಿಜೆಪಿ ಸದಸ್ಯರು ಗೈರಾಗಿದ್ದರಿಂದ ಮೈತ್ರಿ ಅಭ್ಯರ್ಥಿ ಸವಿತಾ ಉಮೇಶ್ 14 ಮತ ಪಡೆಯಲು ಸಫಲವಾದರು.
ಶಿವಮೊಗ್ಗ ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ ⇒ ಸರ್ಕಾರಿ ಕಚೇರಿ ಮುಂದೆ ಅಡಿಕೆ ಸುರಿದು ಹೋರಾಟಕ್ಕೆ ನಿರ್ಧಾರ, ದಿನಾಂಕ ಪ್ರಕಟ, ಕಾರಣವೇನು?
LATEST NEWS
- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

About The Editor
ನಿತಿನ್ ಆರ್.ಕೈದೊಟ್ಲು





