SHIVAMOGGA LIVE NEWS | 11 OCTOBER 2023
BHADRAVATHI : ನೌಕರನ ವೇತನ ಸಂಬಂಧ ಮಾಹಿತಿ ನೀಡದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಆಯೋಗ 25 ಸಾವಿರ ರೂ. ದಂಡ (Fine) ವಿಧಿಸಿದೆ.
![]() |
ಮೈಸೂರು ಕಾಗದ ಕಾರ್ಖಾನೆಯ (ಎಂಪಿಎಂ) ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಮುಖ್ಯ ಆಡಳಿತಾಧಿಕಾರಿ ಜಿ.ಎಸ್ ಶ್ರೀನಿವಾಸ್ ಅವರಿಗೆ ದಂಡ (Fine) ವಿಧಿಸಲಾಗಿದೆ.
ಇದನ್ನೂ ಓದಿ- WhatsAppನಲ್ಲಿ Instagram ರೀತಿಯ ಫೀಚರ್, ಇನ್ಮುಂದೆ ನಿಮ್ಮದೆ ಚಾನಲ್ ಮಾಡಬಹುದು
ಏನಿದು ಪ್ರಕರಣ?
ನಿವೃತ್ತ ನೌಕರ ಟಿ.ಜಿ.ಬಸವರಾಜಯ್ಯ ಅವರು 2016ರ ಜನವರಿಯಿಂದ 2021ರ ಮೇ ತಿಂಗಳವರೆಗೆ ನೀಡಿರುವ ವೇತನದ ಮಾಹಿತಿ ಕೇಳಿದ್ದರು. ಪ್ರತಿ ತಿಂಗಳ ವಿವರದ ದೃಢೀಕೃತ ಪ್ರತಿ ನೀಡಬೇಕು ಎಂದು ಕಾರ್ಖಾನೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಶ್ರೀನಿವಾಸ್ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಶ್ರೀನಿವಾಸ್ ಅವರು ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸಲು ವಿಫಲರಾಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಆಯೋಗ, ಮಾಹಿತಿ ಹಕ್ಕು ಅಧಿನಿಯಮದ ವಿವಿಧ ಕಲಂಗಳ ಅನ್ವಯ ದಂಡ ವಿಧಿಸಿದೆ. ಈ ಕುರಿತು ರಾಜ್ಯ ಮಾಹಿತಿ ಆಯುಕ್ತ ಹೆಚ್.ಸಿ ಸತ್ಯನ್ ಅವರು ಮೇಲ್ಮನವಿದಾರ ಟಿ.ಜಿ ಬಸವರಾಜಯ್ಯ ಅವರಿಗೆ ಈ ಮಾಹಿತಿ ನೀಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200