ಶಿವಮೊಗ್ಗ ಲೈವ್.ಕಾಂ | ಹೊಳೆಹೊನ್ನೂರು
ತೋಟವೊಂದರಲ್ಲಿ ತೆಂಗಿನಕಾಯಿಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸ್ಥಳೀಯರ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಭದ್ರಾವತಿ ತಾಲ್ಲೂಕಿನ ಸಿದ್ಲಿಪುರ ಗ್ರಾಮದ ಶ್ರೀಕಂಠಮೂರ್ತಿ ಎಂಬುವವರ ತೋಟದಲ್ಲಿ ಘಟನೆ ನಡೆದಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಮಧ್ಯಾಹ್ನದ ವೇಳೆಗೆ ತೋಟದೊಳಗೆ ನುಗ್ಗಿದ ಇಬ್ಬರು ಯುವಕರು ತೆಂಗಿನ ಮರದಿಂದ ಕಾಯಿಗಳನ್ನು ಉದುರಿಸಿ ಚೀಲಕ್ಕೆ ತುಂಬಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ತೋಟದ ಕಾರ್ಮಿಕರು ತಕ್ಷಣವೇ ಇಬ್ಬರು ಹಿಡಿದಿದ್ದಾರೆ. ವಿಚಾರ ತಿಳಿದು ಮಾಲೀಕರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ.

ಆರೋಪಿಗಳಿಂದ ಸುಮಾರು ₹3,200 ಮೌಲ್ಯದ 75 ರಿಂದ 80 ತೆಂಗಿನಕಾಯಿಗಳನ್ನು ವಶಕ್ಕೆ ಪಡೆಯಲಾಗಿದೆ. ತೋಟವನ್ನು ನಿರ್ವಹಿಸುತ್ತಿದ್ದ ದೇವಂತ್ ಎಂಬುವವರು ದೂರು ನೀಡಿದ್ದಾರೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.