36 ಮಂಗಗಳಿಗೆ ವಿಷವಿಟ್ಟು ಹತ್ಯೆ, ಐವರು ಅರೆಸ್ಟ್, ಹತ್ಯೆಗೇನು ಕಾರಣ? ಸಿಕ್ಕಿಬಿದ್ದಿದ್ದು ಹೇಗೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

119909669 961055577707686 682068807956211504 n.jpg? nc cat=103& nc sid=8024bb& nc ohc=Fu OV qGO6UAX Phl Y& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SAGARA NEWS | 1 ಅಕ್ಟೋಬರ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಬೆಳೆ ನಾಶ ಮಾಡುತ್ತಿದ್ದ 36 ಮಂಗಗಳಿಗೆ ವಿಷವುಣಿಸಿ ಹತ್ಯೆ ಮಾಡಿದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಸಾಗರ ತಾಲೂಕು ಆನಂದಪುರ ಸಮೀಪದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಪಳಿ ಕಾಡಿನಲ್ಲಿ ಘಟನೆ ನಡೆದಿದೆ.

120539208 1228892720805479 2509196894297889941 n.jpg? nc cat=109& nc sid=110474& nc ohc=i69zmHEp2WEAX9hSclH& nc ht=scontent.fixe1 1

ಐವರು ಅರೆಸ್ಟ್ ಆಗಿದ್ದು ಹೇಗೆ?

ಮಂಗಗಳಿಗೆ ವಿಷವುಣಿಸಿ ಹತ್ಯೆ ಮಾಡಿ, ಅವುಗಳ ಮೃತದೇಹವನ್ನು ಎಸೆಯಲು ಆಗಮಿಸಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಂಧಿತರಿಂದ ಒಂದು ಕಾರು, ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

119060214 954258745054036 6933822829653446782 o.jpg? nc cat=105& nc sid=110474& nc ohc=XxkfaKGqL3MAX JHRqz& nc ht=scontent.fixe1 1

ಯಾರನ್ನೆಲ್ಲ ಬಂಧಿಸಲಾಗಿದೆ?

ತ್ಯಾಗರ್ತಿಯ ವಿಶ್ವನಾಥ್ (32), ದಸ್ತಗಿರ್ ಸಾಬ್ (40), ಲಾವಿಗೆರೆ ಲಂಬೋದರ (25), ಅಭಿಷೇಕ್ (24), ದಾವಣಗೆರೆಯ ಸಂಜೀವ್ ಶೇಟ್ ಎಂಬುವವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜಾಮೀನಿನ ಮೇಲೆ ಐವರನ್ನು ಬಿಡುಗಡೆ ಮಾಡಲಾಗಿದೆ.

120362099 1228892860805465 4578640566530758916 n.jpg? nc cat=107& nc sid=110474& nc ohc=3QNwGgMzO54AX8uSao0& nc ht=scontent.fixe1 1

ಮರಣೋತ್ತರ ಪರೀಕ್ಷೆ, ಅಂತ್ಯಕ್ರಿಯೆ

ಮರಿಗಳು ಸೇರಿದಂತೆ ವಿವಿಧ ವಯೋಮಾನದ 36 ಮಂಗಗಳಿಗೆ ವಿಷವುಣಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲ ಮಂಗಗಳ ಮರೋಣತ್ತರ ಪರೀಕ್ಷೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 206ರ ಸ್ವಲ್ಪ ದೂರದಲ್ಲಿ ಅರಣ್ಯ ಇಲಾಖೆ ಸಮೂಹಿಕ ಅಂತ್ಯಕ್ರಿಯೆ ನೆರವೇರಿಸಿತು.

ಸಾಗರ ಎಸಿಎಫ್ ಶ್ರೀಧರ್, ರಾಜೇಶ್ ನಾಯ್ಕ, ಚೋರಡಿ ವಿಭಾಗದ ಆರ್‍ಎಫ್‍ಓ ಮೋಹನ್, ಅರಣ್ಯಾಧಿಕಾರಿಗಳಾದ ಇಸ್ಮಾಯಿಲ್, ರಾಘವೇಂದ್ರ ತಗ್ಗಿನ್, ಮಂಜುನಾಥ, ಚಂದ್ರಶೇಖರ್, ಎಂ.ಆರ್.ಅಶೋಕ್, ಭದ್ರೇಶ್, ಶಿವನಗೌಡ ಬಿರಾದಾರ್, ಸಂತೋಷ್ ನಾಯ್ಕ, ಪ್ರದೀಪ್ ಅವರು ಕಾರ್ಯಾಚರಣೆಯಲ್ಲಿದ್ದರು.

119042982 954233958389848 2251827388540787956 o.jpg? nc cat=100& nc sid=8024bb& nc ohc=M11J4AM3B1UAX wbglB& nc ht=scontent.fixe1 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment