SHIVAMOGGA LIVE NEWS, 16 JANUARY 2025
ಸಾಗರ : ಹುಲ್ಲು ಪಿಂಡಿ ಕಟ್ಟುವ ಯಂತ್ರದ (Machine) ಬಾಯಿಗೆ ಸಿಲುಕಿದ್ದ ಚಾಲಕನನ್ನು 13 ವರ್ಷದ ಬಾಲಕ ರಕ್ಷಿಸಿದ್ದು, ಆತನ ಸಮಯ ಪ್ರಜ್ಞೆಗೆ ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ತ್ಯಾಗರ್ತಿ ಸಮೀಪದ ಬಸವನಹೊಂಡ ಗ್ರಾಮದ ಕಲ್ಕೆರೆ ಗ್ರಾಮದ ರಾಮಚಂದ್ರ ಅವರ ಮನೆಯಲ್ಲಿ ಶಿಕಾರಿಪುರ ಮೂಲದ ಮದನ (28) ಯಂತ್ರದ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ಘಟನೆ ಸಂಭವಿಸಿದೆ. ರಾಮಚಂದ್ರ ಅವರ ಪುತ್ರ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಮಧು ಅವರ ರಕ್ಷಣೆ ಮಾಡಿದ್ದಾನೆ.
ಶಿಕಾರಿಪುರ ಮೂಲದ ಮದನ ಬಾಡಿಗೆ ಯಂತ್ರ ತಂದು ರಾಮಚಂದ್ರ ಅವರ ಮನೆ ಅಂಗಳದಲ್ಲಿ ಹುಲ್ಲು ಪಿಂಡಿ ಕಟ್ಟುವ ಕಾರ್ಯ ನಡೆಸುತ್ತಿದ್ದ. ಬಾಲಕ ಮಧು ಅದನ್ನು ನೋಡುತ್ತಾ ನಿಂತಿದ್ದ. ಹುಲ್ಲನ್ನು ಯಂತ್ರದ ಕಡೆ ನೂಕುತ್ತಿದ್ದಾಗ ಚಾಲಕನ ಕೈ ಆಕಸ್ಮಿಕವಾಗಿ ಸಿಲುಕಿಕೊಂಡಿದ್ದು, ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಓಡಿ ಬಂದ ಮಧು, ಟ್ರ್ಯಾಕ್ಟರ್ನ ಎಂಜಿನ್ ಸ್ವಿಚ್ ಆಫ್ ಮಾಡಿದ್ದಾನೆ. ಹಾಗಾಗಿ ಮದನ್ ಸ್ವಲ್ಪದರಲ್ಲಿಯೇ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಷ್ಟರಲ್ಲೇ ಯಂತ್ರಕ್ಕೆ ಸಿಲುಕಿದ ಕೈ ಅರ್ಧ ಭಾಗ ಸುಲಿದು ಹೋಗಿತ್ತು. ಸ್ವಲ್ಪ ವಿಳಂಬವಾಗಿದ್ದರು ಚಾಲಕ ಮದನ್ ದೇಹ ಪೂರ್ತಿ ಯಂತ್ರದೊಳಕ್ಕೆ ಸೇರಿ ಜಜ್ಜಿಹೋಗುತ್ತಿತ್ತು.ಹುಲ್ಲು ಪಿಂಡಿ ಕಟ್ಟುವುದನ್ನು ನೋಡುತ್ತಿದ್ದ
ಮನೆಯವರು ಮತ್ತು ಸ್ಥಳೀಯರು ತಕ್ಷಣ ಸ್ಥಳಕ್ಕೆ ಬಂದು ತೀವ್ರ ಗಾಯಗೊಂಡ ಚಾಲಕ ಮದನ್ನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರು ಖರೀದಿಸುವವರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ಮೆಗಾ ಎಕ್ಸ್ಚೇಂಜ್ ಮೇಳ
ಇದನ್ನೂ ಓದಿ » ‘ಪೊಲೀಸರು ಕರ್ಮ ಅನುಭವಿಸುತ್ತಾರೆ, ಸರ್ಕಾರಕ್ಕೆ ಶಾಪ ತಟ್ಟುತ್ತೆʼ