ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಸಾಗರ: ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಮೆರವಣಿಗೆಯ ಸಂದರ್ಭ ಜನದಟ್ಟಣೆಯಲ್ಲಿ ಕಳ್ಳರು, ವೃದ್ಧರೊಬ್ಬರ ಕೊರಳಿನಲ್ಲಿದ್ದ ₹1.05 ಲಕ್ಷ ಮೌಲ್ಯದ ಚಿನ್ನದ ಸರ (gold chain) ದೋಚಿದ್ದಾರೆ. ಜೆ.ಸಿ. ರಸ್ತೆಯ ಕಾಳಿಕಾಂಬಾ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಸಂಗಮೇಶ್ವರ ರಸ್ತೆ ನಿವಾಸಿ ಶ್ರೀಕಾಂತ ವಜ್ರ ಶೇಠ್ ಅವರು ಚಿನ್ನದ ಸರ ಕಳೆದುಕೊಂಡವರು. ಫೆಬ್ರವರಿ 12ರ ಮಧ್ಯರಾತ್ರಿ ಮಾರಿಕಾಂಬಾ ದೇವಿಯನ್ನು ವನಕ್ಕೆ ಬಿಡುವ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಜೆ.ಸಿ. ರಸ್ತೆಯ ದೇವಸ್ಥಾನದ ಬಳಿ ನಿಂತಿದ್ದ ಶ್ರೀಕಾಂತ ಅವರ ಕೊರಳಿನಲ್ಲಿದ್ದ ಹವಳದ ಪದಕ ಇರುವ ₹1,05,000 ಮೌಲ್ಯದ 19 ಗ್ರಾಂ ತೂಕದ ಬಂಗಾರದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಾಕು ನಾಯಿಗಳ ಜಗಳ, ಕೈ ಕೈ ಮಿಲಾಯಿಸಿದ ಮಾಲೀಕರು, ಆಗಿದ್ದೇನು?

LATEST NEWS
- ಶಿವಮೊಗ್ಗದಲ್ಲಿ ಶೆಟ್ಟರ ಸಂತೆ, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್, ಏನೇನೆಲ್ಲ ಸ್ಟಾಲ್ಗಳಿವೆ?

- ಸರ್ಕಾರಿ ಅಧಿಕಾರಿಗೆ ಜೈಲು ಶಿಕ್ಷೆ, ಏನಿದು ಪ್ರಕರಣ?

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? – ಇಂದಿನ ಅಡಿಕೆ ಧಾರಣೆ

- ಹೊಟೇಲ್ ಮಾಲೀಕನಿಂದ ಕೊಲೆ, ಕಾರಿನಲ್ಲಿ ಮೃತದೇಹ ಸಾಗಿಸುವಾಗ ಪೊಲೀಸ್ ಬಲೆಗೆ

- Acting Registrar Appointed for Kuvempu University

About The Editor
ನಿತಿನ್ ಆರ್.ಕೈದೊಟ್ಲು
















