ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SAGARA, 16 AUGUST 2024 : ಭಾರಿ ಮಳೆಗೆ ಸಾಗರ ತಾಲೂಕು ಮೋರಿ ಕುಸಿದು ರಸ್ತೆ ಸಂಪರ್ಕ (Road Connectivity) ಕಡಿತಗೊಂಡಿದೆ.
ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಟವಳ್ಳಿ ಹಾಗೂ ರಾಮನಗದ್ದೆ ನಡುವಿನ ಸಂಪರ್ಕ ರಸ್ತೆಯ ಮೋರಿ ಸಂಪೂರ್ಣವಾಗಿ ಕುಸಿದಿದೆ. ಈ ಗ್ರಾಮಗಳ ನಡುವಿನ ಸಂಚಾರ ಕಡಿತಗೊಂಡಿದೆ. ವಿಷಯ ತಿಳಿದು ಎಡಜಿಗಳೆಮನೆ ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಪ್ರವೀಣ, ಸದಸ್ಯ ರವಿ, ಸ್ಥಳೀಯ ವಾರ್ಡ್ ಸದಸ್ಯೆ ಪ್ರಶಾಂತಿ ಉಮೇಶ್ ಭೇಟಿ ನೀಡಿದರು.
ಇನ್ನು, ಬೆಂಕಟವಳ್ಳಿ ಭಾಗದಿಂದ ಹರಿದುಬಂದ ನೀರಿನ ಪ್ರವಾಹ ಮೇಲಿನ ಬಾಳೆಹಳ್ಳಿಯ ಲಕ್ಷ್ಮೀನಾರಾಯಣ ಅವರ ಮನೆಯೊಳಗೆ ನುಗ್ಗಿದೆ. ಪಕ್ಕದ ಕೊಟ್ಟಿಗೆ ಭಾಗಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಭಾಗದಲ್ಲಿ ಹಲವರ ತೋಟದ ಕಾಲುವೆಗಳಲ್ಲಿ ನೀರು ತುಂಬಿ ತೋಟದ ಪಟ್ಟೆಗಳು ಕೊಚ್ಚಿಹೋಗಿವೆ. ಗುಡುಗು ಸಹಿತ ಭಾರಿ ಮಳೆಗೆ ಸಾಗರ ತಾಲೂಕಿನ ವಿವಿಧೆಡೆ ಹಾನಿಯಾಗಿದೆ.

ಇದನ್ನೂ ಓದಿ ⇒ ಗುಡ್ ಮಾರ್ನಿಂಗ್ ಶಿವಮೊಗ್ಗ | ಎಲ್ಲೆಲ್ಲಿ ಏನೇನಾಯ್ತು? ಜಿಲ್ಲೆಯ ಕಂಪ್ಲೀಟ್ ಸುದ್ದಿ ಒಂದೇ ಕ್ಲಿಕ್ನಲ್ಲಿ
LATEST NEWS
- ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?

- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ದರೋಡೆ, ಎಲ್ಲಿ? ಆಗಿದ್ದೇನು?

- ಎಸ್ಸೆಸ್ಸೆಲ್ಸಿ ಪರೀಕ್ಷೆ, 192 ವಿದ್ಯಾರ್ಥಿಗಳು ಗೈರು, ಹೇಗಿತ್ತು ಮೊದಲ ದಿನದ ಪರೀಕ್ಷೆ?

- ಕುಡಿಗೆರೆಯಲ್ಲಿ ಅಧಿಕಾರಿಗಳ ದಾಳಿ, ಮೂವರ ವಿರುದ್ಧ ದಾಖಲಾಯ್ತು ಕೇಸ್, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತೂ ಬರುತ್ತಾ ಮಳೆ?

About The Editor
ನಿತಿನ್ ಆರ್.ಕೈದೊಟ್ಲು














