ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 11 NOVEMBER 2023
SAGARA : ಹೊಸನಗರ ತಾಲೂಕು ನಗರ ಹೋಬಳಿ ಬಿದನೂರಿನ ಕೊಪ್ಪಲು ಮಠದಲ್ಲಿರುವ ಕೆಳದಿ ಅರಸರ (Keladi kings) ಐತಿಹಾಸಿಕ ಸ್ಮಾರಕಗಳನ್ನು ನಾಶಪಡಿಸಿ ಅಲ್ಲಿಯ ಜಾಗವನ್ನು ಒತ್ತುವರಿ ಮಾಡಲಾಗಿದೆ. ತಕ್ಷಣ ಒತ್ತುವರಿ ತೆರವುಗೊಳಿಸುವುದಲ್ಲದೆ ಸ್ಮಾರಕಗಳನ್ನು ಸಂರಕ್ಷಿಸಿ, ಜೀರ್ಣೋದ್ಧಾರ ಮಾಡಬೇಕು ಎಂದು ಸಾಗರ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಆಗ್ರಹಿಸಿದೆ.
ಸಾಗರ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಮಹಾಸಭಾ ಪದಾಧಿಕಾರಿಗಳು, ಕೊಪ್ಪಲು ಮಠದಲ್ಲಿರುವ ಸ್ಮಾರಕಗಳು ಶಿಥಿಲಗೊಂಡಿದೆ. ವಿಶೇಷವಾಗಿ ಶಿವಪ್ಪನಾಯಕನ ಸಮಾಧಿ ಕೂಡ ಇಲ್ಲಿದ್ದು ಪೂರ್ಣ ಪ್ರಮಾಣದಲ್ಲಿ ಸಂಶೋಧನೆಗೆ ಒಳಪಡಿಸಬೇಕು. ಆದರೆ ಸ್ಮಾರಕಗಳ ಅಂಚಿನವರೆಗೂ ಖಾಸಗಿ ವ್ಯಕ್ತಿಗಳು ಗದ್ದೆ, ತೋಟ ಮೊದಲಾದ ಕೃಷಿ ಚಟುವಟಿಕೆಗೆ ಮಾಡುತ್ತಿರುವುದರಿಂದ ಒತ್ತುವರಿಯಿಂದ ಐತಿಹಾಸಿಕ ಸ್ಮಾರಕಗಳ ಮಹತ್ವ ಕಳೆದು ಹೋಗುತ್ತಿದೆ. ಅಲ್ಲಿಗೆ ಹೋಗುವುದಕ್ಕೆ ರಸ್ತೆಯೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪುರಾತತ್ವ ಇಲಾಖೆಗೆ ಕೋಟೆಯೂ ಸೇರಿದಂತೆ ಈ ಎಲ್ಲ ಐತಿಹಾಸಿಕ ಸ್ಮಾರಕಗಳ ಸಂರಕ್ಷಿಸುವ ಜವಾಬ್ದಾರಿ ಇದೆ. ಆದರೂ ಒತ್ತುವರಿ ತೆರವುಗೊಳಿಸಿಲ್ಲ. ಅಭಿವೃದ್ಧಿಗೆ ಮುಂದಾಗಿಲ್ಲ. ಸ್ಮಾರಕದ ಸುತ್ತಮುತ್ತಲು ನಿಷೇಧಿತ ಪ್ರದೇಶ ಎನ್ನುವ ನಿಯಮವಿದೆ. ಆದರೂ ಗಾಳಿಗೆ ತೂರಲಾಗಿದೆ. ಹಾಗಾಗಿ, ತಕ್ಷಣ ಇದನ್ನು ಗಮನಿಸಿ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ, ಕೆಳದಿ ಅರಸರ ಸ್ಮಾರಕ ಸಂರಕ್ಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ- ಶಿವಮೊಗ್ಗ ಜಿಲ್ಲೆಯ ಪ್ರಗತಿ ಪರಿಶೀಲನೆ, ಸಭೆಯಲ್ಲಿ ಚರ್ಚೆಯಾದ 7 ಪ್ರಮುಖಾಂಶ ಇಲ್ಲಿದೆ
ಈ ವೇಳೆ ಬಂದಗದ್ದೆ ಕೆಳದಿ ಸಂಸ್ಥಾನ ರಾಜಗುರು ಹಿರೇಮಠದ ಡಾ. ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾಸಭಾದ ಕೆ.ವಿ. ಪ್ರವೀಣ್ ಮಾತನಾಡಿದರು. ಮಹಾಸಭಾ ಅಧ್ಯಕ್ಷ ಆರ್. ಶೇಖರಪ್ಪಗೌಡ, ಪ್ರಧಾನ ಕಾಯದರ್ಶಿ ವೀರೇಶ್ ಸೆಡ್ಡಿಕೊಪ್ಪ, ಕೆ.ಆರ್. ಗುರುಪ್ರಸಾದ ಕಾಗೋಡು, ವೀರಭದ್ರಪ್ಪ ಜಂಬಗಿ, ಕವಿತಾ ಜಯಣ್ಣ ಮತ್ತಿತರರು ಇದ್ದರು.
LATEST NEWS
- ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್ ಇನ್ಸ್ಪೆಕ್ಟರ್ ಸಚಿನ್ ಅಂತ್ಯಕ್ರಿಯೆ

- ಇಂದಿನ ಪಂಚಾಂಗ, ಇವತ್ತು ಶುಭ ಸಮಯ ಎಷ್ಟೊತ್ತಿಗಿದೆ? ದಿನ ನಕ್ಷತ್ರ ಯಾವುದು?

- ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

- ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

- ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

About The Editor
ನಿತಿನ್ ಆರ್.ಕೈದೊಟ್ಲು















